ಒಂದು ವರ್ಷದಲ್ಲಿ 5 ಚಲಾನ್ ಲಭಿಸಿದರೆ ಚಾಲನಾ ಪರವಾನಗಿ ರದ್ದು: ಟೋಲ್ ಪ್ಲಾಜಾಗಳನ್ನು ಕಡಿಮೆ ಮಾಡಲು ಕ್ರಮ
ಕೇರಳ ಸರ್ಕಾರವು ಕೇಂದ್ರ ಮೋಟಾರು ವಾಹನ ನಿಯಮಗಳ ತಿದ್ದುಪಡಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದೆ. 2026ರ ಜನವರಿ 1ರಿಂದಲೇ ಅನ್ವಯ ಆಗುವ ಹಾಗೆ ಜಾರಿಗೊಳಿಸಿದೆ. 5 ಅಥವಾ ಹೆಚ್ಚು ಚಲಾನ್ಗಳನ್ನು ಪಡೆದರೆ ಚಾಲನಾ ಪರವಾನಗಿ ರದ್ದುಗೊಳ್ಳಲಿದೆ ಸೇರಿದಂತೆ ಹೊಸ ನಿಯಮಗಳ ವಿವರ ಇಲ್ಲಿದೆ.
ATMಗೆ ತುಂಬಬೇಕಿದ್ದ 1.37 ಕೋಟಿ ಹಣದೊಂದಿಗೆ ಸಿಬ್ಬಂದಿ ಪರಾರಿ; ಕೋರಮಂಗಲ ಪೊಲೀಸರಿಂದ ಹುಡುಕಾಟ
ಕಾನ್ಸ್ಟೇಬಲ್ನಿಂದಲೇ ಸಿಎಂಎಸ್ ಕಂಪನಿಯ ಹಣ ಲೂಟಿ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಕೋರಮಂಗಲ ಠಾಣಾ ವ್ಯಾಪ್ತಿ ಮತ್ತೊಂದು ಹಣ ಲೂಟಿ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗೆ ತುಂಬಲು ಕೊಟ್ಟಿದ್ದ ಹಣದೊಂದಿಗೆ ಹಿಟಾಚಿ ಕಂಪನಿಯ ಸಿಬ್ಬಂದಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ವಿರೋಧಿಸಿದ್ದಾರೆ. ಆದರೆ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡುವುದು ಅವರ ಆಯ್ಕೆ ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವನೆ ಮಾಡಿರುವುದಕ್ಕೆ ಕೆಲವರು ಜಾತಿ ಪ್ರಶ್ನೆ ಮಾಡಿದ್ದು,
ಕಾಲದ ಬಿಕ್ಕಟ್ಟು ಬಿರುಕುಗಳ ನಡುವೆ ರೈತರ ಹೋರಾಟದ ಬೆಳಕು
ಚನ್ನರಾಯಪಟ್ಟಣದ ರೈತರು ಕರ್ನಾಟಕದ ರಾಜಕಾರಣಿಗಳ ಬೆಂಗಳೂರಿನ ವ್ಯಸನವನ್ನೂ, ಲೋಲುಪತೆಯನ್ನೂ ಬೆತ್ತಲೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿರೋಧ ಬಂದಾಗ ಪ್ರಭುತ್ವ ಛೂ ಬಿಡಬಹುದಾದ ಅಪಮಾರ್ಗಗಳಿಗೂ ಸಾಕ್ಷಿಗಳಾಗಿದ್ದಾರೆ. ನಿರಂಕುಶ ಪ್ರಭುತ್ವಗಳಂತೆಯೇ ಪ್ರಜಾಸತ್ತೆಯಲ್ಲೂ ಸಾಂವಿಧಾನಿಕ ದಿಕ್ಸೂಚಿಗೆ ಮರೆ ಮೋಸ ಮಾಡಿ ಅಪವಿತ್ರ ಮೈತ್ರಿಗಳನ್ನು ಕುದುರಿಸಿ ಸಂಪನ್ಮೂಲಗಳ ಲೂಟಿಗೆ ಕೈ ಜೋಡಿಸುವ ಕೇಡಿಗತನ ನಮ್ಮಲ್ಲೂ ಬೇರೂರಿದೆ ಎಂಬುದನ್ನು ಈ ಹೋರಾಟ ಮತ್ತೆ ತೋರಿಸಿಕೊಟ್ಟಿದೆ. ಚನ್ನರಾಯಪಟ್ಟಣದ ಭೂಸ್ವಾಧೀನದ ವಿರುದ್ಧ ರೈತರು ನಡೆಸಿದ ಹೋರಾಟ ಈ ದೇಶದ ಇತಿಹಾಸದ ಮೈಲುಗಲ್ಲುಗಳಲ್ಲೊಂದು. ಇದರೊಂದಿಗೇ ಈ ಹೋರಾಟಕ್ಕೆ ಪ್ರಭುತ್ವದ ಪ್ರತಿಕ್ರಿಯೆ, ಪ್ರಜಾಸತ್ತೆಯ ಮುಖವಾಡದೊಳಗೆ ಅವಿತಿರುವ ಪ್ರಭುತ್ವದ ಕೇಡಿಗತನವನ್ನೂ ಅನಾವರಣಗೊಳಿಸಿದೆ. ನಮಗೊಂದು ಸಂವಿಧಾನವಿದೆ. ಆ ಸಂವಿಧಾನ ನಮಗೆ ನಾವೇ ಕೊಟ್ಟುಕೊಂಡಿದ್ದೇವೆ. ಈ ಮೂಲಕ ನಾವು ಇತಿಹಾಸದುದ್ದಕ್ಕೂ ಮುಂದುವರಿದುಕೊಂಡು ಬಂದಿದ್ದ ನಿರಂಕುಶ ಪ್ರಭುತ್ವಗಳ ಮಾದರಿಗೆ ವಿದಾಯ ಹೇಳಿದ್ದೇವೆ ಎಂಬ ನಂಬಿಕೆ, ಭರವಸೆಯ ದಾಖಲೆ ಅದು. ಎಲ್ಲಾ ನಿರ್ಧಾರಗಳಲ್ಲೂ ನಾವು ಪಾಲ್ಗೊಳ್ಳುತ್ತೇವೆ ಮತ್ತು ಎಲ್ಲ ನಿರ್ಧಾರಗಳೂ ನಮ್ಮ ಸಾಮುದಾಯಿಕ ಒಳಿತಿಗಾಗಿ ಎಂಬ ನಂಬಿಕೆಯಿಂದಲೇ ಸಂವಿಧಾನ ಹುಟ್ಟಿರುವುದು. ಈ ಒಳಿತಿನ ನಿರ್ಧಾರಗಳಿಗೆಂದೇ ನಾವೊಂದು ಪ್ರತಿನಿಧಿ ಸಭೆಯನ್ನು ಸೃಷ್ಟಿಸಿದ್ದೇವೆ. ನಾವೇ ಮತ ಹಾಕಿ ನಮ್ಮ ಪರವಾಗಿ ನಮ್ಮ ಬಾಳು ಹಸನುಗೊಳಿಸುವ ನಿರ್ಧಾರ, ನೀತಿ ಮತ್ತು ಕಾರ್ಯಕ್ರಮ ಅನುಷ್ಠಾನಗಳನ್ನು ಈ ಮಂದಿ ನಡೆಸಿಕೊಂಡು ಹೋಗುತ್ತಾರೆ ಎಂಬ ಪರಸ್ಪರ ನಂಬಿಕೆಯ ಒಪ್ಪಂದ ಅದು. ಸುದೀರ್ಘ ಹೋರಾಟದ ಅವಧಿಯಲ್ಲಿ ರಾಜಕೀಯ ನೇತಾರರ ವರ್ತನೆಯೂ ಒಂದು ಪಾಠ. ವಿರೋಧ ಪಕ್ಷದಲ್ಲಿದ್ದಾಗ ಸಂಪೂರ್ಣ ಬೆಂಬಲ ಪ್ರಕಟಿಸಿದ ಪಕ್ಷ, ನಾಯಕರು ಅಧಿಕಾರಕ್ಕೆ ಬಂದಾಗ ತಾವೇ ವಿರೋಧಿಸಿದ್ದ ಹಿಂದಿನ ಸರಕಾರದ ನಿರ್ಧಾರಗಳನ್ನು ಮುಂದುವರಿಸಿದ್ದು ಅಚ್ಚರಿ ಮೂಡಿಸಬಾರದು. ಸರಕಾರ ಎಂಬುದು ಸಾತತ್ಯದ ಸಂಕೇತ ಎಂದು ಸಂವಿಧಾನ ಹೇಳಿದೆ. ಆದರೆ ಅದು ಸದಾಶಯದ ನಂಬಿಕೆಯಲ್ಲಿ ಹುಟ್ಟಿದ್ದು. ಜನವಿರೋಧಿ ನಿರ್ಣಯಗಳ ಸಾತತ್ಯ ಎಂಬುದು ಅರ್ಥವಾಗಲು ಇಂತಹ ನಡವಳಿಕೆ ಬೇಕಾಯಿತು. ಸಂವಿಧಾನದ ಆಸರೆಯಲ್ಲಿ ಜನಶಕ್ತಿ ದೃಢವಾಗುವುದನ್ನು ನಿಷ್ಫಲಗೊಳಿಸಲು ಏನು ಮಾಡಬಹುದೆಂದು ಪ್ರಭುತ್ವ ಸದಾ ಯೋಚಿಸುತ್ತಿರುತ್ತದೆ. ಯಾವ ಯಾವ ಬಗೆಯಲ್ಲಿ ಇದು ಪ್ರಕಟವಾಗುತ್ತದೋ ಅದನ್ನು ನಿಷ್ಫಲಗೊಳಿಸುವ ತಂತ್ರಗಾರಿಕೆಯನ್ನು ಮೊದಲು ಕಲಿಯುತ್ತದೆ. ಇದೇ ಮೇಧಾವಿತನವನ್ನು ಜನಪೋಷಕ ಚಿಂತನೆಗಳಿಗೆ ವ್ಯಯ ಮಾಡಿದ್ದರೆ ಈ ದೇಶ ಹೀಗಿರುತ್ತರಲಿಲ್ಲ! ಮುಖ್ಯ ಸಮಸ್ಯೆ ಇರುವುದು, ಜಾಗತಿಕ ಆರ್ಥಿಕ ನೀತಿಯ ಪ್ರಭಾವಕ್ಕೊಳಗಾದ ನಮ್ಮ ಸರಕಾರ/ಪಕ್ಷಗಳು ಅದರ ಬೇಡಿಕೆಗಳನ್ನು ಈಡೇರಿಸಲು ಟೊಂಕಕಟ್ಟಿ ನಿಲ್ಲುವ ಚರ್ಯೆಯಲ್ಲಿ. ಈ ಬಹುತೇಕ ಡಿಮಾಂಡುಗಳಿಗೆ ಸಂವಿಧಾನದ ಆಶಯಗಳೇ ಬಲು ದೊಡ್ಡ ತಡೆಗೋಡೆ. ಜನ ಪ್ರತಿರೋಧ ಈ ನೆಲೆಯಿಂದ ಹುಟ್ಟಿದೆ. ಆದರೆ ಒಂದೊಂದೇ ಇಟ್ಟಿಗೆ ಸಡಿಲಿಸುತ್ತಾ ಇಷ್ಟಿಷ್ಟೇ ಹಿರಿದು ಕಾರ್ಪೊರೇಟ್ ಬಾಯಿಗೆ ಹಾಕುವ ಕಂತು ಕಂತು ತಂತ್ರಗಾರಿಕೆಯಲ್ಲಿ (ಕೇಸ್ ಬೈ ಕೇಸ್) ಎಲ್ಲಾ ಪ್ರತಿರೋಧಗಳೂ ಸ್ಥಳೀಯವಾಗಿಯೇ ಹುಟ್ಟಿ ಸಾಯುವ ಸ್ಥಿತಿ ಇದೆ. ಇದನ್ನು ನೀತಿಯ ವಿರುದ್ಧದ ಸೂಚಿಯಾಗಿ ಬೃಹತ್ ಆಂದೋಲನವನ್ನು ಸೃಷ್ಟಿಸಲು ನಮಗೆ ಸಾಧ್ಯವಾಗಿಲ್ಲ. ಈ ಸಾಲಿಡಾರಿಟಿಯ ಅಳ್ಳಕತನ ಪ್ರಭುತ್ವದ ಖದೀಮತನಕ್ಕೆ ಧೈರ್ಯ ನೀಡಿದೆ. ಜಾಗತೀಕರಣದ ಬಳಿಕ ನವಮಾಧ್ಯಮಗಳ ವಿಶ್ವವ್ಯಾಪಿತನದ ಕಾರಣದಿಂದ ಇಶ್ಯೂಗಳು ಹರಡುವುದೂ ಸುಲಭ. ಅವುಗಳ ಆಯುಸ್ಸೂ ಕಡಿಮೆಯಾಗಿರುವುದು ಆಕಸ್ಮಿಕವಲ್ಲ. ಜಾಗತೀಕರಣದ ಕಾರ್ಪೊರೇಟ್ ದೃಢೀಕರಣದ ಪಾಲುದಾರನಾಗಿ ಪ್ರಭುತ್ವ, ಬಹುತೇಕ ಮುಖ್ಯ ವಾಹಿನಿ ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ಒಡತನದ ಮಾಧ್ಯಮಗಳಿವೆ. ಕುಮಾರವ್ಯಾಸನಲ್ಲಿ ವ್ಯಂಗ್ಯದ ಒಂದು ವಿವರ ಬರುತ್ತದೆ. ಮಹಾಭಾರತದ ಯುದ್ಧದ ಬಳಿಕ ಯುಧಿಷ್ಠಿರ ದುರ್ಯೋಧನನ ಅರಮನೆಯನ್ನೂ, ಭೀಮ, ದುಶ್ಯಾಸನನ ಅರಮನೆಯನ್ನೂ ಹೊಕ್ಕರು ಎಂಬ ವಿವರ. ಅರ್ಥಾತ್ ಅದೇ ಬಗೆಯ ಅಧಿಕಾರ ಗ್ರಹಣ ಮಾಡಿದರು ಅಂತ. ಹಾಗೆಯೇ ಯಕ್ಷರು ದುರ್ಯೋಧನನ್ನು ಬಂಧಿಸಿ ಒಯ್ದಾಗ ಕಾಡಲ್ಲಿದ್ದ ಧರ್ಮರಾಯ ಅವನನ್ನು ಬಿಡಿಸಲು ಸಹೋದರರಲ್ಲಿ ಹೇಳುತ್ತಾನೆ. ‘‘ದುರ್ಯೋಧನ ನಮಗೆ ಅನ್ಯಾಯ ಮಾಡಿದವನು. ಸಾಯಲಿ’’ ಎಂದು ಭೀಮ ಹೇಳುತ್ತಾನೆ. ಆಗ ಧರ್ಮರಾಯ, ‘‘ನಮ್ಮೊಳಗೆ ಅವರು ನೂರು, ಅವರ ವಿರುದ್ಧ ನಾವು ಐವರು. ಮೂರನೆಯವನಿಗೆ ನಾವು ನೂರೈದು ಮಂದಿ’’ ಎನ್ನುತ್ತಾನೆ. ನಮ್ಮ ವಿಧಾನ ಸಭೆಗೆ ಇದನ್ನು ಹೋಲಿಸುತ್ತಾ ಲಕ್ಷ್ಮೀಶ ತೋಳ್ಪಾಡಿಯವರು ಈ ಕತೆಯನ್ನು ಉಲ್ಟಾ ಮಾಡಿ ‘‘ವಿಧಾನ ಸಭೆಯೊಳಗೆ ಅವರು-ಇವರು ಹಣಾಹಣಿಯ ಎದುರಾಳಿಗಳು. ಜನತೆಯ ಸುಲಿಗೆಯ ಪ್ರಶ್ನೆ ಬಂದಾಗ ಅವರು 224 ಮಂದಿಯೂ ಒಂದಾಗುತ್ತಾರೆ’’ ಎಂದು ಹೇಳಿದ್ದರು. ಚನ್ನರಾಯಪಟ್ಟಣದ ಹೋರಾಟದಲ್ಲಿ ಪ್ರಜಾಸತ್ತೆಯ ವಿರೋಧ ಪಕ್ಷಗಳ ಪ್ರತಿನಿಧಿಗಳೂ ಜೊತೆಗೆ ನಿಲ್ಲಲಿಲ್ಲ. ಯಾಕೆಂದರೆ ಅವರೂ ಈ ಕಾರ್ಪೊರೇಟ್ ದೃಢೀಕರಣದ ಪಾಲುದಾರರು. ಈ ಚಳವಳಿಯನ್ನು ಇಷ್ಟು ದಿನ ಉಳಿಸಿ ಅದು ವ್ಯಾಪಕವಾಗುತ್ತಿದ್ದಂತೆ ಸರಕಾರ ಈ ಸ್ವಾಧೀನವನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದಾಗಲೂ ತನ್ನ ಒಳ ಹುನ್ನಾರವನ್ನು ಬಿಟ್ಟುಕೊಡಲಿಲ್ಲ ಎಂಬುದು ಇತ್ತೀಚಿನ ಸರಕಾರದ ನಡಾವಳಿಗಳಲ್ಲಿ ಗೊತ್ತಾಗುತ್ತದೆ. ಏನಿದರ ಅರ್ಥ? ಕಾರ್ಪೊರೇಟೀಕರಣದ ಎಂಟ್ರಿ ಪಾಯಿಂಟೇ ವಿದೇಶೀ ಹೂಡಿಕೆ, ಅದಕ್ಕೆ ಬೇಕಾದ ಭೂಸ್ವಾಧೀನ, ಉಚಿತ ನೀರು, ತೆರಿಗೆ ವಿನಾಯಿತಿ.. ಹೀಗೆ ಈ ಕೆಂಪು ಹಾಸು ಮುಂದುವರಿಯುತ್ತದೆ. ಭಾರತದ ಬಹುತೇಕ ‘ವಿದೇಶೀ ಹೂಡಿಕೆಗಳೂ’ ನಮ್ಮದೇ ನೆಲದ ಖದೀಮರು ವಿದೇಶಗಳಲ್ಲಿ ಸ್ಥಾಪಿಸಿದ ಕಂಪೆನಿಗಳೇ! ಹೀಗೆ ಹಿಂಬಾಗಿಲಿನಿಂದ ಹೋಗಿ ಹೆಬ್ಬಾಗಿಲಲ್ಲಿ ಬರುವ ಹೂಡಿಕೆಗಳೇ ಜಾಸ್ತಿ. ಮೊನ್ನೆ ಮೊನ್ನೆ ಕರ್ನಾಟಕದ ಸಚಿವರು ದೆವೋಸ್ ಶೃಂಗ ಸಭೆಗೆ ಹೋಗಿ ಟಾಟಾದವರ ಜೊತೆ ಒಪ್ಪಂದ ಮಾಡಿಕೊಂಡರೆ ಮಹಾರಾಷ್ಟ್ರದ ಮುಖ್ಯಮಂತ್ರಿ ತನ್ನ ಸಚಿವ ಸಹೋದ್ಯೋಗಿಯ ಕಂಪೆನಿ ಜೊತೆ ದೆವೋಸ್ನಲ್ಲಿ ಒಪ್ಪಂದ ಮಾಡಿಕೊಂಡಿರುವ ಪ್ರಹಸನ ನಡೆದಿದೆ. ಇನ್ನೊಂದೆಡೆ ರಾಜೀವ ಚಂದ್ರಶೇಖರ್ ಅವರಿಂದ ಹಿಡಿದು ಇನ್ಫೋಸಿಸ್ ವರೆಗೆ ಬಿಟ್ಟಿ ಸಿಕ್ಕಿದ ಈ ಕೈಗಾರಿಕಾ ವಲಯದ ಭೂಮಿಯನ್ನು ಯಾವ ಹೂಡಿಕೆಯೂ ಮಾಡದೆ ಮಾರಿದ ಪ್ರಕರಣಗಳೂ ಬಯಲಾಗಿವೆ. ನಿರ್ದಿಷ್ಟ ಉದ್ದೇಶಕ್ಕೆಂದು ಸ್ವಾಧೀನವಾದ ಜಮೀನಿನಲ್ಲಿ ಸಂಬಂಧವೇ ಇಲ್ಲದ ವಿಷಯದ ಕಂಪೆನಿಗಳಿಗೆ ಜಮೀನು ಮಂಜೂರು ಮಾಡಿರುವ ಪ್ರಕರಣಗಳೂ ನಮಗೆ ಗೊತ್ತು. ಅರ್ಥಾತ್ ಈ ಭೂಸ್ವಾಧೀನ ಎನ್ನುವುದು ಸ್ಥಳೀಯ ರಾಜಕೀಯ ದಿಂಡಾಳುಗಳು ಹಂಚಿ ಹೊಡೆಯಲು ಇರುವ ಹಾದಿಯಾಗಿದೆ. ಆದ್ದರಿಂದಲೇ ಚನ್ನರಾಯಪಟ್ಟಣದ ರೈತ ಹೋರಾಟ ಈ ಒಂದು ಹಗರಣವನ್ನು ಅನಾವರಣಗೊಳಿಸಿದೆ. ರಾಜ್ಯದ ಒಟ್ಟಾರೆ ಭೂಸ್ವಾಧೀನದ ಬಗ್ಗೆ ಒಂದು ಲೆಕ್ಕ ಪರಿಶೋಧನೆ ನಡೆಸಿದರೆ ಸತತವಾಗಿ ಆಡಳಿತ ನಡೆಸಿದ ಎಲ್ಲಾ ಸರಕಾರಗಳು ಈ ಏIಂಆಃಯ ಮುಖಾಂತರ ನಕಲಿ ಕೈಗಾರಿಕಾಭಿವೃದ್ಧಿ ಹೆಸರಿನಲ್ಲಿ ಜಮೀನು ಕೊಳ್ಳೆ ಹೊಡೆದದ್ದು ಬಯಲಾದೀತು. ಮೊನ್ನೆ ಮೊನ್ನೆ ಸರಕಾರ ನಡೆಸಿರುವ ಹುನ್ನಾರ ಗಮನಿಸಿ! ಸರಕಾರವೊಂದು ತನ್ನ ಮುಷ್ಟಿಯೊಳಗಿರುವುದನ್ನು ಸುತಾರಾಂ ಬಿಟ್ಟುಕೊಡದ ಮನೋ ಧರ್ಮವನ್ನು ಅನಾವರಣಗೊಳಿಸಿದೆ. ಇಡೀ ಸರಕಾರಿ ಘೋಷಣೆ ಅಪ್ಪಟ ಬ್ಲ್ಯಾಕ್ಮೇಲ್ ಮಟ್ಟಕ್ಕಿಳಿದಿದೆ. ವಿಕೇಂದ್ರೀಕೃತ ಪ್ರದೇಶಾಭಿವೃದ್ಧಿ ಎಂಬುದು ಒಂದು ಘೋಷಣೆಗಷ್ಟೇ ಸೀಮಿತವಾದ ನೀತಿ. ಪಕ್ಕದ ತಮಿಳುನಾಡಲ್ಲಿ ಏನಿಲ್ಲವೆಂದರೂ 10-15 ಕೈಗಾರಿಕಾ ಹಬ್ಗಳಿವೆ. ಇವೆಲ್ಲವೂ ಅಪಾರ ಸಂಖ್ಯೆಯ ಕಾರ್ಮಿಕರನ್ನು ಪೋಷಿಸಿದೆ. ಅಷ್ಟೇಕೆ ತಮಿಳುನಾಡಿನಲ್ಲಿರುವ ಸಣ್ಣ ಕೈಗಾರಿಕೆಗಳ ಒಟ್ಟು ಸಂಖ್ಯೆ ಉತ್ತರದ ಐದಾರು ರಾಜ್ಯಗಳ ಒಟ್ಟು ಘಟಕಗಳಿಗಿಂತ ಜಾಸ್ತಿ. ಅಲ್ಲಿನ ವಿಕೇಂದ್ರೀಕರಣದ ಮಾದರಿಯನ್ನು ಇಲ್ಲಿ ಮಾಡಲು ನಮ್ಮ ಸರಕಾರಗಳು ಏದುಸಿರು ಬಿಡುತ್ತಿವೆ. ಬೆಂಗಳೂರು ಸುತ್ತಮುತ್ತವೇ ಕೈಗಾರಿಕೆಗಳಿಗೆ ಬೇಡಿಕೆ, ಹೂಡಿಕೆಗೆ ಬೇಡಿಕೆ ಎಂಬ ವಿದ್ಯಮಾನ ಅಪಾಯಕಾರಿ. ರಾಜ್ಯದ ಮೂಲೆ ಮೂಲೆಯ ಜಿಲ್ಲೆಗಳಲ್ಲೂ ಹೂಡಿಕೆ ಮತ್ತು ಉದ್ಯಮಗಳು ಸ್ಥಾಪಿತವಾಗಲು ಬೇಕಾದ ರಾಜಕೀಯ ಇಚ್ಛಾಶಕ್ತಿಯನ್ನು ಯಾವ ಸರಕಾರಗಳೂ ತೋರಿಸಿಲ್ಲ. ಚನ್ನರಾಯಪಟ್ಟಣದ ರೈತರು ಕರ್ನಾಟಕದ ರಾಜಕಾರಣಿಗಳ ಬೆಂಗಳೂರಿನ ವ್ಯಸನವನ್ನೂ, ಲೋಲುಪತೆಯನ್ನೂ ಬೆತ್ತಲೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಪ್ರತಿರೋಧ ಬಂದಾಗ ಪ್ರಭುತ್ವ ಛೂ ಬಿಡಬಹುದಾದ ಅಪಮಾರ್ಗಗಳಿಗೂ ಸಾಕ್ಷಿಗಳಾಗಿದ್ದಾರೆ. ನಿರಂಕುಶ ಪ್ರಭುತ್ವಗಳಂತೆಯೇ ಪ್ರಜಾಸತ್ತೆಯಲ್ಲೂ ಸಾಂವಿಧಾನಿಕ ದಿಕ್ಸೂಚಿಗೆ ಮರೆ ಮೋಸ ಮಾಡಿ ಅಪವಿತ್ರ ಮೈತ್ರಿಗಳನ್ನು ಕುದುರಿಸಿ ಸಂಪನ್ಮೂಲಗಳ ಲೂಟಿಗೆ ಕೈ ಜೋಡಿಸುವ ಕೇಡಿಗತನ ನಮ್ಮಲ್ಲೂ ಬೇರೂರಿದೆ ಎಂಬುದನ್ನು ಈ ಹೋರಾಟ ಮತ್ತೆ ತೋರಿಸಿಕೊಟ್ಟಿದೆ. ಆದರೆ ಇದರ ವಿರುದ್ಧ ಸಾಂವಿಧಾನಿಕ ರೀತಿಯ ಹೋರಾಟಗಳನ್ನು ಸಂಘಟಿಸಲು ಹೊರಟಾಗ ಒದಗುವ ವಿಘ್ನಗಳ ಬಗ್ಗೆಯೂ ನಾವು ಯೋಚಿಸಬೇಕಾಗಿದೆ. ಮೊದಲನೆಯದಾಗಿ ಈಗಿರುವ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಕಾರ್ಪೊರೇಟೀಕರಣದ ಸಮ್ಮೋಹನಕ್ಕೆ ಒಳಗಾಗಿ ಅವುಗಳ ಏಜೆಂಟರಂತೆ ವರ್ತಿಸುತ್ತಿವೆ. ಸಂಶಯವೇ ಇಲ್ಲ. ಭಾಜಪದ ವಿಚಾರದಲ್ಲಿ ಈ ಪಕ್ಷದ ಸಹಸಂಘಟನೆಗಳೂ ಈ ಪಕ್ಷದ ಹಿತಾಸಕ್ತಿಯನ್ನು ಸಮರ್ಥಿಸಲು, ರಕ್ಷಿಸಲು ಟೊಂಕ ಕಟ್ಟಿವೆ. ಇವುಗಳಲ್ಲಿ ಕಾರ್ಪೊರೇಟ್ ಒಡೆತನದ ಮಾಧ್ಯಮಗಳೂ ಸೇರಿವೆ! ಸಾಮಾಜಿಕ ಮಾಧ್ಯಮಗಳ ಸಮ್ಮೋಹನದ ಕಾರಣಕ್ಕೆ ಕ್ಷಣಿಕ ಮಾಹಿತಿ ಸ್ಫೋಟ ಆದರೂ, ಅದನ್ನು ಸತತವಾಗಿ ಉಳಿಸಿಕೊಂಡು ವ್ಯಾಪಕ ಆಂದೋಲನವನ್ನಾಗಿ ರೂಪಿಸಲು ಸಾಧ್ಯವಾಗುತ್ತಿಲ್ಲ. ಈ ಚದುರುವಿಕೆ ನಮ್ಮ ಕಾಲದ ಲಕ್ಷಣವಾಗಿದೆ. ಇದರೊಂದಿಗೇ ಪ್ರಾಣಿ ಪ್ರಪಂಚದ ವರ್ತನಾ ಚರ್ಯೆಯೊಂದು ನಮ್ಮನ್ನು ಆವರಿಸಿಕೊಂಡಂತಿದೆ. ಜಿಂಕೆ ಮಂದೆಯ ಮೇಲೆ ಒಂದು ಹುಲಿ ದಾಳಿ ನಡೆಸಿ ಒಂದು ಜಿಂಕೆಯನ್ನು ಹಿಡಿದರೆ ಇಡೀ ಹಿಂಡು ಕ್ಷಣ ವಿಚಲಿತವಾಗಿ ಚದುರಿ ಮತ್ತೆ ನಿರುಮ್ಮಳವಾಗಿ ಮೇಯುತ್ತವೆ. ಸಂಘಟಿತವಾಗಿ ಎದುರಿಸುವ ವರ್ತನೆ ಅವುಗಳ ಕೋಶದಲ್ಲೇ ಇಲ್ಲ. ಮಾನವ ಸಮುದಾಯ ಹೀಗಿಲ್ಲ. ಅದು ಚಿತ್ರ ವಿಚಿತ್ರ ಮುದ್ರೆಗಳಲ್ಲಿ ಸಂಘಟಿತವಾಗುತ್ತಲೇ ಇರುತ್ತದೆ. ಆ ಕಾರಣಕ್ಕೆ ಕಿತ್ತಾಡುವುದು, ಹೋರಾಡುವುದು ಮಾಡುತ್ತಲೇ ಇರುತ್ತದೆ. ಆದರೆ ಇಂದ್ರಿಯಗಳಿಗೆ ಜೋಮು ಹಿಡಿದರೆ, ಸ್ಪರ್ಶಜ್ಞಾನ ಇಲ್ಲವಾದರೆ? ಈ ಸಂಘಟಿತ ಪ್ರತಿಕ್ರಿಯೆ ಇರುವುದೇ ಇಲ್ಲ. ಅಲ್ಲೆನೋ ಆದರೆ ನಮಗೇನು ಎಂಬ ಮನಃಸ್ಥಿತಿ ಆವರಿಸುತ್ತದೋ ಏನೋ. ಇದರಲ್ಲೂ ಒಂದು ವೈರುಧ್ಯ ನಮ್ಮಲ್ಲಿ ನೋಡುತ್ತಿದ್ದೇವೆ. ಧರ್ಮ, ಸಂಸ್ಕೃತಿಯಂತಹ ಭಾವನಾತ್ಮಕ ವಿಚಾರಗಳಲ್ಲಿ ಸಂಘಟಿತರಾಗುವ ನಮ್ಮ ದೇಶವಾಸಿಗಳು ತಮ್ಮ ಜೀವನೋಪಾಯದ ಗುರುತಿನ ಮೂಲಕ ಸಂಘಟಿತರಾಗುತ್ತಲೂ ಇಲ್ಲ. ಅದರ ಬಲಿಪಶುಗಳ ಬಗ್ಗೆ ಸಾಲಿಡಾರಿಟಿ ತೋರುತ್ತಲೂ ಇಲ್ಲ. ಈ ಭಾವನಾತ್ಮಕ ವಿಘಟನೆ ಬಲು ಆತಂಕದ ವಿಷಯ. ಈ ವ್ಯವಸ್ಥಿತ ವಿಸ್ಮತಿ ಮುಂದಿನ ದಿನಗಳಲ್ಲಿ ಹೆಚ್ಚಾಗಲೂ ಬಹುದು. ದಶಕಗಳ ಹಿಂದೆ ಉದ್ಯೋಗ, ರೈತಾಪಿ ಬದುಕು, ಕಾರ್ಮಿಕ ಹಿತಾಸಕ್ತಿಯ ವಿಷಯಗಳು ಸೂಜಿಕಲ್ಲಂತೆ ಜನರನ್ನು ಸೆಳೆದು ಸಂಘಟಿತರಾಗುವಂತೆ ಮಾಡಿದ ಪುರಾವೆಗಳಿವೆ. ಆದರೆ ಈಗ ಅವು ಅಂಥಾ ಪ್ರಭಾವ ಬೀರದಿರುವುದಕ್ಕೆ ಇರುವ ಕಾರಣಗಳನ್ನು ನೋಡಬೇಕು. ನಮ್ಮ ಮಧ್ಯಮ ವರ್ಗ ಬಿಡಿ, ಹೊಸ ತಲೆಮಾರಿನ ಯುವಕರೂ ನಗರೀಕರಣ ಸೃಷ್ಟಿ ಮಾಡಿರುವ ಅಭದ್ರ; ಆದರೆ ಏಣಿ ಏರುವ ಭ್ರಮೆಯ ಉದ್ಯೋಗಗಳಿಗೆ ಜೋತು ಬಿದ್ದು ಸಮಷ್ಟಿಯಾಗಿ ಸೇರಲು ಬಯಸುತ್ತಲೇ ಇಲ್ಲ, ಸ್ವಿಗ್ಗಿ, ರಾಪಿಡೋ ಸಹಿತ ಹಲವು ಹೊಸ ಜೀವನೋಪಾಯಗಳು ವ್ಯಕ್ತಿಗತ ಓಟದ ತುರುಸಿನ ಮೇಲೆ ನಿಂತಿದೆ. ಇವರನ್ನು ನಿಲ್ಲಿಸಿ ಏನನ್ನಾದರೂ ಹೇಳುವುದೇ ಸಾಧ್ಯವಾಗುತ್ತಿಲ್ಲ. ಒಂದು ಬಲು ದೊಡ್ಡ ಪಲ್ಲಟಕ್ಕೆ ನಮ್ಮ ನಾಗರಿಕತೆ ಒಡ್ಡಿಕೊಂಡಿದೆ ಅನ್ನಿಸುತ್ತದೆ. ಚನ್ನರಾಯಪಟ್ಟಣದ ಹೋರಾಟ ಈ ಒಂದು ನಾಜೂಕು ಬಿರುಕನ್ನು ನಮ್ಮೆದುರು ಇಟ್ಟಿದೆ. ಜೀವನೋಪಾಯಗಳ obsessioಟಿನಲ್ಲಿ ರಾಜಕೀಯದ ಆಸಕ್ತಿಯಾಗಲೀ, ಸಮುದಾಯದ ಬದುಕು ಬವಣೆಯ ಬಗ್ಗೆ ಚರ್ಚೆಯಾಗಲೀ ಸಾಧ್ಯವೇ ಇಲ್ಲದ ಸ್ಥಿತಿ ಇದು. ಹೋರಾಟ ಕಟ್ಟುವ ಬಗ್ಗೆ ಯೋಚಿಸುವ ಮೊದಲು, ವಿಚಿತ್ರ ಜೀವನೋಪಾಯಗಳ ಸುಳಿಯಲ್ಲಿ ಸಿಕ್ಕಿ, ಅಲ್ಲೂ ಅಷ್ಟಿಷ್ಟು ಮೈ ಮನಸ್ಸು ಸಡಿಲಿಸುವ ಮಾಧ್ಯಮಗಳ ಹುಸಿ ಸುಖದಲ್ಲಿರುವ ವಿರೋಧಾಭಾಸದ ಬಗ್ಗೆ ಆಳ ಅಧ್ಯಯನ ಬೇಕಿದೆ. ಪ್ರಭುತ್ವವೇ ಈ ಹುಸಿ ಸಂತೃಪ್ತಿಯನ್ನು ಪ್ರೋತ್ಸಾಹಿಸುತ್ತಿರುವ ಬಗ್ಗೆ ಹೇಳಬೇಕಿದೆ. ಎಚ್ಚೆತ್ತ ಜನಸಮುದಾಯ ಪ್ರಭುತ್ವಕ್ಕೆ ಸದಾ ಕಂಟಕ ಪ್ರಾಯ. ಈ ಅಫೀಮು ತಿಂದಂತಿರುವ ಜನಸ್ತೋಮ ಇದ್ದಷ್ಟೂ ಪ್ರಭುತ್ವ ಸುರಕ್ಷವಾಗಿರುತ್ತದೆ. ‘‘ರೀಲ್ಸ್ ಮಾಡಿ, ಗೇಮ್ಸ್ ಸೃಷ್ಟಿ ಮಾಡಿ’’ ಎಂದು ಮೋದಿ ಸುಮ್ಮನೇ ಹೇಳಲಿಲ್ಲ
ಸದನ ಕದನ 3 ನೇ ದಿನ: ಲೋಕಭವನಕ್ಕೆ ಕೈ ಪಡೆ ಚಲೋ; ವಿಧಾನಸೌಧದಲ್ಲಿ ಕಮಲ ದಳ ಪ್ರತಿಭಟನೆ
ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಗದ್ದಲ ಮುಂದುವರೆಯುವ ಸಾಧ್ಯತೆ ಇದೆ. ಮಂಗಳವಾರ ಕಾಂಗ್ರೆಸ್ ರಾಜಭವನ ಚಲೋ ಹಮ್ಮಿಕೊಂಡಿದೆ. ಬಿಜೆಪಿ ಕೂಡ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಹೋರಾಟಗಳಿಂದಾಗಿ ಸದನದಲ್ಲಿ ಕಲಾಪಕ್ಕೆ ಅಡ್ಡಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜನರ ಸಮಸ್ಯೆಗಳ ಚರ್ಚೆಗಿಂತ ರಾಜಕೀಯ ಹೈಡ್ರಾಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ನಿರೀಕ್ಷೆ ಇದೆ.
Winter Storm: 17,000 ವಿಮಾನಗಳು ದಿಢೀರ್ ಹಾರಾಟ ನಿಲ್ಲಿಸಿದ್ದು ಏಕೆ? ಅಮೆರಿಕ ಪರಿಸ್ಥಿತಿ ಭೀಕರ...
ಅಮೆರಿಕ ಜಗತ್ತಿನ ದೊಡ್ಡಣ್ಣ... ಅಮೆರಿಕ ಜಗತ್ತಿನ ಶ್ರೀಮಂತ ದೇಶ... ಅಮೆರಿಕ ಮನಸ್ಸು ಮಾಡಿದರೆ ಈ ಜಗತ್ತಿನಲ್ಲಿಏನು ಬೇಕಾದರೂ ಮಾಡಬಹುದು... ಹೀಗೆ ಅಮೆರಿಕ ಬಗ್ಗೆ ಎಲ್ಲರೂ ದೊಡ್ಡದಾಗಿ ಮಾತನಾಡುವುದನ್ನ ನಾವು &ನೀವು ಹಾಗೂ ಬಹುತೇಕರು ಕೇಳೇ ಇರುತ್ತಾರೆ. ಆದರೆ ಪ್ರಕೃತಿ ಮುಂದೆ ದೊಡ್ಡಣ್ಣ ಅಲ್ಲ, ಅವರಣ್ಣ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಬಡವರ ದುಡಿಮೆಹಣ ನಯವಂಚಕರ ಪಾಲು, ಅಯ್ಯೋ ಏನಿದು ಗೋಳು?
ಬೆಳಗಾವಿ ಜಿಲ್ಲೆಯಲ್ಲಿ ಹಣ ದುಪ್ಟಟ್ಟು, ಚೀಟಿ ವ್ಯವಹಾರ, ಕಡಿಮೆ ಬಡ್ಡಿಗೆ ಸಾಲ ಕೊಡಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಜನರು ಮುಗ್ಧತೆಯಿಂದ ಹಣ ಹೂಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಡಬಲ್ ಹಣ, ಸಾಮಗ್ರಿ ಖರೀದಿ, ಚೈನ್ಲಿಂಕ್, ಅಗರಬತ್ತಿ ಉದ್ಯೋಗದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆ, ಡಿಸಿ ಕಚೇರಿ, ಕೋರ್ಟ್ಗೆ ಅಲೆದಾಡುತ್ತಿದ್ದಾರೆ. ಆದಾಯ ತೆರಿಗೆ ಭಯದಿಂದ ಕೆಲವರು ದೂರು ನೀಡುತ್ತಿಲ್ಲ.
WPL 2026: ಮುಂಬೈ ಇಂಡಿಯನ್ಸ್ ಆರ್ಸಿಬಿ ವಿರುದ್ಧ ಗೆಲುವು ಸಾಧಿಸುಗ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಆದರೂ, ಬೆಂಗಳೂರು ಸೋತರೂ ಸಹ ರಿಚಾ ಘೋಷ್ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನಸನ್ನು ಗೆದ್ದುಬಿಟ್ಟರು. ಆಲ್ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 15
ಪುತ್ತೂರು ನಗರಕ್ಕೆ ರಾಜ್ಯದ ಪ್ರಥಮ ಪಿಪಿಪಿ ಒಳಚರಂಡಿ ಯೋಜನೆ ಮಂಜೂರಾಗುವ ಹಂತದಲ್ಲಿದೆ. 100 ಕೋಟಿ ರೂ. ವೆಚ್ಚದ ಈ ಮೆಗಾ ಯೋಜನೆಯನ್ನು ಸ್ವಿಟ್ಜರ್ಲೆಂಡ್ನ ಖುವಾಕ್ ಕಂಪನಿ ಅನುಷ್ಠಾನಗೊಳಿಸಲಿದೆ. 15 ಕೋಟಿ ರೂ. ರಾಜ್ಯ ಸರ್ಕಾರ ಭರಿಸಲಿದ್ದು, 85 ಕೋಟಿ ರೂ. ಕಂಪನಿ ಹೂಡಿಕೆ ಮಾಡಲಿದೆ. ಬೆದ್ರಾಳದಲ್ಲಿ 5 ಎಕರೆ ಜಾಗದಲ್ಲಿ 8 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ನಿರ್ಮಾಣವಾಗಲಿದೆ.
ಗಾಝಾದಲ್ಲಿ ಕೊನೆಯ ಒತ್ತೆಯಾಳುವಿನ ಅವಶೇಷ ಪತ್ತೆ: ಇಸ್ರೇಲ್ ಸೇನೆ
ಟೆಲ್ಅವೀವ್: ಗಾಝಾ ಪಟ್ಟಿಯಲ್ಲಿ ಬಂಧಿತರಾಗಿದ್ದ ಕೊನೆಯ ಒತ್ತೆಯಾಳುವಿನ ಶವವನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ. ಇಸ್ರೇಲ್ ಪೊಲೀಸರು ಹಾಗೂ ಮಿಲಿಟರಿ ರಬ್ಬಿನೇಟ್ ಸಹಕಾರದೊಂದಿಗೆ ರಾಷ್ಟ್ರೀಯ ವಿಧಿವಿಜ್ಞಾನ ವೈದ್ಯಕೀಯ ಕೇಂದ್ರವು ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಬಳಿಕ ದಿವಂಗತ ರಾನ್ ಗ್ವಿಲಿಯ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಸೇನಾ ವಕ್ತಾರ ಅವಿಚೇ ಅಡ್ರೇ ತಿಳಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಈ ಅವಶೇಷಗಳು ಪತ್ತೆಯಾಗಿವೆ. ಈ ಮೂಲಕ ಗಾಝಾ ಪಟ್ಟಿಯಲ್ಲಿ ಬಂಧಿತರಾಗಿದ್ದ ಎಲ್ಲಾ ಒತ್ತೆಯಾಳುಗಳನ್ನು ವಾಪಸ್ ತರಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ
ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ರಾಜ್ಯದ ಪಾಲಿನ ತೆರಿಗೆ ಹಂಚಿಕೆ, ನೆರೆ ಪರಿಹಾರ ಅನುದಾನ ಹೀಗೆ ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ಪಾಲು ಸಿಗುತ್ತಲೇ ಇಲ್ಲ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ನೀಡುವ ವಿಷಯದಲ್ಲೂ ಈ ಪಕ್ಷಪಾತ ಧೋರಣೆ ಮುಂದುವರಿದಿದೆ. ಅನುದಾನ ಹಂಚಿಕೆಯಲ್ಲಿ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರಕಾರ ಸಮಾನವಾಗಿ ನೋಡಬೇಕು. ಆದರೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಅನುದಾನದ ಹೊಳೆಯನ್ನೇ ಹರಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಸಮ್ಮತವಾದ ಪಾಲು ನೀಡಲು ನಿರಾಕರಿಸುತ್ತಿದೆ. ಈ ಮಲತಾಯಿ ನೀತಿ ಒಕ್ಕೂಟ ತತ್ವಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಕರ್ನಾಟಕದ ಬಗ್ಗೆ ಕೇಂದ್ರ ಸರಕಾರದ ನಕಾರಾತ್ಮಕ ಧೋರಣೆಯಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದ 24 ಇಲಾಖೆಗಳ ಪ್ರಸ್ತಾವಗಳು ಅನುಮೋದನೆ ಹಾಗೂ ಅನುದಾನಕ್ಕಾಗಿ ವರ್ಷಗಳಿಂದ ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಲ್ಲಿ ಧೂಳು ತಿನ್ನುತ್ತ ಬಿದ್ದಿವೆ. ಅವುಗಳಲ್ಲಿ ಒಂದೇ ಒಂದು ಪ್ರಸ್ತಾವಕ್ಕೂ ಅನುಮೋದನೆ ಸಿಕ್ಕಿಲ್ಲ. ಕಳೆದ 17 ತಿಂಗಳ ಕಾಲಾವಧಿಯಲ್ಲಿ ರಾಜ್ಯದ ಕೇವಲ ಎರಡು ಯೋಜನೆಗಳಿಗಷ್ಟೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 3,432 ಕೋಟಿ ರೂ. ಮೊತ್ತದ ಬಳ್ಳಾರಿ-ಚಿಕ್ಕ ಜಾಜೂರು ರೈಲು ಮಾರ್ಗ ಹಾಗೂ ಬೆಂಗಳೂರಿನ ‘ನಮ್ಮ ಮೆಟ್ರೊ’ ಮೂರನೇ ಹಂತದ ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರಕಿದೆ. ರಾಜ್ಯ ಸರಕಾರ ಪ್ರಸ್ತಾವ ಸಲ್ಲಿಸಿದ 19 ತಿಂಗಳ ನಂತರ ವಿಳಂಬ ಮಾಡಿ ಅನುಮತಿ ನೀಡಲಾಗಿದೆ. ಆದರೆ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಮತ್ತು ಆಂಧ್ರಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣ ಕೇಂದ್ರದಿಂದ ಲಭಿಸಿದೆ. 2024ರ ಜೂನ್ ತಿಂಗಳಿಂದ ಇಲ್ಲಿಯವರೆಗೆ ಆಂಧ್ರಪ್ರದೇಶಕ್ಕೆ 3 ಲಕ್ಷ ಕೋಟಿ ರೂ. ಆರ್ಥಿಕ ನೆರವನ್ನು ಕೇಂದ್ರ ಸರಕಾರ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದಾರೆ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿರುವ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಜಲ ಜೀವನ ಮಿಶನ್ ಯೋಜನೆಯಲ್ಲೂ ಕೇಂದ್ರದ ಪಾಲು 4,574 ಕೋಟಿ ರೂ.ಇನ್ನೂ ಬಂದಿಲ್ಲ. ವಿಪತ್ತು ಪರಿಹಾರ ಅನುದಾನ, 9 ಕೇಂದ್ರ ಪ್ರಾಯೋಜಿತ ಯೋಜನೆಗಳ ಪಾಲು, ಮೂಲ ಸೌಕರ್ಯಗಳ ಯೋಜನೆಗೆ ಒದಗಿಸಬೇಕಾದ ನೆರವಿಗೆ ಸಂಬಂಧಿಸಿದಂತೆಯೂ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಾಳಲಾಗಿದೆ. ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಸರಕಾರದ ನಕಾರಾತ್ಮಕ ನೀತಿಗೆ ಆ ಸರಕಾರದ ಪಕ್ಷಪಾತದ ಧೋರಣೆ ಕಾರಣವಲ್ಲದೇ ಬೇರೇನೂ ಅಲ್ಲ. ಕೇಂದ್ರದ ಮೋದಿ ಸರಕಾರದ ಈ ನಕಾರಾತ್ಮಕ ನೀತಿಗೆ ಇನ್ನೊಂದು ಮುಖ್ಯ ಕಾರಣವೆಂದರೆ ನಮ್ಮ ರಾಜ್ಯದ ಜನ ಪ್ರತಿನಿಧಿಗಳ ಬೇಜವಾಬ್ದಾರಿತನವೆಂದರೆ ತಪ್ಪಿಲ್ಲ. ಅನೂಚಾನವಾಗಿ ನಡೆದು ಬಂದಂತೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳು ದಿಲ್ಲಿಗೆ ಬಂದು ಮನವಿಯನ್ನು ಸಲ್ಲಿಸಿ ಹೋಗುತ್ತಾರೆ. ಕೇವಲ ಮನವಿ ಸಲ್ಲಿಸಿದರೆ ಮಾತ್ರ ಕೆಲಸ ಆಗುವುದಿಲ್ಲ. ನಮ್ಮ ರಾಜ್ಯದ ಸಂಸತ್ ಸದಸ್ಯರು, ಕೇಂದ್ರ ಸರಕಾರದ ಬೆನ್ನು ಹತ್ತಿ ಸದರಿ ಮನವಿಗಳು ಹಾಗೂ ಪ್ರಸ್ತಾವಗಳಿಗೆ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗುತ್ತದೆ. ಸಂಸದರು ಮಾತ್ರವಲ್ಲ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಕೂಡ ಆಸಕ್ತಿ ವಹಿಸಬೇಕು, ಅದರಲ್ಲೂ ಕರ್ನಾಟಕದಿಂದ ಚುನಾಯಿತರಾದ ಬಿಜೆಪಿ ಸಂಸದರ ಪಾತ್ರ ಮುಖ್ಯವಾಗಿದೆ. ತಮ್ಮದೇ ಪಕ್ಷದ ಸರಕಾರ ಕೇಂದ್ರದಲ್ಲಿ ಇದ್ದರೂ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಅವರು ವಿಫಲಗೊಂಡಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ದುರವಸ್ಥೆ ಈ ನಿರ್ಲಕ್ಷ್ಯಕ್ಕೆ ಇನ್ನೊಂದು ಉದಾಹರಣೆ. ಈ ಕಾರ್ಖಾನೆಯ ಪುನಶ್ಚೇತನಕ್ಕಾಗಿ 4,000 ಕೋಟಿ ರೂ. ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸಂಪುಟ ದರ್ಜೆಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ವತಃ ಆಸಕ್ತಿ ವಹಿಸಿ ಸಿದ್ಧಪಡಿಸಿ ಪ್ರಯತ್ನಿಸಿ ದರೂ ಕೂಡ ಯಶಸ್ವಿಯಾಗಲಿಲ್ಲ. ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಕಳೆದ ವರ್ಷ ದೊಡ್ಡ ಪ್ಯಾಕೇಜ್ ಪ್ರಕಟಿಸಿದೆ. ಕೇಂದ್ರದ ಎನ್ಡಿಎ ಮೈತ್ರಿ ಕೂಟದ ಸರಕಾರದಲ್ಲಿ ಪಾಲುದಾರ ಪಕ್ಷವಾದ ಜೆಡಿಎಸ್ನ ಕುಮಾರಸ್ವಾಮಿ ಅವರ ಪ್ರಸ್ತಾವಕ್ಕೂ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಪ್ರಭಾವಿ ಲಾಬಿ ಇಲ್ಲದಂತಾಗಿದೆ. ಲೋಕಸಭೆಗೆ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಎದುರಿಗೆ ನಿಂತು ಗಟ್ಟಿ ಧ್ವನಿಯಲ್ಲಿ ಮಾತಾಡುವ ಸ್ಥಿತಿಯಲ್ಲಿ ಅವರಾರೂ ಇಲ್ಲ. ಕೇಂದ್ರ ಸರಕಾರದ ಬಳಿ ಕರ್ನಾಟಕ ಭಿಕ್ಷೆಯನ್ನು ಕೇಳುತ್ತಿಲ್ಲ. ತನಗೆ ಬರಬೇಕಾದ ನ್ಯಾಯ ಸಮ್ಮತ ಪಾಲನ್ನು ಕೇಳುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪಾಲನ್ನು ನೀಡುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉತ್ಪಾದನಾ ವಲಯಗಳ ಮೂಲಕ ಕರ್ನಾಟಕದಿಂದ ಅತ್ಯಂತ ಹೆಚ್ಚು ಪ್ರಮಾಣದ ವರಮಾನ ಕೇಂದ್ರ ಸರಕಾರಕ್ಕೆ ಹೋಗುತ್ತಿದೆ.ಆದರೆ ಅದಕ್ಕೆ ಬದಲಿಯಾಗಿ ರಾಜ್ಯದ ಮೂಲ ಸೌಕರ್ಯ, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ತೆರಿಗೆಯ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಕರ್ನಾಟಕದಿಂದ ಹೋಗುತ್ತಿರುವ ಪ್ರತೀ ಒಂದು ರೂಪಾಯಿಯಲ್ಲಿ 13 ಪೈಸೆಯಷ್ಟೇ ರಾಜ್ಯಕ್ಕೆ ವಾಪಸು ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದರಲ್ಲಿ ಅತಿಶಯೋಕ್ತಿಯಾದುದು ಏನೂ ಇಲ್ಲ. ಕರ್ನಾಟಕದ ಜನರು ಬಿಜೆಪಿಯನ್ನು ಚುನಾಯಿಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಸಂವಿಧಾನ ಬದ್ಧವಾಗಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡದೇ ಇರುವುದು ಅನ್ಯಾಯದ ಅತಿರೇಕವಾಗಿದೆ. ಅನುದಾನ ಹಂಚಿಕೆಯಲ್ಲಿ ಕರ್ನಾಟಕದ ಪಾಲನ್ನು ನಿರಾಕರಿಸುವುದು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುವ ಸೇಡಿನ ರಾಜಕೀಯವಾಗಿದೆ. ಕೇಂದ್ರ ಸರಕಾರದ ಇಂಥ ಮಲತಾಯಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ರಾಜ್ಯ ಮತ್ತು ಕೇಂದ್ರಗಳ ಸಂಬಂಧ ಸೌಹಾರ್ದಯುತವಾಗಿರಬೇಕು. ಪರಸ್ಪರ ಅಪನಂಬಿಕೆಗೆ ಆಸ್ಪದ ನೀಡಬಾರದು. ಹಾಗಾಗಿ ಇನ್ನಾದರೂ ಕೇಂದ್ರ ಸರಕಾರ ಈ ಸೇಡಿನ ನೀತಿಯನ್ನು ಕೈ ಬಿಡಬೇಕು.
Selection of Padma Awardee : ಪದ್ಮ ಪ್ರಶಸ್ತಿಯನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಸಿದ್ದ ಪಡಿಸಿಕೊಂಡಿರುವ ಮಾನದಂಡವೇನು ಈ ಬಗ್ಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ, ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳ ಸಾಧಕರ ಮೇಲೆ ಕೇಂದ್ರಕ್ಕೆ ವಿಶೇಷ ಪ್ರೀತಿ ಬರುತ್ತಾ ಎನ್ನುವುದನ್ನು ಪರೋಕ್ಷವಾಗಿ ವ್ಯಂಗ್ಯವಾಗಿ, ಮೋದಿ ಸರ್ಕಾರದ ಕಾಲೆಳೆದಿದ್ದಾರೆ.
Bank Strike Jan 27: ವಾರದಲ್ಲಿ 5 ದಿನ ಕೆಲಸದ ಅವಧಿಗೆ ಆಗ್ರಹ: ದೇಶವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ: ಬ್ಯಾಂಕ್ ನೌಕರರು ತಮ್ಮ ಬಹುದಿನಗಳ ಬೇಡಿಕೆ ಆಗಿರುವ ವಾರಕ್ಕೆ 5 ದಿನ ಕೆಲಸ ನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ವಾರದಲ್ಲಿ ಐದು ದಿನ ಮಾತ್ರ ಕೆಲಸ ನೀತಿಯನ್ನು ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಲು ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU)
ಟಿ.ಶ್ಯಾಮ ಭಟ್ ವಿರುದ್ಧದ ಪ್ರಕರಣ ಕೈಬಿಡಲು ರಾಜ್ಯ ಸರಕಾರ ನಿರ್ಧಾರ
ಬಿಡಿಎ ಬಡಾವಣೆ ನಕ್ಷೆಯನ್ನೇ ತಿದ್ದುಪಡಿಗೊಳಿಸಿ ಅಧಿಕಾರ ದುರುಪಯೋಗ ಆರೋಪ
ಕೊಲ್ಕತ್ತಾ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; 7 ಮಂದಿ ಸಜೀವ ದಹನ
ಕೊಲ್ಕತ್ತಾ: ಪೂರ್ವ ಕೊಲ್ಕತ್ತಾದ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು, ಇತರ 21 ಮಂದಿ ನಾಪತ್ತೆಯಾಗಿದ್ದಾರೆ. ದುರಂತ ಸಂಭವಿಸಿದಾಗ ಗೋದಾಮಿನಲ್ಲಿ ನಿದ್ರಿಸುತ್ತಿದ್ದ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರು ಎಂದು ತಿಳಿದುಬಂದಿದೆ. ದಕ್ಷಿಣ ಮತ್ತು ಪೂರ್ವ ಕೊಲ್ಕತ್ತಾ ನಡುವೆ ಸಂಪರ್ಕ ಕಲ್ಪಿಸುವ ಜನನಿಬಿಡ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿ ಆನಂದಪುರದ ನಝೀರಾಬಾದ್ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಸುಕಿನ 2.30ರ ವೇಳೆಗೆ ಈ ದುರಂತ ಸಂಭವಿಸಿದೆ. ಕಾರ್ಮಿಕರು ಕೆಲಸದ ಬಳಿಕ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ. ಪೊಲೀಸರು ಆರಂಭದಲ್ಲಿ ಮೂರು ಸಾವುಗಳನ್ನು ದೃಢಪಡಿಸಿದ್ದರು; ಆದರೆ ಆ ಬಳಿಕ ಅಗ್ನಿಶಾಮಕ ಇಲಾಖೆ ಹೇಳಿಕೆ ನೀಡಿ ಏಳು ದೇಹಗಳು ಸುಟ್ಟು ಕರಕಲಾಗಿದ್ದು, ಅವುಗಳನ್ನು ಹೊರತೆಗೆಯಲಾಗಿದೆ ಎಂದು ಪ್ರಕಟಿಸಿದೆ. ಮೃತಪಟ್ಟವರ ಗುರುತು ಪತ್ತೆ ಮಾಡುವುದು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಗೆಯುಗುಳುತ್ತಿರುವ ಅವಶೇಷಗಳಡಿ ಶೋಧ ಕಾರ್ಯ ನಡೆಸಿದಾಗ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾದವರ ಬಗಗೆ ನೀಡಿದ ದೂರಿನ ಪ್ರಕಾರ, 25ಕ್ಕೂ ಹೆಚ್ಚು ಮಂದಿ ರಾತ್ರಿ ವೇಳೆ ಗೋದಾಮಿನೊಳಗಿದ್ದ ಡೆಕೊರೇಟರ್ಸ್ ಯೂನಿಟ್ ನ ಒಳಗಿದ್ದರು ಎನ್ನಲಾಗಿದೆ. ಇತರ ಮೂವರು ಮೊಮೊ ಫ್ಯಾಕ್ಟರಿಯಲ್ಲಿದ್ದರು. ನಾಪತ್ತೆಯಾದವರ ಪೈಕಿ ಬಹುತೇಕ ಮಂದಿ ಪೂರ್ವ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಯವರು. ಡೆಕೊರೇಟರ್ಸ್ ಯೂನಿಟ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಥರ್ಮೋಕೋಲ್ ಮತ್ತು ಇತರ ದಹನಶೀಲ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಲಘುಪಾನೀಯ ಮತ್ತ ಪ್ಯಾಕೆಟ್ ಮಾಡಲಾದ ಆಹಾರವಸ್ತುಗಳೂ ಗೋದಾಮಿನಲ್ಲಿದ್ದುದು ಬೆಂಕಿ ಇಡೀ ಆವರಣಕ್ಕೆ ಕ್ಷಣಮಾತ್ರದಲ್ಲಿ ವ್ಯಾಪಿಸಲು ಕಾರಣವಾಯಿತು ಎಂದು ಹೇಳಲಾಗಿದೆ.
ಹಿಮ ಬಿರುಗಾಳಿಗೆ ತಲೆಕೆಳಗಾದ ವಿಮಾನ: ಏಳು ಮಂದಿ ಮೃತ್ಯು
ಮಿಯಾನ್, ಅಮೆರಿಕ: ಇಲ್ಲಿನ ಬಂಗೋಂರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮ ಬಿರುಗಾಳಿಯಿಂದ ವಿಮಾನ ಬುಡಮೇಲಾಗಿ ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಬ್ಬ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಟಿಸಿದೆ. ದ ಬಂಬಾರ್ಡಿಯರ್ ಚಾಲೆಂಜರ್ 600 ಖಾಸಗಿ ಬ್ಯುಸಿನೆಸ್ ಜೆಟ್ನಲ್ಲಿ ಎಂಟು ಮಂದಿ ಪ್ರಯಾಣಿಕರಿದ್ದರು ಹಾಗೂ ಭಾನುವಾರ ರಾತ್ರಿ ಟೇಕಾಫ್ ಆಗುವ ವೇಳೆ ಈ ದುರಂತ ಸಂಭವಿಸಿದೆ. ನ್ಯೂಇಂಗ್ಲೆಂಡ್ ಮತ್ತು ದೇಶದ ಬಹುಭಾಗ ಭಾರಿ ಶೀತಗಾಳಿಯಿಂದ ತತ್ತರಿಸಿರುವ ನಡುವೆಯೇ ಈ ದುರಂತ ಸಂಭವಿಸಿದೆ. ಉತ್ತರ ಬೋಸ್ಟನ್ನಿಂದ 200 ಮೈಲು ದೂರದ ಈ ಪಟ್ಟಣದ ವಿಮಾನ ನಿಲ್ದಾಣವನ್ನು ದುರಂತದ ಬಳಿಕ ಮುಚ್ಚಲಾಗಿದೆ. ದುರಂತ ಸಂಭವಿಸಿದ ವೇಳೆ ಭಾರಿ ಹಿಮಪಾತ ಇತ್ತು ಎಂದು ಹೇಳಲಾಗಿದೆ. ವಿಮಾನ ಟೇಕಾಫ್ ಆಗುವ ಹಂತದಲ್ಲಿದ್ದಾಗ ಬುಡಮೇಲಾಗಿ ಬಿದ್ದು ಬೆಂಕಿ ಹತ್ತಿಕೊಂಡಿತು ಎಂದು ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯ ದಾಖಲೀಕರಣದಿಂದ ತಿಳಿದುಬಂದಿದೆ. ಭಾನುವಾರ ರಾತ್ರಿ 7.45ಕ್ಕೆ ಈ ದುರಂತ ಸಂಭವಿಸಿದೆ. ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಷನ್ ಮತ್ತು ನ್ಯಾಷನಲ್ ಟ್ರಾನ್ಸ್ಪೋರ್ಟೇಶನ್ ಸೇಫ್ಟಿ ಬೋರ್ಡ್ ತನಿಖೆ ನಡೆಸುತ್ತಿವೆ. ವಿಮಾನ ನಿರ್ಗಮನದ ವೇಳೆ ವಿಮಾನ ಅಪಘಾತಕ್ಕೀಡಾಗಿದ್ದು, ಬಳಿಕ ಬೆಂಕಿ ಹತ್ತಿಕೊಂಡಿತು ಎನ್ನುವುದು ಎನ್ಟಿಎಸ್ಬಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೆರಡು ದಿನಗಳಲ್ಲಿ ಸಂಪೂರ್ಣ ತನಿಖೆ ನಡೆಸಿ ವಿವರ ನೀಡಲಾಗುವುದು ಎಂದು ಎನ್ಟಿಎಸ್ಬಿ ಪ್ರಕಟಿಸಿದೆ.
ವಾಹನ ಸವಾರರೇ ಗಮನಿಸಿ: ಫ್ರೀಡಂಪಾರ್ಕ್ ಸುತ್ತಮುತ್ತಲಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಯಾವುದು?
ವಿಬಿ-ಜಿ ರಾಮ್ಜಿ ಯೋಜನೆ ಕೈಬಿಟ್ಟು ಮನರೇಗಾ ಮರು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆ ಹೆಚ್ಚು ಜನ ಸೇರುವ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಅಂದರೆ, ಲುಲುಮಾಲ್, ಮೈಸೂರ್ ಬ್ಯಾಂಕ್ ಸೇರಿ ಹಲವು ರಸ್ತೆಯಲ್ಲಿ ಸಂಚಾರ ನಿರ್ಬಂಧ ಇರಲಿರುವ ಕಾರಣ, ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಮಾಹಿತಿ ಪ್ರಕಟಿಸಿದ್ದಾರೆ. ಬೃಹತ್ ಪ್ರತಿಭಟನೆ ಹಾಗೂ ಲೋಕಭವನ ಚಲೋ ನಡೆಯಲಿದೆ.
ಲಾಲ್ಬಾಗ್ ಫ್ಲವರ್ ಶೋಗೆ ತೆರೆ; ಮಳೆ ಮಧ್ಯೆ ತೇಜಸ್ವಿ ವಿಸ್ಮಯ ಕಣ್ತುಂಬಿಕೊಂಡ ಜನ, ಈ ಬಾರಿಯ ಆದಾಯವೆಷ್ಟು?
ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆದ ಪೂರ್ಣಚಂದ್ರ ತೇಜಸ್ವಿ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿದ್ದಿದೆ. ಮಳೆಯ ನಡುವೆಯೂ ಜನಸಾಗರವೇ ಹರಿದುಬಂದಿತ್ತು. ಗಾಜಿನ ಮನೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸ್ನೇಹಿತರ ತಂಡಗಳು ಆಗಮಿಸಿದ್ದವು. ನರ್ಸರಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಪ್ರದರ್ಶನಕ್ಕೆ 3.10 ಕೋಟಿ ರೂ. ಖರ್ಚಾಗಿದ್ದರೂ, ನಿರೀಕ್ಷಿತ ಆದಾಯ ಬಂದಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜನರ ಕನಸು ಶೀಘ್ರ ನನಸಾಗಲಿದೆ. ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಿದ್ದಾರೆ ಎಂಬ ಸಿಹಿ ಸುದ್ದಿ ಸಿಕ್ಕಿದೆ.
Karnataka Weather Updates: ವಾಯುಭಾರ ಕುಸಿತ: ಬೆಂಗಳೂರು ಸೇರಿ ಕರ್ನಾಟಕದ ಈ ಭಾಗಗಳಲ್ಲಿ ಚಳಿ ಹೆಚ್ಚಳ, ಮಳೆ ಸಾಧ್ಯತೆ
Karnataka Weather Updates: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಕರ್ನಾಟಕದ ಹವಾಮಾನದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಚಳಿ ಹೆಚ್ಚಳವಾಗಿದೆ. ಇದರೊಂದಿಗೆ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಜನವರಿ 27ರ ಮಂಗಳವಾರದಂದು ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೀವನ ಪರ್ಯಂತ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಸೆಷನ್ಸ್ ಕೋರ್ಟ್ಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗಂಭೀರ ಪ್ರಕರಣಗಳಲ್ಲಿಯೂ ಇನ್ನು ಮುಂದೆ ಸೆಷನ್ಸ್ ಕೋರ್ಟ್ಗಳು ಜೀವಾವಧಿ ಶಿಕ್ಷೆ ವಿಧಿಸಲಾಗದು. ಸುಪ್ರೀಂ ಕೋರ್ಟ್ ಆದೇಶವನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ. ಇದು ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಮಹತ್ವದ ಬದಲಾವಣೆ ತರಲಿದೆ.
400 ಕೋಟಿ ರೂ. ದರೋಡೆ ಕೇಸ್ ಬೆನ್ನು ಬಿದ್ದ ಮಹಾರಾಷ್ಟ್ರ SIT; ತನಿಖೆ ವೇಳೆ ಸಿಕ್ಕ ಆಡಿಯೋ ಸಂದೇಶದಲ್ಲಿ ಏನಿದೆ?
400 ಕೋಟಿ ರೂ. ದರೋಡೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಎಸ್ಐಟಿ ಚುರುಕುಗೊಳಿಸಿದೆ. ಹವಾಲಾ ಆಪರೇಟರ್ ವಿರಾಟ್ ಗಾಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಭಾವಿಗಳ ಹೆಸರು ಹೊರಬರುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಜೊತೆಗೆ ಆರೋಪಿ ವಿರಾಟ್ ಮತ್ತು ಇನ್ನೊಬ್ಬನ್ನದ್ದು ಎನ್ನಲಾದ ವಾಟ್ಸಾಪ್ ಸಂಭಾಷಣೆ ಸಿಕ್ಕಿದ್ದು, ಇದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಈ ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಆರೋಪಗಳ ಕೆಸರೆರಚಾಟ ಜೋರಾಗಿ ನಡೆಯುತ್ತಿದೆ.
ರೈಲುಗಳ ಸಮಯ ಪಾಲನೆಯಲ್ಲಿ ಶೇ.91ರಷ್ಟು ಸಾಧನೆ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ಹಲವು ಸುಧಾರಣೆ
ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕಳೆದ ಐದು ತಿಂಗಳಲ್ಲಿ 12.3 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಮಾರಾಟ ಮಾಡಿದೆ. ಅಲ್ಲದೆ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ ಆದಾಯ ಹೆಚ್ಚಾಗಿದೆ. ರೈಲುಗಳ ಸಮಯ ಪಾಲನೆ ಶೇ.91ಕ್ಕೆ ಸುಧಾರಿಸಿದೆ. ವೈದ್ಯಕೀಯ ವಿಭಾಗವು ಶೇ.100 ಸಾಧನೆ ಮಾಡಿದೆ.
ಚಿಕ್ಕಮಗಳೂರು: 77ನೇ ಗಣರಾಜ್ಯೋತ್ಸವದ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ
ಚಿಕ್ಕಮಗಳೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿರುವ ಚೈತ್ರೋತ್ಸವ ಹೆಸರಿನ ಫಲಪುಷ್ಪ ಪ್ರದರ್ಶನ ನಗರದ ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ವಿವಿಧ ಬಗೆಯ ಹೂವುಗಳು, ಸಿರಿಧಾನ್ಯ, ತರಕಾರಿ, ಹಣ್ಣುಗಳಲ್ಲಿ ಮೂಡಿರುವ ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಗಣ್ಯರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಲಾಕೃತಿಗಳು ಹಾಗೂ ಸಾವಿರಾರು ಬಗೆಯ ಸಸ್ಯ ರಾಶಿ, ಕೀಟ ಲೋಕ, ಅಕ್ವೇರಿಯಂ ಸಾರ್ವಜನಿಕರನ್ನು ಮಂತ್ರಮುಗ್ಧಗೊಳಿಸುತ್ತಿವೆ. ನಗರದ ಸುಭಾಶ್ಚಂದ್ರಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ 77ನೇ ಗಣರಾಜ್ಯೋತ್ಸವದ ಆಕರ್ಷಣೆಯಾಗಿದ್ದು, ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ವಿಪ ಉಪಸಭಾಪತಿ ಪ್ರಾಣೇಶ್, ಶಾಸಕ ತಮ್ಮಯ್ಯ, ವಿಪ ಸದಸ್ಯರಾದ ಭೋಜೇಗೌಡ, ಸಿ.ಟಿ.ರವಿ ಚೈತ್ರೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಸುಮಾರು 1 ಎಕರೆ ಪ್ರದೇಶದಲ್ಲಿ ಜಗತ್ತಿನ ವಿವಿಧ ದೇಶಗಳ ಸಸ್ಯ ಪ್ರಪಂಚ, ಹೂವು, ಹಣ್ಣುಗಳು, ತರಕಾರಿ ಸಿರಿಧಾನ್ಯಗಳಿಂದ ಮಾಡಿರುವ ಅತ್ಯಾಕರ್ಷಕ ಕಲಾಕೃತಿಗಳು, ಕಲಾವಿದರ ಕೈಚಳಕಕ್ಕೆ ಸಾರ್ವಜನಿಕರು ಬೇಸ್ ಎನ್ನುತ್ತಿದ್ದಾರೆ. ಫಲಪುಷ್ಪ ಆವರಣ ಪ್ರವೇಶಿಸುತ್ತಿದ್ದಂತೆ ಸಸ್ಯ, ಹೂವಿನ ಎಸಳು ಹಾಗೂ ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಿರುವ ಐ ಲವ್ ಸಿಕೆಎಂ ಎಂಬ ಬರಹ ಸಾರ್ವಜನಿಕರನ್ನು ಸ್ವಾಗತಿಸುತ್ತದೆ. ಪ್ರದರ್ಶನದ ಒಳಹೊಕ್ಕುತ್ತಿದ್ದಂತೆ ಸಸ್ಯ, ಹೂವು, ತರಕಾರಿ, ಹಣ್ಣು, ಸಿರಿಧಾನ್ಯಗಳಿಂದ ನಿರ್ಮಿಸಿರುವ ಆಕರ್ಷಕ ಕಲಾಕೃತಿಗಳ ಲೋಕ ಬೆರೆಗುಗೊಳಿಸುತ್ತದೆ. ಸಮಾಜಕಲ್ಯಾಣ ಇಲಾಖೆಯಿಂದ ಬಾಳೆದಿಂಡು, ಹಾಗಲಕಾಯಿ, ಬದನೆಕಾಯಿ, ಹೀರೇಕಾಯಿ, ಮೂಲಂಗಿ ಬಳಸಿ ನಿರ್ಮಿಸಿರುವ ಹಳೆಯ ಸಂಸತ್ ಭವನದ ಕಲಾಕೃತಿ, ಸಿರಿಧಾನ್ಯಗಳನ್ನೇ ಬಳಸಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಂತ ಭಂಗಿಯ ಪ್ರತಿಕೃತಿಯ ಕಲಾಕೃತಿ, ಸಸ್ಯರಾಶಿಯ ಮಧ್ಯೆ ಮೂಡಿರುವ ಸಂವಿಧಾನದ ಪೂರ್ವ ಪೀಠಿಕೆ ಕಲಾಕೃತಿ ಸಂವಿಧಾನದ ಮಹತ್ವ ಸಾರುತ್ತಿವೆ. ಬಣ್ಣಬಣ್ಣದ ಸೇವಂತಿಗೆ, ಗುಲಾಬಿ ಹೂವುಗಳಿಂದ ಪಿಯಾನೋ, ವೀಣೆ, ಗಿಟಾರ್, ತಬಲ, ಡಾಲ್ಫಿನ್ಗಳ ಕಲಾಕೃತಿಗಳು ಮೂಡಿಬಂದಿವೆ. ಶೃಂಗೇರಿ ತಾಲೂಕಿನ ಗಂಡಗಟ್ಟ ಸರಕಾರಿ ಶಾಲೆ ಹೂವಿನಿಂದಲೇ ನಿರ್ಮಾಣಗೊಂಡಿದೆ. ಭದ್ರಬಾಲ್ಯದಿಂದ ಸಾಧನೆ ಶಿಖರಕ್ಕೆ ಶೀರ್ಷಿಕೆಯಡಿ ಭದ್ರಬಾಲ್ಯ ಯೋಜನೆ ಅನಾವರಣಗೊಂಡಿದೆ. ಬೋಧಿವೃಕ್ಷದ ಕೆಳಗೆ ಗೌತಮಬುದ್ಧ ಧ್ಯಾನಸ್ಥರಾಗಿದ್ದರೆ, ಇದರ ಪಕ್ಕದಲ್ಲೇ ದೇವೀರಮ್ಮ ದೇಗುಲಹೂವಿನಿಂದ ಮೂಡಿದೆ. ಸಿರಿಧಾನ್ಯದಲ್ಲಿ ಸಾಲುಮರದ ತಿಮ್ಮಕ್ಕೆ, ಸರಸ್ವತಿ, ಬಿರ್ಸಾಮುಂಡಾ ಮೂಡಿಬಂದಿದ್ದಾರೆ. ಇತ್ತೀಚೆಗೆ ಮಹಿಳಾ ವಿಶ್ವಕಪ್ ವಿಜೇತರ ಭಾವಚಿತ್ರಗಳು ಹಣ್ಣುಗಳಲ್ಲಿ ಮೂಡಿ ಬಂದಿವೆ. ಹೂವಿನಿಂದ ಟ್ರೋಫಿಯನ್ನು ನಿರ್ಮಿಸಲಾಗಿದೆ. ಹೂವಿನಿಂದ ಮೂಡಿಬಂದಿರುವ ಕಲಾಕೃತಿಗಳನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಕಲಾವಿದರ ಕೈಚಳಕದಲ್ಲಿ ಚಲನ ಚಿತ್ರನಟರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಕಲ್ಲಂಗಡಿ ಹಣ್ಣುಗಳಲ್ಲಿ ಮೂಡಿಬಂದಿದ್ದಾರೆ. ಕಲ್ಲಂಗಡಿಯಲ್ಲಿ ರಾಷ್ಟ್ರಕವಿಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಗಿರೀಶ್ಕಾರ್ನಾರ್ಡ್, ಕಂಬಾರ, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಚಲನಚಿತ್ರ ನಟರಾದ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ನಾಗ್, ಪುನೀತ್ರಾಜ್ಕುಮಾರ್, ಸಂಚಾರಿ ವಿಜಯ್ ಅವರುಗಳನ್ನು ಬಿಡಿಸಲಾಗಿದೆ. ಬಧನೆ, ಕ್ಯಾರೆಟ್,ಮೂಲಂಗಿಯಲ್ಲಿ ನವಿಲು, ಗರುಡ ಮೂಡಿದ್ದರೆ, ಸಹಿಗುಂಬಳದಲ್ಲಿ ಜಿಂಕೆ,ಮೀನು, ಹಾಗಲಕಾಯಿಯಲ್ಲಿ ಮೊಸಳೆಯನ್ನು ನಿರ್ಮಿಸಲಾಗಿದೆ. ತರಕಾರಿ ಬಳಸಿ ಅರಣ್ಯ ಇಲಾಖೆಯಿಂದ ಕೃತಕ ಆನೆಗಳನ್ನು ಸೃಷ್ಟಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಬಣ್ಣಬಣ್ಣದ ಮೀನುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನೇಕಾರರಿಂದ ನೇಯ್ದಿರುವ ರೇಷ್ಮೆ ಸೀರೆಗಳು, ಖಾದಿವಸ್ತುಗಳಿಂದ ತಯಾರಿಸಿದ ಬಟ್ಟೆಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ಇಂದಿನಿಂದ ಜ 28ರವರೆಗೆ ಆಯೋಜಿಸಿರುವ ಫಲಪುಷ್ಪಗಳ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ದೊರೆಕುತ್ತಿದೆ. ಬಣ್ಣಬಣ್ಣಹೂವುಗಳಿಂದ ಮೂಡಿರುವ ಕಲಾಕೃತಿಗಳು ನೋಡುಗಳ ಮನ ಸೆಳೆಯುತ್ತಿವೆ.
ಬಿಜೆಪಿ ಸರಕಾರ ರಾಷ್ಟ್ರದ ಅಭಿವೃದ್ದಿಗೆ ರಿವರ್ಸ್ ಗೇರ್ ಹಾಕಿದೆ: ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಬಿಜೆಪಿಯವರಿಗೆ ಈ ರಾಷ್ಟ್ರವನ್ನು ಮುನ್ನಡೆಸುವ ಶಕ್ತಿಯೂ ಇಲ್ಲ, ಆಸಕ್ತಿಯೂ ಇಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಗಳನ್ನೆಲ್ಲ ಸಾಯಿಸುವ ಮೂಲಕ ಮತ್ತೆ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ನಾವು ಮಾಡಿದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಕೇಂದ್ರೀಕರಣದತ್ತ ತಿರುಗಿಸುತ್ತಿದ್ದಾರೆ. ನರೇಗಾ ಯೋಜನೆಯನ್ನು ಕುಲಗೆಡಿಸಿ, ಕೇವಲ ಯೋಜನೆಯ ಹೆಸರಿನಲ್ಲಿ ರಾಮನ ಹೆಸರು ಸೇರಿಸಿ ಜನರನ್ನು ಭಾವನಾತ್ಮಕವಾಗಿ ಆಟವಾಡಿಸಬಹುದು ಎಂದುಕೊಂಡಿದ್ದಾರೆ. ತನ್ಮೂಲಕ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಜನರನ್ನು ಮೌಢ್ಯದಿಂದ ಹೊರತಂದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದರೆ ಅವರು ಕೇವಲ ಓಟಿಗೋಸ್ಕರ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮನರೇಗಾ ಯೋಜನೆಯಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿ, ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬಹುದಿತ್ತು. ಅದರ ಬದಲು ಇಂತಹ ಜನಪರ, ಜನಪ್ರಿಯ ಯೋಜನೆಯನ್ನೆ ಮುಗಿಸಲು ಹೊರಟಿದ್ದಾರೆ. ಅಂದರೆ, ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಬದಲು ರೋಗಿಯನ್ನೇ ಸಾಯಿಸಲು ಹೊರಟಿದ್ದಾರೆ. ಯೋಜನೆಯಲ್ಲಿ ಭ್ರಷ್ಟಾಚಾರ ಇದ್ದಿದ್ದರೆ ಸರಿಪಡಿಸಲು ಕೇಂದ್ರ ಸರಕಾರಕ್ಕೆ 12ವರ್ಷ ಅವಕಾಶವಿತ್ತಲ್ಲವೇ?. 12 ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೂ ಯೋಜನೆಯಲ್ಲಿ ಯಾವೊಂದು ಬದಲಾವಣೆ, ಸುಧಾರಣೆ ಮಾಡದೆ, ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಒಂದು ವ್ಯವಸ್ಥೆಯನ್ನೇ ನೇಣಿಗೆ ಹಾಕಲು ಹೊರಟಿದ್ದಾರೆ. ಅಂದರೆ ಇಷ್ಟು ವರ್ಷ ಅವರು ಭ್ರಷ್ಟಾಚಾರದ ಭಾಗವಾಗಿದ್ದರೆ? ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ. ದೇಶದ ಸುಮಾರು 12 ಕೋಟಿಗೂ ಅಧಿಕ ಬಡಜನರು, ಕಾರ್ಮಿಕರು, 6 ಕೋಟಿಗೂ ಅಧಿಕ ಮಹಿಳಾ ಕಾರ್ಮಿಕರು, 3 ಕೋಟಿಗೂ ಅಧಿಕ ಪರಿಶಿಷ್ಟ ಜಾತಿ, ವರ್ಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕಳೆದ 20 ವರ್ಷಗಳಿಂದ ಯಾವ ಯೋಜನೆಯ ಮೇಲೆ ಅವಲಂಬಿತರಾಗಿದ್ದಾರೋ ಆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಬಡವರು ಬಡವರಾಗಿಯೇ ಇರಬೇಕು, ಅವರು ಜೀತದ ಆಳಾಗಿಯೇ ಇರಬೇಕು, ಮಹಿಳೆಯರು ಸಬಲೀಕರಣಗೊಳ್ಳಬಾರದು, ಅವರು ಸಮಾಜದ ಮುಖ್ಯ ವಾಹಿನಿಗೆ ಬರಬಾರದು ಎನ್ನುವ ಮನೋಸ್ಥಿತಿ ಬಿಜೆಪಿಯವರದ್ದು ಎಂದು ಅವರು ಹೇಳಿದ್ದಾರೆ. ಸೋನಿಯಾಗಾಂಧಿ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಸರಕಾರ 20 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾ ಯೋಜನೆಯನ್ನು ನಾಶ ಮಾಡಲು ಹೊರಟಿರುವುದು ದೊಡ್ಡ ಆಘಾತವಾಗಿದೆ. ಮನರೇಗಾ ಉಳಿಸಬೇಕೆಂದು ಕಾಂಗ್ರೆಸ್ ಪಕ್ಷ ನಾಳೆ(ಜ.27) ರಾಜಭವನ ಚಲೋ ನಡೆಸಲಿದೆ. ಪ್ರತಿ ತಾಲೂಕಿನಲ್ಲೂ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತಿ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
‘ಗೋ ಮೂತ್ರ’ ಸೇವೆನೆಗೆ ಕರೆ ನೀಡಿದ್ದ ಪ್ರೊಫೆಸರ್ ಕಾಮಕೋಟಿಗೆ ಪದ್ಮಶ್ರೀ - ಕಾಂಗ್ರೆಸ್ ಟೀಕೆ
ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವ ಸಂದಿದ್ದರೂ, ಗೋಮೂತ್ರ ಕುರಿತು ಅವರು ನೀಡಿದ್ದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಟೀಕಿಸಿದೆ. ಈ ಪ್ರಶಸ್ತಿ ರಾಷ್ಟ್ರೀಯ ಅಭಿವೃದ್ಧಿ ಗುರಿಗಳಿಗಾಗಿ ಇನ್ನಷ್ಟು ಶ್ರಮಿಸಲು ಪ್ರೇರಣೆ ನೀಡುತ್ತದೆ ಎಂದು ಕಾಮಕೋಟಿ ಪ್ರತಿಕ್ರಿಯಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್ | ಖರ್ಗೆ–ರಾಹುಲ್ಗೆ ಮೂರನೇ ಸಾಲಿನಲ್ಲಿ ಆಸನ!
‘ಪ್ರೋಟೋಕಾಲ್ ಅವ್ಯವಸ್ಥೆ’ ಎಂದು ಕಾಂಗ್ರೆಸ್ ಆರೋಪ
ಆಳ್ವಾಸ್ನ ಗಣರಾಜ್ಯೋತ್ಸವದ ವೈಭವದಲ್ಲಿ 30,000ಕ್ಕೂ ಅಧಿಕ ಮಂದಿ ಭಾಗಿ
ಮಂಗಳೂರು, ಜ.26: ಕ್ರಿಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ, ಜಾತಿ ಮತ ಮೀರಿದ ಬಾಂಧವ್ಯ ಹಾಗೂ ಸಮಾನತೆಯೇ ದೇಶದ ಸುಭದ್ರ ಅಡಿಪಾಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಭಿಪ್ರಾಯಪಟ್ಟಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಸ್ಥಳೀ ಯರು ಸೇರಿದಂತೆ 30,000ಕ್ಕೂ ಅಧಿಕ ಜನರು ವಿದ್ಯಾಗಿರಿಯಲ್ಲಿ ಸೇರಿದ್ದರು. ಆಳ್ವಾಸ್ ಸಂಸ್ಥೆಯ 6,257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತವನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ತಂಡದಿಂದ ಗಾಯನ ನಡೆಯಿತು. ಸುಮಾರು 300ಕ್ಕೂ ಅಧಿಕ ಮಾಜಿ ಸೈನಿಕರು ಧ್ವಜ ವಂದನೆ ಸಲ್ಲಿಸಿದರು. ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ. ಅವರಿಂದ ಗೌರವ ರಕ್ಷೆ ಸ್ವೀಕರಿಸಿದ ನ್ಯಾಯಮೂರ್ತಿ, ಬ್ಯಾಂಡ್ ಹಾಗೂ ಗೌರವಗಳೊಂದಿಗೆ ವೇದಿಕೆಗೆ ಬಂದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೇಡ್ ವರದಿ ಸಲ್ಲಿಸಿದರು. ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ 2 ಲಕ್ಷ ರೂ. ನೀಡಿ ಗೌರವಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಡಿಸೋಜ, ಕಲಾ ವಿಭಾಗದ ಡೀನ್ ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬೆಳವಣಿಗೆ: ಮಾಯಾಂಕ್ ಅಗರ್ವಾಲ್ ಕೆಳಗಿಳಿಸಿ ದೇವದತ್ ಪಡಿಕ್ಕಲ್ ಗೆ ನಾಯಕತ್ವ!
Karnataka Ranji Team- ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ವಿರುದ್ಧ ಸೋಲಿನ ಬಳಿಕ ಕರ್ನಾಟಕ ರಣಜಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂಬರುವ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಮಾಯಾಂಕ್ ಅಗರ್ವಾಲ್ ಅವರ ಬದಲಿಗೆ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು ನೂತನ ನಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಿರಿಯ ಆಟಗಾರ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದು, ಕರುಣ್ ನಾಯರ್ ಅವರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ನಾಕೌಟ್ ಹಂತಕ್ಕೇರಲು ಕರ್ನಾಟಕ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಗಣರಾಜ್ಯೋತ್ಸವ ಆಚರಣೆ
ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರ ವತಿಯಿಂದ ಭಾರತದ 77ನೇ ಗಣರಾಜ್ಯೋತ್ಸವವನ್ನು ಇಂದು ಪಣಂಬೂರು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಎನ್ಎಂಪಿಎ ಉಪಾಧ್ಯಕ್ಷ (ಪ್ರಭಾರ) ಕ್ಯಾಪ್ಟನ್ ಮನೋಜ್ ಜೋಷಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿ ‘ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಜವಾಬ್ದಾರಿ ಇರುವುದನ್ನು ಅವರು ನೆನಪಿಸಿದರು. ರಾಷ್ಟ್ರ ನಿರ್ಮಾಣವು ಸಮೂಹ ಪ್ರಯತ್ನದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು. ಪಣಂಬೂರು ಕೇಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದರು. ಸಿಐಎಸ್ಎಫ್ ಸಿಬ್ಬಂದಿ, ಎನ್ಎಂಪಿಎ ಅಗ್ನಿಶಾಮಕ ದಳ, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರಿಯ ವಿದ್ಯಾಲಯ ಮತ್ತು ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಒಳಗೊಂಡ ಪರೇಡ್ ಪಡೆ ಸಂಪ್ರದಾಯಬದ್ಧ ಪಥ ಸಂಚಲನ ನಡೆಸಿತು. ಇದೇ ಸಂದರ್ಭದಲ್ಲಿ‘ವಂದೇ ಮಾತರಂ’ ಹಾಡಿನ 150ನೇ ವರ್ಷದ ಆಚರಣೆಯ ಅಂಗವಾಗಿ, ರಾಷ್ಟ್ರಗೀತೆಯ ಐತಿಹಾಸಿಕ ಪರಂಪರೆಯನ್ನು ಸ್ಮರಿಸುವ ಸಲುವಾಗಿ ಬಂದರು ನೌಕರರಿಂದ ವಿಶೇಷ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಎನ್ಎಂಪಿಎ ಅಧಿಕಾರಿಗಳು, ನೌಕರರು, ಸಿಐಎಸ್ಎಫ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ಗಾರ್ಡ್ಗಳಿಗೆ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪತ್ರಗಳು ಮತ್ತು ನಗದು ಬಹುಮಾನಗಳನ್ನು ಪ್ರದಾನಿಸಲಾಯಿತು. ಈ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಎನ್ಎಂಪಿಎ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮತ್ತು ಪಣಂಬೂರು ಕೇಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಷ್ಟು ಸೊಗಸುಗೊಳಿಸಿತು. ಇದೇ ಸಂದರ್ಭದಲ್ಲಿ ಸಿಐಎಸ್ಎಫ್ ಘಟಕ, ಶಿಸ್ತು, ಸನ್ನದ್ಧತೆ ಹಾಗೂ ತುರ್ತು ಪ್ರತಿಕ್ರಿಯೆಯ ಪ್ರದರ್ಶನಗಳು ನಡೆಸಲಾಯಿತು. ಕಾರ್ಯಕ್ರಮವು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಎನ್ಎಂಪಿಎಯ ನಿರಂತರ ಬದ್ಧತೆಯನ್ನು ಪ್ರತಿಪಾದಿಸುವ ಮೂಲಕ ಸಮಾರೋಪಗೊಂಡಿತು.
ಮಂಗಳೂರು | ಫಾದರ್ ಮುಲ್ಲರ್ನಲ್ಲಿ ಗಣರಾಜ್ಯೋತ್ಸವ ಆಚರಣೆ
ಮಂಗಳೂರು, ಜ.26: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ವತಿಯಿಂದ ಭಾರತದ 77ನೇ ಗಣರಾಜ್ಯೋತ್ಸವವನ್ನು ಸೋಮವಾರ ಆಚರಿಸಲಾಯಿತು. ಸಂಸ್ಥೆಯ ಮುಂಭಾಗದ ಮೈದಾನದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಡಾ.ಮೈಕೆಲ್ ಸಾಂತುಮಾಯುರ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿ ಜಾತ್ಯತೀತತೆಯನ್ನು ರಕ್ಷಿಸುವ ಮಹತ್ವವನ್ನು ಅವರು ವಿವರಿಸಿದರು. ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು, ನಂತರ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ಹಾಡನ್ನು ಹಾಡಿದರು. ನಿರ್ವಹಣಾ ಸಮಿತಿ, ಸಲಹಾ ಮಂಡಳಿ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಶತಮಾನೋತ್ಸವ ಸಮಾಜದ ಸದಸ್ಯರು, ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿದರು. ರೋಗಿಗಳು ಮತ್ತು ಅವರ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ.ಶಿವಶಂಕರ್ ಸ್ವಾಗತಿಸಿದರು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಡಾ.ಕ್ಯಾರೊಲ್ ಥಾಮಸ್ ನಿರೂಪಿಸಿದರು. ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ನ ದೈಹಿಕ ಶಿಕ್ಷಣ ನಿರ್ದೇಶಕಿ ಸುಷ್ಮಾ ಸಹಕಾರ ನೀಡಿದರು. ನೇತ್ರವಿಜ್ಞಾನದ ಮುಖ್ಯಸ್ಥೆ ಡಾ.ಸರಿತಾ ಲೋಬೊ ಎಆರ್ ವಂದಿಸಿದರು.
ಮಂಗಳೂರು | ಕೆಲಸ ಸಿಗದ ಕಾರಣ ಆತ್ಮಹತ್ಯೆ ಮಾಡಲು ಮರವೇರಿದ ಯುವಕ !
ಮಂಗಳೂರು, ಜ.26: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾ ಕೆಲಹೊತ್ತು ಆತಂಕ ಸೃಷ್ಟಿಸಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಬಾಗಲಕೋಟೆಯ ಭೀಮಪ್ಪ(24) ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಈತ ಕೆಲಸ ಸಿಗದ ಕಾರಣಕ್ಕಾಗಿ ಮನನೊಂದು ಮರವೇರಿ ಆತ್ಮಹತ್ಯೆ ಮಾಡುವ ಯೋಚನೆ ಮಾಡಿದ್ದ ಎನ್ನಲಾಗಿದೆ. ಮರದಿಂದ ಇಳಿದ ಮೇಲೆ ಆತನನ್ನು ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.
Lakkundi | ಚಿನ್ನದ ನಿಧಿ ಒಪ್ಪಿಸಿದ ಕುಟುಂಬಕ್ಕೆ ನಿವೇಶನ, ನಗದು, ಸರಕಾರಿ ಕೆಲಸ: ಸಚಿವ ಎಚ್.ಕೆ. ಪಾಟೀಲ್ ಘೋಷಣೆ
ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿವೇಶನ, ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನಗದು ಸಹಾಯ ಹಾಗೂ ಪ್ರಜ್ವಲ್ ಅವರ ತಾಯಿ ಕಸ್ತೂರೆವ್ವ ರಿತ್ತಿಗೆ ಹೊರಗುತ್ತಿಗೆ ಆಧಾರದ ಸರಕಾರಿ ಕೆಲಸ ನೀಡಲಾಗುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್ ಘೋಷಣೆ ಮಾಡಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ರಿತ್ತಿ ತೋರಿದ ಪ್ರಾಮಾಣಿಕತೆ ರಾಷ್ಟ್ರಕ್ಕೆ ಮಾದರಿಯಾಗಿದೆ. ಲಕ್ಕುಂಡಿಯ ಗತವೈಭವ ಸಾರುವ ನಿಧಿಯನ್ನು ಅವರು ಸರಕಾರದ ಸೊತ್ತು ಎಂದು ಭಾವಿಸಿ ಒಪ್ಪಿಸಿದ್ದಾರೆ. ಅವರಿಗೆ ಸದ್ಯ ನಿವೇಶನ, ಧನಸಹಾಯ ಹಾಗೂ ತಾಯಿ ಗಂಗಮ್ಮ ಅವರಿಗೆ ಹೊರಗುತ್ತಿಗೆ ಕೆಲಸ ನೀಡಿದ್ದೇವೆ ಎಂದರು. ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಪತ್ತೆಯಾದ ಬಂಗಾರದ ಪುರಾತನ ಮೌಲ್ಯ ನಿರ್ಧರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದ ಸಚಿವರು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
Bengaluru Sleeper Vande Bharat: ಬೆಂಗಳೂರು ಸೇರಿ ಈ 3 ಮಾರ್ಗಗಳಲ್ಲಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆ
ನವದೆಹಲಿ:ಭಾರತೀಯ ರೈಲ್ವೆ ಜಾಲದಲ್ಲಿ ವಂದೇ ಭಾರತ್ ರೈಲುಗಳು ಕ್ರಾಂತಿಕಾರಕ ಬದಲಾವಣೆ ತಂದಿವೆ. ಇದೀಗ ಇದೇ ಜಾಲದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಹ ಕಾರ್ಯಾಚರಣೆ ಆರಂಭಿಸಿವೆ. ರಾಜ್ಯದಿಂದ ಬೇರೆ ರಾಜ್ಯಕ್ಕೆ ತೆರಳುವ ಸುದೀರ್ಘ ಪ್ರಯಾಣದ ಸಮಯವನ್ನು ಈ ರೈಲುಗಳು ಕಡಿಮೆಗೊಳಿಸಿವೆ. ವೇಗದ ಹಾಗೂ ಸುರಕ್ಷಿತ ರೈಲು ಇವಾಗಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿವೆ. ಬೆಂಗಳೂರಿಗೂ ಈ ಸ್ಲೀಪರ್ ವಂದೇ
ರಾಯಚೂರು| ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಕೊಲೆ ಖಂಡಿಸಿ ಮೌನ ಪ್ರತಿಭಟನೆ
ಲಿಂಗಸುಗುರು: ಧಾರವಾಡ ನಗರ ನಿವಾಸಿಯಾಗಿರುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾರ ಕೊಲೆ ಇಡೀ ಮಾನವ ಕುಲ ತಲೆ ತಗ್ಗಿಸುವ ಹಾಗೂ ಖಂಡಿಸುವ ಘಟನೆಯಾಗಿದೆ ಎಂದು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯು ಲಿಂಗಸುಗುರಿನ ಗಡಿಯಾರ ಚೌಕಿನಲ್ಲಿ ಮೇಣದ ಬತ್ತಿ ಬೆಳಗಿಸಿ ಮೌನ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸರ್, ಅಧ್ಯಕ್ಷರಾದ ಹುಸೇನ್ ಭಾಷಾ ಕೆ., ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾದ ಅಮೀನ್ , ಹಸನ್, ಆರಿಫ್, ವಸಿಂ, ಸಲೀಂ, ಅಬ್ದುಲ್ಲ ರಜಾಕ್, ಲಾಲಾ ಸಾಬ್, ಹಜರತ್, ಖಯ್ಯುಮ್, ಯುನುಸ್, ಬಾಬರ್, ಮಹೇಬೂಬ್, ಅಬ್ದುಲ್ಲ ವಹೀದ್ ಇಬ್ರಾಹಿಂ, ಅಬ್ಬಾಸ್, ಇರ್ಫಾನ್, ಹುಸೇನ್, ಅಯ್ಯುಬ್, ವಸಿಂ ಪಾಷಾ, ದಾದಾಪೀರ್ ಹಾಗೂ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಪ್ಪಳ| ಬೆಣಕಲ್ನಲ್ಲಿ ಜನಸಂಪರ್ಕ ಸಭೆ ವೇಳೆ ಶಾಸಕ ಬಸವರಾಜ ರಾಯರೆಡ್ಡಿ ಮೇಲೆ ಕಲ್ಲೆಸೆತ
ಕುಕನೂರು: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ರವಿವಾರ ರಾತ್ರಿ ಆಯೋಜಿಸಿದ್ದ ಜನಸಂಪರ್ಕ ಸಭೆ ಕಾರ್ಯಕ್ರಮದ ವೇಳೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರ ಮೇಲೆ ಕಲ್ಲೆಸೆದ ಘಟನೆ ನಡೆದಿದೆ. ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರು ತಮ್ಮ ಸರಕಾರದ ಸಾಧನೆಗಳನ್ನು ನೆರೆದ ಜನತೆಗೆ ವಿವರಿಸುತ್ತಿದ್ದ ಸಂದರ್ಭದಲ್ಲಿ, ಅವರ ಮುಂದೆ ಅಕಸ್ಮಾತ್ತಾಗಿ ಕಲ್ಲೊಂದು ಬಿದ್ದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿದ್ದ ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ, ಮಾನಸಿಕ ಅಸ್ವಸ್ಥನೊಬ್ಬ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ.
ಮಂಗಳೂರು | ಇಕ್ರಾ ಅರೆಬಿಕ್ ಸ್ಕೂಲ್ನಲ್ಲಿ ಗಣರಾಜ್ಯೋತ್ಸವ ಆಚರಣೆ
ಮಂಗಳೂರು: ನಗರದ ಇಕ್ರಾ ಅರೆಬಿಕ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯ ದಿನಾಚರಣೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಬಹು ಸಂಸ್ಕೃತಿಗಳ ದೇಶವಾಗಿದ್ದು, ಜನರು ಪರಸ್ಪರ ಪ್ರೀತಿ, ವಿಶ್ವಾಸ, ಘನತೆ ಮತ್ತು ಗೌರವದೊಂದಿಗೆ ಬದುಕುವ ಅವಕಾಶವನ್ನು ಸಂವಿಧಾನ ನೀಡಿದೆ. ಆ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಚನಾ ಸಂಸ್ಥೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅವರು, ದೇಶದ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳು ಹಾಗೂ ನಮ್ಮ ಕರ್ತವ್ಯಗಳ ಕುರಿತು ವಿವರಿಸಿದರು. ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಶಯಗಳನ್ನು ಜೀವನದಲ್ಲಿ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಗೋಲ್ಡ್ ಸೂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ರಾ ಅರೆಬಿಕ್ ಸ್ಕೂಲ್ ಅಧ್ಯಕ್ಷ ಮೌಲಾನಾ ಸಾಲಿಂ ನದ್ವಿ ಅವರು ವಹಿಸಿ, ಗಣರಾಜ್ಯ ದಿನದ ಮಹತ್ವವನ್ನು ವಿವರಿಸಿ ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮವನ್ನು ಮುಹಮ್ಮದ್ ಹುಝಾಪ ಅವರು ನಿರೂಪಿಸಿದರು.
ಮೂಡುಬಿದಿರೆ | 60 ಅಡಿ ಆಳದ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಮೂಡುಬಿದಿರೆ : 60 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಹಸುವೊಂದನ್ನು ಮೂಡುಬಿದಿರೆ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರಿನಲ್ಲಿ ಸೋಮವಾರ ನಡೆದಿದೆ. ಬಡಗಮಿಜಾರು ನಿವಾಸಿ ಜಯರಾಮ್ ಗೌಡ ಅವರಿಗೆ ಸೇರಿದ ಸುಮಾರು 60 ಅಡಿ ಆಳ ಮತ್ತು 5 ಅಡಿ ಅಗಲದ ಬಾವಿಗೆ ಹಸು ಬಿದ್ದಿರುವುದನ್ನು ಗಮನಿಸಿದ ಮನೆಯವರು ಹಾಗೂ ಸ್ಥಳೀಯರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು, ಹಸುವಿಗೆ ಯಾವುದೇ ಗಾಯವಾಗದಂತೆ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದರು. 60 ಅಡಿ ಆಳವಿದ್ದರೂ ಸಮಯಪ್ರಜ್ಞೆ ಹಾಗೂ ನಿಪುಣತೆಯಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ದಿವಾಕರ್ ಆಚಾರ್ಯ, ಸಿಬ್ಬಂದಿಗಳಾದ ಪ್ರಸಾದ್, ಪ್ರವೀಣಕುಮಾರ್ ದೊಡ್ಡಮನಿ, ರಾಜೇಂದ್ರ ಸಾತರಕರ, ಮಲ್ಲಿಕಾರ್ಜುನ್ ಅರಬಾವಿ ಹಾಗೂ ಚಾಲಕ ಸಚಿನ್ ರಾಮ್ ನಾಯಕ್ ಪಾಲ್ಗೊಂಡಿದ್ದರು.
ಎದುರುಪದವು ಮಸೀದಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಮಂಗಳೂರು : ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದ 77ನೇ ಗಣರಾಜ್ಯೋತ್ಸವ ಸಮಾರಂಭ ನೆರವೇರಿತು. ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಎ.ಪಿ., ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಅಬ್ದುಲ್ ರಝಕ್ ಎ ಆರ್, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಹಿರಿಯ ಹಾಜಿ ಹನೀಫ್ ಮೌಲವಿ, ಮಾಜಿ ಉಪಾಧ್ಯಕ್ಷ ಎಂ ಡಿ ಜಬ್ಬಾರ್, ಮಾಜಿ ಸದಸ್ಯರಾದ ಅಬ್ದುಲ್ ರಝಕ್ ಮಂದಾರ, ಸಾಹುಲ್ ಹಮೀದ್, ಶೇಕ್ ಅಬ್ದುಲ್ ಖಾದರ್, ಸದಸ್ಯರಾದ ಅತಾವುಲ್ಲಾ, ಶಾಕೀರ್, ಮನ್ಸೂರ್, ಹನೀಫ್ ಕಲಾಯಿ, ಅಬ್ದುಲ್ ರಝಕ್ ಸ್ಕೈ ಮತ್ತಿತರರು ಉಪಸ್ಥಿತರಿದ್ದರು.
ಕಲ್ಕಟ್ಟ | ಇಲ್ಯಾಸ್ ಜುಮಾ ಮಸೀದಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಉಳ್ಳಾಲ: ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ದುಆ ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಗೌರವ ಅಧ್ಯಕ್ಷ ಪೊಡಿಯಬ್ಬ ಹಾಜಿ, ಉಪಾಧ್ಯಕ್ಷ ಮುಹಮ್ಮದ್ ಹಾಜಿ ಕಂಡಿಕ ಧ್ವಜಾರೋಹಣಗೈದರು. ಸದುರ್ ಉಸ್ತಾದ್ ಶೆರೀಫ್ ಸಅದಿ, ಮುಅಲ್ಲಿಂ ಅಬ್ದುಲ್ ರಝಾಕ್ ಸಅದಿ, ಕಾರ್ಯದರ್ಶಿ ಹಸೈನಾರ್ ತಟ್ಲ, ಮುಹಮ್ಮದ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋನು ಕಲ್ಕಟ್ಟ ವಂದಿಸಿದರು.
ಗದಗ: ಸಚಿವರ ಭಾಷಣ ಮಧ್ಯೆಯೇ ಎಂಎಲ್ಸಿ ಸಂಕನೂರ ಸಭಾತ್ಯಾಗ
ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಚ್.ಕೆ.ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಿರುವ ವೇಳೆ ವಿಬಿಜಿ ರಾಮ್ ಜಿ ಹಾಗೂ ರಾಜ್ಯಪಾಲರ ಕುರಿತು ಮಾತನಾಡಿದಾಗ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಘಟನೆ ನಡೆಯಿತು. ಸಚಿವರು ತಮ್ಮ ಭಾಷಣದ ವೇಳೆ, ರಾಜ್ಯಪಾಲರು ಹಾಗೂ ಸರಕಾರಗಳ ಮಧ್ಯೆ ಸಂವಿಧಾನಿಕ ಬಿಕಟ್ಟು ಉದ್ಭವವಾಗುತ್ತಿದೆ. ಮನರೇಗಾ ಕಾನೂನು ಕೇಂದ್ರ ಸರಕಾರ ನಿರಸನಗೊಳಿಸಿದೆ. ಮನರೇಗಾ ಮರು ಸ್ಥಾಪಿಸಬೇಕು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಕನೂರ, ಸಚಿವರು ಭಾಷಣ ಮಾಡುತ್ತಿದ್ದ ಸ್ಥಳಕ್ಕೆ ಬಂದು ಕೇಂದ್ರ ಸರಕಾರ ಕೂಲಿ ಕಾರ್ಮಿಕರ ಹಕ್ಕನ್ನು ಕಸಿದುಕೊಂಡಿಲ್ಲ ಎಂದು ಹೇಳಿದರೂ, ಸಚಿವರು ಭಾಷಣ ಮುಂದುವರಿಸಿದಾಗ ಸಭಾತ್ಯಾಗ ಮಾಡಿ ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಕನೂರ, ಕೇಂದ್ರ ಸರಕಾರ ವಿಕಸಿತ ಭಾರತ ಜಿ ರಾಮ್ ಜಿ ಕಾನೂನು ಬಡವರ, ಕೂಲಿಕಾರರ ಉದ್ಯೋಗ ಹಕ್ಕನ್ನು ಎಲ್ಲಿ ಕಸಿದುಕೊಂಡಿದೆ. ವರ್ಷಕ್ಕೆ 100 ಇದ್ದ ದಿನವನ್ನು 125 ದಿನಕ್ಕೆ ಏರಿಸಲಾಗಿದೆ. 15 ಇಲ್ಲವೇ 30 ದಿನಗಳಿಗೊಮ್ಮೆ ಆಗುತ್ತಿದ್ದ ವೇತನವನ್ನು ಕಾನೂನಿನಡಿ ವಾರಕ್ಕೊಮ್ಮೆ ವೇತನ ನೀಡುವಂತೆ ಮಾಡಿದೆ. ವೇತನ ನೀಡುವುದು ತಡವಾದರೆ ಹೆಚ್ಚಿನ ಹಣ ನೀಡಬೇಕೆಂದು ತಿಳಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಗ್ರಾಮಸಭೆಯಲ್ಲೇ ಯೋಜನೆಗಳನ್ನು ರೂಪಿಸಿ ಎಂದು ಹೇಳಲಾಗಿದೆ. ಇದು ಯಾವ ರೀತಿ ಕೂಲಿ ಕಾರ್ಮಿಕರ, ಬಡವರ ವಿರೊಧಿ ಎಂದು ಸಚಿವರು ಹೇಳಬೇಕು. ಆದರೆ, ಸಚಿವರು ಕೆವಲ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡಬಾರದು ಎಂದರು.
400 ಕೋಟಿ ರೂ.ದರೋಡೆ ಪ್ರಕರಣದ ಕುರಿತು ಕೇಂದ್ರ ಸರಕಾರವೇ ತನಿಖೆ ಮಾಡಿಸಲಿ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬoಧಿಸಿದoತೆ ಕೇಂದ್ರ ಸರಕಾರವೇ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಆ ಹಣ ಯಾರದ್ದು? ಏನು ? ಎಲ್ಲಿಂದ ಬಂದಿದೆ? ಎಂಬುದೇ ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಈ ಪ್ರಕರಣಕ್ಕೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಿಂಕ್ ಇದೆ ಎಂದು ತಿಳಿದು ಬಂದಿದೆ. ಈ ಮೂರು ರಾಜ್ಯಗಳಲ್ಲೂ ಅದೇ ಪಕ್ಷದ ಸರಕಾರಗಳಿವೆ. ಹಾಗಾದರೆ ಇವೆಲ್ಲವೂ ಆ ಸರಕಾರಗಳ ಮೂಗಿನ ನೆರಳಲ್ಲೇ ಹೇಗೆ ನಡೆಯುತ್ತಿದೆ ? ಹಣ ಯಾರದು ಎಂಬುದರ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯ ಮಾಡಿದರು. ಆ 400 ಕೋಟಿ ದರೋಡೆ ಹಣ ಕಾಂಗ್ರೆಸ್ ನದ್ದಾಗಿರಲಿ ಅಥವಾ ಬಿಜೆಪಿಯದ್ದಾಗಿರಲಿ ಮೊದಲು ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಡಿಮೋನಿಟೈಸೇಶನ್ ಅಂತ ದೊಡ್ಡ ಸ್ಲೋಗನ್ ಕೊಟ್ಟು, ಎಲ್ಲ ಕಪ್ಪು ಹಣ ವಾಪಸ್ ಬಂತು ಎಂದು ಪ್ರಧಾನಮಂತ್ರಿಯವರೇ ದೇಶದೆಲ್ಲೆಡೆ ಹೇಳಿಕೊಂಡು ಓಡಾಡಿದ್ದರು. ಹಾಗಿದ್ದರೆ ಈಗ ಈ 400 ಕೋಟಿ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿದರು. ಕರ್ನಾಟಕದ ಕೆಲ ಬಿಜೆಪಿ ಮುಖಂಡರು ಈ ಹಣವನ್ನು ತಿರುಪತಿಗೆ ಕಪ್ಪು ಹಣವನ್ನು ಬಿಳಿ ಹಣ ಮಾಡಲು ಅಥವಾ ಚುನಾವಣೆಗೆ ಬಳಸಲು ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಹಾಗಾದರೆ ಅವರಿಗೆ ಈ ಮಾಹಿತಿ ಹೇಗೆ ಗೊತ್ತು ? ಸರಕಾರಕ್ಕೆ, ಪೊಲೀಸರಿಗೆ ಇಲ್ಲದ ಮಾಹಿತಿ ಬಿಜೆಪಿ ಶಾಸಕರಿಗೆ ಹೇಗೆ ಗೊತ್ತಾಗುತ್ತದೆ? ಅವರನ್ನು ಮೊದಲು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು. ಪ್ರಧಾನಮಂತ್ರಿ ಅವರು 'ಮನ್ ಕಿ ಬಾತ್'ನಲ್ಲಿ ಭಜನ್ ಕ್ಲಬ್ ಬಗ್ಗೆ ಮಾತನಾಡುತ್ತಾರೆ. ಆದರೆ 400 ಕೋಟಿ ಹಣ ಟ್ರಕ್ಗಳಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲವೇ? ಅಮಿತ್ ಶಾ ಅವರು ಎಲ್ಲಿದ್ದಾರೆ ? ನಿದ್ದೆ ಮಾಡುತ್ತಿದ್ದಾರಾ? ಚುನಾವಣೆ ಬಂದಾಗ ಮಾತ್ರ ಇವರೆಲ್ಲ ಕಾಣಿಸಿಕೊಳ್ಳುತ್ತಾರೆ. ಇಂತಹ ಪ್ರಶ್ನೆಗಳು ಬಂದಾಗ ಕೇವಲ ಕಾಂಗ್ರೆಸ್ ಮಾತ್ರ ಉತ್ತರಿಸಬೇಕೇ? ಬಿಜೆಪಿ ಕೂಡ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಪ್ರಧಾನಮಂತ್ರಿಗೆ ಕಲಬುರಗಿ ರೊಟ್ಟಿ ಬಗ್ಗೆ ಗೊತ್ತಿರುತ್ತದೆ. ಹಾಗಾದರೆ ಈ 400 ಕೋಟಿ ಹಣ ಎಲ್ಲಿಂದ ಹೋಗುತ್ತಿದೆ ಎಂಬುದೂ ಗೊತ್ತಿರಬೇಕಲ್ವಾ? ಎಂದು ಟೀಕಿಸಿದರು. 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧೆ ನಡೆಸಲಿದೆ ಮತ್ತು ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎರಡೂ ಪಕ್ಷಗಳಿಗೆ ತಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಒಂದಾಗಬೇಕಾದ ಸ್ಥಿತಿ ಬಂದಿದೆ. ಬಿಜೆಪಿಯವರು ಮೊದಲು ಕುಮಾರಸ್ವಾಮಿ ಅವರನ್ನು ತಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ನೋಡೋಣ. ಇವೆಲ್ಲವೂ ಈಗ ಊಹಾಪೋಹಗಳಷ್ಟೇ ಎಂದು ಹೇಳಿದರು.
ಬಿಎಂಟಿಸಿ ಬಸ್ಸುಗಳು ಬೆಂಗಳೂರಿನ ಹೊರಗಿನ ಚಿತ್ರದುರ್ಗದವರೆಗೂ ಸಂಚರಿಸುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಜಾ ದಿನಗಳಲ್ಲಿ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕೆಎಸ್ಆರ್ ಟಿಸಿ ಬಸ್ಸುಗಳ ಜೊತೆಗೆ ಬಿಎಂಟಿಸಿ ಬಸ್ಸುಗಳನ್ನೂ ಬಳಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ಬಿಎಂಟಿಸಿಗೂ ಆದಾಯ ಲಭಿಸುತ್ತಿದೆ.
ಅಮೆರಿಕಕ್ಕೆ ಪರಮಾಣು ರಹಸ್ಯ ಮಾರಾಟ ಆರೋಪ; ಚೀನಾದ ಉನ್ನತ ಮಿಲಿಟರಿ ಜನರಲ್ ಬಂಧನಕ್ಕೆ ಕ್ಸಿ ಆದೇಶ!
ಚೀನಾದ ಪರಮಾಣು ಯೋಜನೆಗಳ ರಹಸ್ಯ ಮಾಹಿತಿಯನ್ನು ಅಮೆರಿಕಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ, ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ. ಹಿರಿಯ ಸೈನ್ಯಾಧಿಕಾರಿಗಳ ಬಡ್ತಿಯಲ್ಲಿ ಲಂಚ ಸ್ವೀಕರಿಸಿದ ಆರೋಪವನ್ನೂ ಜಾಂಗ್ ಯೂಕ್ಸಿಯಾ ಎದುರಿಸುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಆದೇಶದ ಮೇಲೆ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದ್ದು, ತನಿಖೆಯಲ್ಲಿ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿದೆ ಮಾಹಿತಿ.
ಮಂಗಳೂರು | ಮಾದಕ ವಸ್ತು ಸೇವನೆ ಆರೋಪ: ಓರ್ವನ ಬಂಧನ
ಮಂಗಳೂರು, ಜ.26: ನಗರದ ಜೆಪ್ಪು ಕುಡ್ಪಾಡಿ ಮೈದಾನದ ಬಳಿ ಅಮಲು ಪದಾರ್ಥ ಸೇವಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಜೇಶ್ ಕುಮಾರ (38) ಬಂಧಿತ ಆರೋಪಿ. ಜ. 23 ರಂದು ರಾತ್ರಿ 9ಗಂಟೆಯ ಹೊತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಲಕ್ಷ್ಮಣ್ ಸಾಲಾಟಾಗಿ ಎಂಬವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಜೆಪ್ಪು ಕುಡ್ಪಾಡಿ ಮೈದಾನ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿಕೊಂಡು ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆಪಡಿಸುತ್ತಿದ್ದವನನ್ನು ಕಂಡು ಆತನನ್ನು ಹಿಡಿದು ವಿಚಾರಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಬಳಿಕ ಆತನನ್ನು ಮಂಗಳೂರು ನಗರ ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟಿದೆ ಎಂದು ತಿಳಿದು ಬಂದಿದೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು | ಬೋನಸ್ ಆಮಿಷ: 3.32 ಲಕ್ಷ ರೂ. ಆನ್ಲೈನ್ ವಂಚನೆ
ಮಂಗಳೂರು, ಜ.26: ಕ್ರೆಡಿಟ್ ಕಾರ್ಡ್ ಬೋನಸ್ ಬಂದಿರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ವಿವಿಧ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂ.ಗಳನ್ನು ಎಗರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 3,32,247.18 ರೂ. ಹಣವನ್ನು ವರ್ಗಾವಣೆ ಮಾಡಿಸಿ ಆರೋಪಿಗಳು ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ವ್ಯಕ್ತಿಯೊಬ್ಬರ ತಂದೆಯ ಮೊಬೈಲ್ ಗೆ ಅಪರಿಚಿತರ ಮೊಬೈಲ್ ನಂಬ್ರ-9582276944 ನಿಂದ ಕರೆ ಬಂದಿದ್ದು, ಅಪರಿಚಿತರು ಕ್ರೆಡಿಟ್ ಕಾರ್ಡ್ ಬೊನಸ್ ಬಂದಿದೆ ಎಂದು ತಿಳಿಸಿರುತ್ತಾರೆ. ನಂತರ ಅಪರಿಚಿತರ ಮಾತನ್ನು ನಂಬಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು | ಕಾರಿನಲ್ಲಿ ಮಾರಕಾಸ್ತ್ರ ಸಾಗಾಟ ಪತ್ತೆ : ಪ್ರಕರಣ ದಾಖಲು
ಮಂಗಳೂರು, ಜ.26: ಮುಡಿಪು ಚೆಕ್ ಪೋಸ್ಟ್ ಬಳಿ ಶನಿವಾರ ರಾತ್ರಿ ಕಾರಿನಲ್ಲಿವ್ಯಕ್ತಿಯೊಬ್ಬನು ಮಾರಕಾಸ್ತ್ರ ವನ್ನು ಕೊಂಡೊಯ್ಯುತ್ತಿರುವುದನ್ನು ಕೊಣಾಜೆ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ. ಕೊಣಾಜೆ ಪೊಲೀಸ್ ಠಾಣೆಯ ಎಎಸ್ಐ ಮೋಹನ್ ಎಲ್ ಅವರು ಸಿಬ್ಬಂದಿಯೊಂದಿಗೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ತಡರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮುಡಿಪು ಚೆಕ್ ಪೋಸ್ಟ್ ಬಳಿ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ 6 ಇಂಚು ಮರದ ಇಡಿ ಇರುವ 2 ಅಡಿ ಉದ್ದದ ತುದಿ ಬೆಂಡಾಗಿರುವ ಮಚ್ಚು ಪತ್ತೆಯಾಗಿದೆ. ಈ ಮಚ್ಚನ್ನು ಆರೋಪಿಯು ಅಕ್ರಮವಾಗಿ ತಡರಾತ್ರಿಯಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಕೊಂಡೊಯ್ಯುತ್ತಿದ್ದ ಎನ್ನಲಾಗಿದ್ದು, ಕಾರನ್ನು ಮಾರಕಾಸ್ತ್ರ ಸಮೇತ ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Venezuelaದಲ್ಲಿ ಅಮೆರಿಕಾದಿಂದ ರಹಸ್ಯ ಅಸ್ತ್ರ ಬಳಕೆ: ಟ್ರಂಪ್
ವಾಷಿಂಗ್ಟನ್, ಜ.26: ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಸೆರೆ ಹಿಡಿಯಲು ಅಮೆರಿಕಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎದುರಾಳಿಗಳನ್ನು ‘ದಿಗ್ಭ್ರಮೆಗೊಳಿಸುವ’ ರಹಸ್ಯ ಅಸ್ತ್ರವನ್ನು ಅಮೆರಿಕಾ ಬಳಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೆನೆಝುವೆಲಾದ ಪಡೆಗಳ ಬಳಿ ರಷ್ಯ ಮತ್ತು ಚೀನಾದ ರಾಕೆಟ್ಗಳಿದ್ದವು. ಆದರೆ ನಮ್ಮ ರಹಸ್ಯ ಅಸ್ತ್ರವನ್ನು ಪ್ರಯೋಗಿಸಿದಾಗ ಅವು ನಿಷ್ಕ್ರಿಯಗೊಂಡವು. ನಾವು ಅಧ್ಯಕ್ಷರ ಅರಮನೆಯೊಳಗೆ ಪ್ರವೇಶಿಸಿದರೂ ಅವರು ರಾಕೆಟ್ನ ಬಟನ್ ಒತ್ತುತ್ತಲೇ ಇದ್ದರು. ಆದರೆ ರಾಕೆಟ್ಗಳು ನಿಷ್ಕ್ರಿಯವಾಗಿದ್ದವು. ನಾವು ರಾಜಧಾನಿ ಕ್ಯಾರಕಾಸ್ನಲ್ಲಿ ಬಹುತೇಕ ಎಲ್ಲಾ ದೀಪಗಳನ್ನೂ ಆರಿಸಿದ್ದೆವು’ ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಎಲ್ಲವನ್ನೂ ಪರಿಶೀಲಿಸುತ್ತೇವೆ: ಮಿನ್ನಿಯಾಪೋಲಿಸ್ ಗುಂಡಿನ ದಾಳಿ ಬಳಿಕ ಟ್ರಂಪ್ ಹೇಳಿಕೆ
ವಾಷಿಂಗ್ಟನ್, ಜ.26: ಶನಿವಾರ ಮಿನ್ನಿಯಾಪೋಲಿಸ್ನಲ್ಲಿ ವಲಸೆ ಅಧಿಕಾರಿಗಳ ಗುಂಡಿನ ದಾಳಿಯಲ್ಲಿ 37 ವರ್ಷದ ನರ್ಸ್ ಅಲೆಕ್ಸ್ ಪ್ರೆಟ್ಟಿ ಸಾವನ್ನಪ್ಪಿದ ಬಳಿಕ, ತನ್ನ ಆಡಳಿತವು ‘ಎಲ್ಲವನ್ನೂ ಪರಿಶೀಲಿಸುತ್ತಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಘಟನೆಯ ಸಂದರ್ಭದಲ್ಲಿ ಅಧಿಕಾರಿಯ ನಡೆ ಸರಿಯೇ ಎಂಬ ಪ್ರಶ್ನೆಗೆ ಟ್ರಂಪ್, ‘ನಾವು ಪರಿಶೀಲಿಸುತ್ತೇವೆ. ನಾವು ಎಲ್ಲವನ್ನೂ ಪರಿಶೀಲಿಸುತ್ತೇವೆ ಮತ್ತು ಒಂದು ನಿರ್ಣಯಕ್ಕೆ ಬರುತ್ತೇವೆ’ ಎಂದು ಉತ್ತರಿಸಿದ್ದಾರೆ. ಅಂತಿಮವಾಗಿ ನಗರದಿಂದ ವಲಸೆ ಅಧಿಕಾರಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ ಕಾಲಮಿತಿ ನೀಡಿಲ್ಲ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಈ ನಡುವೆ, ರವಿವಾರ ಮಿನ್ನಿಯಾಪೋಲಿಸ್ ಹಾಗೂ ಅಮೆರಿಕಾದ ಇತರ ನಗರಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಈ ಘಟನೆ ಫೆಡರಲ್ ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳ ನಡುವೆ ಹೊಸ ತಿಕ್ಕಾಟಕ್ಕೆ ನಾಂದಿ ಹಾಡಿದೆ. ಟ್ರಂಪ್ ಆಡಳಿತವು ಪ್ರೆಟ್ಟಿಯ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದು, ಪ್ರೆಟ್ಟಿ ಪಿಸ್ತೂಲನ್ನು ಝಳಪಿಸುತ್ತಿದ್ದರಿಂದ ಗುಂಡು ಹಾರಿಸಬೇಕಾಯಿತು ಎಂದು ಪ್ರತಿಪಾದಿಸಿದೆ. ಸ್ಥಳೀಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಪ್ರೆಟ್ಟಿಯ ಕೈಯಲ್ಲಿದ್ದ ಪಿಸ್ತೂಲ್ ನೋಂದಾಯಿತವಾಗಿತ್ತು ಮತ್ತು ಪಿಸ್ತೂಲನ್ನು ಕಸಿದುಕೊಂಡ ಬಳಿಕವೇ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ಆಡಳಿತಕ್ಕೆ ಕೆಲವು ಪ್ರಮುಖ ರಿಪಬ್ಲಿಕನ್ನರಿಂದಲೂ ಒತ್ತಡ ಎದುರಾಗಿದ್ದು, ವ್ಯಾಪಕ ತನಿಖೆ ನಡೆಸಬೇಕೆಂಬ ಡೆಮಾಕ್ರಟಿಕ್ ಪಕ್ಷದ ಆಗ್ರಹಕ್ಕೆ ಧ್ವನಿ ಸೇರಿಸಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆ: ಬಾಂಬ್ ಸ್ಫೋಟಿಸಿ 11 ಭದ್ರತಾ ಸಿಬ್ಬಂದಿಗೆ ಗಾಯ
ರಾಯ್ಪುರ, ಜ. 26: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ರವಿವಾರ ನಡೆಸಲಾದ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವೇಳೆ ಆರು ಸ್ಫೋಟಗಳು ಸಂಭವಿಸಿ 11 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ‘‘ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗೆ ರಾಯ್ಪುರಕ್ಕೆ ಹೆಲಿಕಾಪ್ಟರ್ನಲ್ಲಿ ಒಯ್ಯಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ’’ ಎಂದು ಇನ್ಸ್ಪೆಕ್ಟರ್ ಜನರಲ್ ಸುಂದರ್ರಾಜ್ ಪಿ. ಹೇಳಿದರು. ಛತ್ತೀಸ್ಗಢ–ತೆಲಂಗಾಣ ಗಡಿಯಲ್ಲಿರುವ ಕರೆಗುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಇದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಬಾಂಬ್ಗಳು ಸ್ಫೋಟಗೊಂಡಿವೆ. ಆ ಪ್ರದೇಶವನ್ನು ಮಾವೋವಾದಿಗಳ ಸಶಸ್ತ್ರ ಘಟಕ ‘ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ’ಯ ಮೊದಲ ಬೆಟಾಲಿಯನ್ನ ಭದ್ರಕೋಟೆ ಎಂದು ಭಾವಿಸಲಾಗಿದೆ. ಸ್ಫೋಟಗಳು ವಿವಿಧ ಹಂತಗಳಲ್ಲಿ ಸಂಭವಿಸಿವೆ. ಮೂವರು ಭದ್ರತಾ ಸಿಬ್ಬಂದಿಗೆ ಕಾಲುಗಳಲ್ಲಿ ತೀವ್ರ ಗಾಯಗಳಾಗಿವೆ. ಇತರ ಮೂವರಿಗೆ ಕಣ್ಣಿನ ಗಾಯಗಳಾಗಿವೆ. ರಾಜ್ಯದಲ್ಲಿ ಈ ವರ್ಷ ನಡೆಸಲಾಗಿರುವ ಮಾವೋ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು 20 ಮಾವೋವಾದಿಗಳು ಹತರಾಗಿದ್ದಾರೆ.
Mexico: ಫುಟ್ಬಾಲ್ ಪಂದ್ಯದ ಸಂದರ್ಭ ಶೂಟೌಟ್ನಲ್ಲಿ 11 ಮೃತ್ಯು
ಮೆಕ್ಸಿಕೋ ಸಿಟಿ, ಜ.26: ಮಧ್ಯ ಮೆಕ್ಸಿಕೋದ ಗ್ವಾನಾಜುವಾಟೊ ರಾಜ್ಯದ ಸಲಮ್ಯಾಂಕ ನಗರದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಮೈದಾನದಲ್ಲಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿರುವುದಾಗಿ ನಗರದ ಮೇಯರ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಸಲಮ್ಯಾಂಕ ನಗರದ ಲೊಮ ಡೆ ಫ್ಲೋರ್ಸ್ ಪ್ರದೇಶದಲ್ಲಿ ಹವ್ಯಾಸಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗ ದಾಳಿ ನಡೆದಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶಕ್ಕೆ ಇದೀಗ ಅಂಡರ್ 19 ಕ್ರಿಕೆಟ್ ನಲ್ಲಿ ಮುಖಭಂಗ!
ICC U19 World Cup 2026- ಐಸಿಸಿ ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶ ಇದೀಗ ಅಂಡರ್ 19 ವಿಶ್ವಕಪ್ನಲ್ಲಿ ಪರಾಭವಗೊಂಡು ಹೊರಬೀಳುವ ಹಂತದಲ್ಲಿದೆ. ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ಪರಾಭವಗೊಳ್ಳುವುದರೊಂದಿಗೆ ಬಾಂಗ್ಲಾ ತಂಡದ ಸೆಮಿಫೈನಲ್ ಕನಸು ಬಹುತೇಕ ಅಂತ್ಯಗೊಂಡಿದೆ. ಟಿ20 ವಿಶ್ವಕಪ್ ಅನ್ನು ಸ್ವಯಂಕೃತಾಪರಾಧದಿಂದ ಕಳೆದುಕೊಂಡಿರುವ ಬಾಂಗ್ಲಾದೇಶ ಇದೀಗ ಕಿರಿಯರ ಕ್ರಿಕೆಟ್ ನಲ್ಲಿ ಹಿನ್ನಡೆ ಅನುಭವಿಸಿರುವುದು ಭಾರತದ ನೆರೆ ರಾಷ್ಟ್ರದ ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ.
ರಿಮ್ಸ್ ನಿರ್ದೇಶಕ ಡಾ.ರಮೇಶ್ ಬಿ ಅವರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಡಾ.ರಝಾಕ್ ಉಸ್ತಾದ್
ರಾಯಚೂರು: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಯಲ್ಲಿ ಲಭ್ಯವಿರುವ ವಿವಿಧ ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಲ್ಲಿ ಸಂಸ್ಥೆಯ ಡೀನ್ ಡಾ.ರಮೇಶ್ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುವಾಗ ಕಲ್ಯಾಣ ಕರ್ನಾಟಕದ ಹೊರಗಿನ (ನಾನ್ ಹೆಚ್ ಕೆ) ಉದ್ಯೋಗಿಗಳಿಗೆ ಅವಕಾಶ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅವಕಾಶವಂಚಿತರಾಗಿಸುತ್ತಿದ್ದಾರೆ. ರಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ರಮೇಶ್ ಬಿ.ಎಚ್. ಅವರು ಕಲ್ಯಾಣ ಕರ್ನಾಟಕ ಪ್ರದೇಶದವರಲ್ಲ. ಹಾಗಾಗಿ ಈ ಭಾಗದವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿಯಲ್ಲಿ ನಡೆಸಲಾಗುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಪ್ರಾಚಾರ್ಯರನ್ನು 371ಜೆ ನಿಯಮದಂತೆ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ವಹಿಸುವಂತೆ ಕೋರಲಾಗಿತ್ತು, ಅದರಂತೆ ತಾವು ಡೀನ್ ಡಾ.ರಮೇಶ್ ಬಿ.ಎಚ್. ರವರಿಗೆ ಸೂಚಿಸಿದಾಗಲೂ ಇಲ್ಲಿಯವರೆಗೆ ಕ್ರಮವಹಿಸಿರುವದಿಲ್ಲ. ವಿದ್ಯಾರ್ಹತೆಯಲ್ಲಿ ಕಡಿಮೆ ಅರ್ಹತೆ, ಕಡಿಮೆ ಅನುಭವ ಹೊಂದಿರುವ, ಇತ್ತೀಚಿಗೆ ಎಂ.ಎಸ್ಸಿ. ನರ್ಸಿಂಗ್ ಪೂರೈಸಿದ ಉದ್ಯೋಗಿಗೆ ನರ್ಸಿಂಗ್ ಕಾಲೇಜು ಪ್ರಾಚಾರ್ಯರ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದು 371ಜೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಬಿಎಸ್ಸಿ ನರ್ಸಿಂಗ್ ಕಾಲೇಜಿಗೆ ಕ್ಲಿನಿಕಲ್ ನರ್ಸಿಂಗ್ ವಿಭಾಗದಿಂದ ನಿಯೋಜನೆ ಮಾಡುವಾಗ 371ಜೆ ನಿಯಮಗಳನ್ವಯ ಮೆರಿಟ್ ಆಧಾರದಲ್ಲಿ ಹಾಗೂ ಶೇ 75 ರಷ್ಟು ಕಲ್ಯಾಣ ಕರ್ನಾಟಕದವರಿಗೆ ಮಾಡಬೇಕು ಹಾಗೂ ಅರ್ಹತೆ, ಅನುಭವ, ಜೇಷ್ಠತೆಯ ಆಧಾರದಲ್ಲಿ ನಿಯೋಜನೆ ಮಾಡಬೇಕು. ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸಬೇಕು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವುದರಿಂದ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಸಂಸ್ಥೆಯ ಡೀನ್( ನಿರ್ದೇಶಕರು) ಹುದ್ದೆಗೆ ನೇಮಿಸಬೇಕು. ಸಂಸ್ಥೆಯಲ್ಲಿ ಲಭ್ಯವಿರುವ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡುವಾಗ 371ಜೆ ನಿಯಮದಂತೆ ಮೀಸಲಾತಿ ನಿಗದಿಗೊಳಿಸಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು. ವದು. ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಪ್ರಾಚಾರ್ಯರನ್ನಾಗಿ ನೇಮಿಸಬೇಕು. ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇರುವದರಿಂದ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದವರನ್ನೇ ಸಂಸ್ಥೆಯ ಡೀನ್( ನಿರ್ದೇಶಕರು) ಹುದ್ದೆಗೆ ನೇಮಿಸಬೇಕು. ಸಂಸ್ಥೆಯಲ್ಲಿ ಲಭ್ಯವಿರುವ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜನೆ ಮಾಡುವಾಗ 371ಜೆ ನಿಯಮದಂತೆ ಮೀಸಲಾತಿ ನಿಗದಿಗೊಳಿಸಿ ನಿಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.
ಹುತಾತ್ಮರ ಕನಸು ನನಸು ಮಾಡಬೇಕು : ವಿದ್ಯಾರ್ಥಿಗಳಿಗೆ ಕೆ.ವಿ.ಪ್ರಭಾಕರ್ ಕರೆ
ಮಂಗಳೂರು ವಿವಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ
ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರ ಖಡಕ್ ಆದೇಶ; ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸುವುದು ಇನ್ಮುಂದೆ ಕಡ್ಡಾಯ
ಬೆಂಗಳೂರು: ಕರ್ನಾಟಕ ಸರ್ಕಾರದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ಅಲ್ಲದೇ ಇನ್ಮುಂದೆ ಅವರು ಕರೆ ಮಾಡಿದಾಗ ಕಡ್ಡಾಯವಾಗಿ ಸ್ವೀಕರಿಸುವಂತೆ ರಾಜ್ಯ ಸರ್ಕಾರವು ಖಡಕ್ ಆದೇಶ ಹೊರಡಿಸಿದೆ. ಇನ್ಮುಂದೆ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು
Vijayapura | ಹಿಂದೂ ಸಮಾವೇಶದಲ್ಲಿ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅವಮಾನ: ಡಿವಿಪಿ ಆರೋಪ
ವಿಜಯಪುರ: ವಿಜಯಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು, ಕೂಡಲೇ ಜಿಲ್ಲಾಡಳಿತವು ಆ ಸಂಘಟಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಒತ್ತಾಯಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಜಲನಗರದ ಬಿಡಿಎ ಮೈದಾನದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಅವರು ಭಾರತವೆಂದರೆ ಕೇವಲ ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜ ಅಲ್ಲ ಎಂದು ಹೇಳಿ, ನಮ್ಮ ದೇಶದ ಶ್ರೇಷ್ಠ ಸಂವಿಧಾನಕ್ಕೆ, ಅಂಬೇಡ್ಕರ್, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರ ಮೇಲೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಂವಿಧಾನಕ್ಕೆ, ಅಂಬೇಡ್ಕರ್, ರಾಷ್ಟ್ರಧ್ವಜ ಅಪಮಾನ ಮಾಡುವುದು ಹಿಂದೂ ಸಮಾವೇಶವೇ ಎಂದು ಅವರು ಪ್ರಶ್ನಿಸಿದರು. ಹಿಂದೂ ಸಮಾವೇಶ ಅಂದರೆ ಹಿಂದೂಗಳ ಹಿನ್ನೆಲೆ, ಅವರ ಉಗಮದ ಬಗ್ಗೆ ಹೇಳಿ. ಅದನ್ನು ಬಿಟ್ಟು, ಸಂವಿಧಾನ, ರಾಷ್ಟ್ರಧ್ವಜ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ಹಿಂದೂ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ. ದೇಶದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕು ಸಂವಿಧಾನ ನೀಡಿದೆ. ಜನರಿಗೆ ಒಳ್ಳೆಯ ಸಂದೇಶ ನೀಡುವುದನ್ನು ಬಿಟ್ಟು ಸಮಾಜದಲ್ಲಿ ಒಡಕು ಮಾಡುವ ಕೆಲಸ ಮಾಡಬೇಡಿ ಎಂದರು. ಇಂದು ಹಿಂದೂ ಸಮಾವೇಶ ಹೆಸರಲ್ಲಿ ಸುಳ್ಳನ್ನೇ ಅಫೀಮ್ ರೀತಿ ಹೇಳಿ, ಸಮಾಜದಲ್ಲಿ ಜಗಳ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ನೀವು ಏನು ಮಾಡಲು ಹೊರಟಿದ್ದೀರಿ ಎನ್ನುವುದನ್ನು ನೇರವಾಗಿ ಹೇಳಿ. ಇಷ್ಟವಾದರೆ ನಿಮ್ಮ ಜತೆ ಬರುತ್ತಾರೆ. ಇಲ್ಲದಿದ್ದರೆ ಬಿಡುತ್ತಾರೆ. ಅದನ್ನು ಬಿಟ್ಟು ಸುಳ್ಳು ಹುಟ್ಟು ಹಾಕಿ ಹೇಳಿಬೇಡಿ. ಕೂಡಲೇ ನೀವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇವರ ಮೇಲೆ ಕಾನೂನ ಕ್ರಮ ಜರುಗಿಸಬೇಕು. ಇನ್ನೂ ನಗರದಲ್ಲಿ ಮೂರು ಕಡೆ ಸಮಾವೇಶ ಮಾಡಲು ಹೊರಟಿದ್ದಾರೆ. ಅಲ್ಲಿ ಇದೇ ತರಹ ಮಾತುಗಳು ಬಂದರೆ ನಾವು ಕಾರ್ಯಕ್ರಮಕ್ಕೆ ಅಡ್ಡಿ ಪಡೆಸುತ್ತೇವೆ. ನೀವು ಕ್ಷೇಮೆ ಕೇಳಿ ಮುಂದಿನ ಕಾರ್ಯಕ್ರಮ ಆಯೋಜನೆ ಮಾಡದಿದ್ದರೆ ನಾವು ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ವಿರೇಶ ತೆಗ್ಗಿನಮನಿ ಸೇರಿದಂತೆ ಮುಂತಾದವರು ಇದ್ದರು.
Gujarat : ನೆರೆಕರೆಯವರ ಜಗಳದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಅಹ್ಮದಾಬಾದ್, ಜ.26: ಮನೆಯ ಹೊರಗೆ ಕುಳಿತುಕೊಳ್ಳುವ ಕುರಿತ ಕ್ಷುಲ್ಲಕ ವಿವಾದವು ಕ್ರೂರ ಹತ್ಯೆಗೆ ಕಾರಣವಾದ ಘಟನೆ ಗುಜರಾತ್ನ ಗಾಂಧಿಧಾಮದ ಸತ್ರಾಹಜಾರ್ ಜುನ್ಪಾಡಾ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ಮಧ್ಯವಯಸ್ಕ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ನೆರೆಕರೆಯವರು, ಜೀವಭಯದಿಂದ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಬೆನ್ನಟ್ಟಿ, ಆತನ ಮನೆಯ ಬಾತ್ರೂಮಿನಲ್ಲಿ ಮೈಮೇಲೆ ಡೀಸಿಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತ ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕರ್ಸನ್ಭಾಯಿ ಮಹೇಶ್ವರಿ ಮೃತವ್ಯಕ್ತಿಯಾಗಿದ್ದು, ಅವಿವಾಹಿತನಾಗಿದ್ದ ಆತ ತಾಯಿಯೊಂದಿಗೆ ವಾಸವಾಗಿದ್ದ. ಶುಕ್ರವಾರ ಮಧ್ಯಾಹ್ ನೆರೆಕರೆಯವರೊಂದಿಗೆ ನಡೆದ ಮಾಮೂಲು ಜಗಳ ಉಲ್ಬಣಗೊಂಡು ಆತನ ಜೀವವನ್ನು ಬಲಿಪಡೆದಿದೆ. ಮೃತನ ಸೋದರನ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮೂವರು ಮಹಿಳೆಯರು ಮತ್ತು ಓರ್ವ ಅಪರಿಚಿತ ಪುರುಷನನ್ನು ಆರೋಪಿಗಳೆಂದು ಹೆಸರಿಸಿದ್ದಾರೆ. ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ದ.ಕ.ಜಿಲ್ಲಾ ಕಾಂಗ್ರೆಸ್ನಿಂದ ಗಣರಾಜ್ಯೋತ್ಸವ ಆಚರಣೆ
ಮಂಗಳೂರು, ಜ.26: ಸಂವಿಧಾನ ಆಶಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎತ್ತಿಹಿಡಿಯುವ ಕೆಲಸ ಸರಕಾರಗಳು ಮಾಡಬೇಕು. ಸರಕಾರ ಸಂವಿಧಾನ ವಿರೋಧಿ ನೀತಿ ಜಾರಿಗೆ ತಂದರೆ ಸಂವಿಧಾನದ ಮೂಲ ಆಶಯಗಳು ನಾಶವಾಗುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 77ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ರಾಜ್ಯ ಕಾಂಗ್ರೆಸ್ ಸರಕಾರ ಸಂವಿಧಾನದ ಆಶಯದಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮಸಮಾಜ ನಿರ್ಮಾಣಕ್ಕೆ ಪಣತೊಟ್ಟಿದೆ. ಸಂವಿಧಾನ ಮತ್ತು ಅದರ ಆಶಯಗಳನ್ನು ರಕ್ಷಿಸಲು ಕಾಂಗ್ರೆಸ್ ಸದಾ ಸಿದ್ಧವಾಗಿದೆ ಎಂದು ಹೇಳಿದರು. ಮನಮೋಹನ ಸಿಂಗ್ ಅವರು ದೇಶ ಪ್ರಧಾನಿ ಆಗಿದ್ದಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಿ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಬಲ ನೀಡಿದ್ದರು. ಈಗ ಈ ಉದ್ಯೋಗದ ಹಕ್ಕನ್ನೇ ಕಸಿಯುವ ಕೆಲಸಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ ಎಂದರು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಕೆ.ಕೆ.ಶಾಹುಲ್ ಹಮೀದ್, ಅಪ್ಪಿ.ಎಸ್, ಉಷಾ ಅಂಚನ್, ದಿನೇಶ್ ಮುಳೂರು, ಮುಖಂಡರಾದ ಜಯಶೀಲ ಅಡ್ಯಂತಾಯ, ಡೆನ್ನಿಸ್ ಡಿಸಿಲ್ವ, ನೀರಜ್ ಚಂದ್ರಪಾಲ್, ಟಿ.ಕೆ.ಸುಧೀರ್, ನವೀನ್ ಡಿಸೋಜಾ, ಶುಭೋದಯ ಆಳ್ವ, ಭಾಸ್ಕರ್ ರಾವ್, ಶಬ್ಬೀರ್.ಎಸ್, ಅಶೋಕ್ ಡಿ.ಕೆ, ನಮಿತಾ ಡಿ ರಾವ್, ಮಂಜುಳ ನಾಯಕ್, ರಮಾನಂದ ಪೂಜಾರಿ, ಆಲ್ವಿನ್ ಪ್ರಕಾಶ್, ಮೋಹನ್ ದಾಸ್ ಕೊಟ್ಟಾರಿ, ಕೃಷ್ಣ ಶೆಟ್ಟಿ, ಪ್ರೇಮ್, ದುರ್ಗಾ ಪ್ರಸಾದ್, ರವಿರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿ ಸೋಜ ಧ್ವಜ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದರು.
ಭಟ್ಕಳ | ಮುರ್ಡೇಶ್ವರ ಬಳಿ ಬಸ್–ಬೈಕ್ ನಡುವೆ ಅಪಘಾತ: ಸವಾರ ಮೃತ್ಯು
ಭಟ್ಕಳ: ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಬಸ್ತಿ ಮಕ್ಕಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಸಮೀಪದ ತೆರ್ನಮಕ್ಕಿ ನಿವಾಸಿ ಜೋಸೆಫ್ ಡಿ’ಸೋಜಾ (40) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಸುಮಾರು ಎಂಟು ಗಂಟೆ ಸುಮಾರಿಗೆ ಭಟ್ಕಳದಿಂದ ಹೊನ್ನಾವರ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ರಸ್ತೆ ದಾಟುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದೆ. ಢೀಕ್ಕಿಯ ತೀವ್ರತೆಗೆ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಮರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದರ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಮರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಟಾಸ್ಕ್ ಫೋರ್ಸ್ ಸಮಿತಿ ಸಮನ್ವಯತೆಯಿಂದ ಕೆಲಸ ಮಾಡಲಿದೆ: ಸಚಿವ ಶರಣಪ್ರಕಾಶ್ ಪಾಟೀಲ್
ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳುಗಣಿಗಾರಿಕೆ ತಡೆಯಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಅಧಿಕಾರಿಗಳಿಗೆ ಸಮನ್ವಯತೆಯಿಂದ ಕೆಲಸ ಮಾಡಲು ನಿರ್ದೇಶನ ನೀಡಲಾಗುವುದು, ಅಕ್ರಮ ಗಣಿಗಾರಿಕೆ ತಡೆಯಲು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ದೇವದುರ್ಗ ಶಾಸಕಿ ಜಿ.ಕರೆಯಮ್ಮ ನಾಯಕ ಅವರ ಮನೆಗೆ ನುಗ್ಗಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಿರ್ಲಕ್ಷಿಸಿಲ್ಲ. ಈಗಾಗಲೇ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಯಾವುದೇ ಹೊಂದಾಣಿಕೆ ಇಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಡಿಸಿ, ಎಸ್ಪಿಯವರಿಗೆ ಸೂಚಿಸಲಾಗಿದೆ. ಟೆಂಡರ್ ಆಗಿರುವ ಮರಳು ಕೇಂದ್ರಗಳಿಂದ ಕಾನೂನು ಬದ್ದವಾಗಿ ವಿಲೇವಾರಿ ನಡೆಸುವಂತೆ ಸೂಚಿಸಲಾಗುತ್ತದೆ. ಯಾವುದೇ ಅಕ್ರಮ ಚಟುವಟಿಕೆಗಳಿಗೆ ನಾನು ಬೆಂಬಲಿಸುವುದಿಲ್ಲ. ಯಾರನ್ನೂ ರಕ್ಷಿಸುವೂದೂ ಇಲ್ಲ ಎಂದು ಸ್ಪಷ್ಚಪಡಿಸಿದರು. ರಾಯಚೂರು ಶಾಖೋತ್ಪನ್ನ ಕೇಂದ್ರ ಮಾತ್ರವಲ್ಲ, ಜಿಲ್ಲೆಯಲ್ಲಿ ಏಲ್ಲಿಯೂ ಅಣುಸ್ಥಾವರ ಸ್ಥಾಪನೆಗೆ ಸಹಮತವಿಲ್ಲ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಸೂಚಿಸಲಾಗಿದೆ. ಕೇಂದ್ರದಿಂದ ಅಣುಸ್ಥಾವರ ಅಧಿಕಾರಿಗಳು ಭೇಟಿ ನೀಡಿರುವ ಕುರಿತು ಮಾಹಿತಿಯಿಲ್ಲ. ರಾಜ್ಯದೊಂದಿಗೆ ಯಾವುದೇ ಸಮಾಲೋಚನೆಯೂ ನಡೆದಿಲ್ಲ. ಈ ಕುರಿತು ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿಯಲ್ಲಿ ಅಣುಸ್ಥಾವರ ಸ್ಥಾಪಿಸುವ ಕುರಿತು ಮಾಹಿತಿ ಕೇಳಿದಾಗ ಜನರ ವಿರೋಧ ಇರುವುದಾಗಿ ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಸರಕಾರ ಅಣುಸ್ಥಾವರ ಸ್ಥಾಪಿಸುವ ಕುರಿತು ಸ್ಪಷ್ಟತೆಯಿಲ್ಲ. ಅಧಿಕಾರಿಗಳು ಭೇಟಿಯಾದ ಕುರಿತು ಮಾಹಿತಿ ಪಡೆಯಲಾಗುತ್ತದೆ ಎಂದರು. ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು 40 ಕೋಟಿ ರೂ ವೆಚ್ಚದ ಯಂತ್ರೋಪಕರಣ ಖರೀದಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ. ಏಮ್ಸ್ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮುಂದುವರೆದಿದ್ದು ಮುಖ್ಯಮಂತ್ರಿಗಳು ಮತ್ತೊಂದು ಪತ್ರ ಬರೆದು ಆಗ್ರಹಿಸಿದ್ದಾರೆ. ಮಕ್ಕಳ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸುವ ಕುರಿತು ಪ್ರಸ್ತಾವನೆಯಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುತ್ತದೆ. ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಸ್ವಯಂಸೇವಾ ಸಂಸ್ಥೆಯೊಂದಿಗೆ ಸೇರಿ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿ ರೂಪುರೇಷ ರೂಪಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕ ದದ್ದಲ ಬಸನಗೌಡ, ಪರಿಷತ್ ಸದಸ್ಯ ಎ.ವಸಂತಕುಮಾರ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಿಸಿ ನಿತೀಶ್, ಎಸ್ಪಿ ಅರುಣಾಂಶ್ಷುಗಿರಿ, ಜಿ.ಪಂ ಸಿಇಒ ಈಶ್ವರ ಕಾಂದೂ, ಜುಬಿನ್ ಮಹೊಪಾತ್ರ ಉಪಸ್ಥಿತರಿದ್ದರು.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ಸಂಜೆ ಜಿಟಿ ಜಿಟಿ ಮಳೆ ಸುರಿದಿದ್ದು, ಇನ್ನೆರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಸೋಮವಾರ ಬೆಐಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಬಳಿಕ ನಗರದ ವಿವಿಧ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ಸುರಿಯಿತು. ಅದರಲ್ಲೂ ಹೆಬ್ಬಾಳ, ಆರ್ಟಿನಗರ, ಯಲಹಂಕ, ಸದಾಶಿವ ನಗರ, ವಿಧಾನಸೌಧ, ಮಡಿವಾಳ, ಲಕ್ಕಸಂದ್ರ, ಶಾಂತಿನಗರ, ಕೆ.ಎಚ್. ರಸ್ತೆ ಸೇರಿದಂತೆ ಅನೇಕ ಕಡೆ ಮಳೆ ಬಿದ್ದಿದೆ. ಈ ಜಿಟಿ ಜಿಟಿ ಮಳೆಯಿಂದ ಸಂಜೆ ಮನೆಗೆ ತಲುಪಬೇಕಾದ ವಾಹನ ಸವಾರರು ರಸ್ತೆಯಲ್ಲಿ ಸಿಲುಕಿದ್ದ ದೃಶ್ಯ ಕಂಡಿತು. ಕೆಲ ದಿನಗಳಿಂದ ಹಲವು ಜಿಲ್ಲೆಗಲ್ಲಿ ಮಳೆಯಾಗುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಹಾಸನ, ಕೊಡಗು, ಚಾಮರಾಜನಗರ ಸೇರಿದಂತೆ ಹಲವು ಕಡೆ ಮಳೆ ಸಾಧ್ಯತೆ ಇದೆ.
ರಾಯಚೂರು| ಬಾಕಿ ವೇತನ ಪಾವತಿಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಕಾರ್ಮಿಕರಿಂದ ಪ್ರತಿಭಟನೆ
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಯರಮರಸ್ ವೃತ್ತದ ಗ್ಯಾಂಗ್ಮನ್ ಕಾರ್ಮಿಕರ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ(ಟಿಯುಸಿಐ)ದ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಕಳೆದ 30 ವರ್ಷಗಳಿಂದ ದಿನಗೂಲಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅವರಿಗೆ ವೇತನ ಪಾವತಿಯಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಯರಮರಸ್ ವಲಯದ 748 ಗ್ಯಾಂಗ್ಮನ್ ಕಾರ್ಮಿಕರಿಗೆ ಏಪ್ರಿಲ್ನಿಂದ ಇಲ್ಲಿಯವರೆಗೆ ವೇತನ ಪಾವತಿ ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ನೀಡಿದಾಗಲೂ ಇಲಾಖೆಯಿಂದ ವೇತನ ಪಾವತಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ. ಅಮೀರ್ ಅಲಿ, ರಾಜ್ಯ ಉಪಾಧ್ಯಕ್ಷ ಎಂ ಗಂಗಾಧರ, ಸಂಘದ ಪ್ರಧಾನ ಕಾರ್ಯದರ್ಶಿ ಜಿ ಅಡವಿರಾವ್, ರುಕ್ಕಪ್ಪ ಮಾನ್ವಿ, ಸಂಘದ ಹಿರಿಯ ಮುಖಂಡ ರಮೇಶ್ ಕೊಟ್ನೆಕಲ್, ಶರಣಪ್ಪ ಕೌತಾಳ್, ಅಮರೇಗೌಡ ಸಿರಿವಾರ್, ರಾಮಣ್ಣ ಪೋತ್ನಾಳ್, ಸಿದ್ದನಗೌಡ ಗಿಲ್ಲಿ ಕಸ್ತೂರ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
2030ರ ವೇಳೆಗೆ ಭಾರತದಿಂದ ಮಲೇರಿಯಾ ನಿರ್ಮೂಲನೆ ಸಾಧ್ಯವೇ?
2016ರಲ್ಲಿ ಮಲೇರಿಯಾ ನಿರ್ಮೂಲನೆಗಾಗಿ ರಾಷ್ಟ್ರೀಯ ಚೌಕಟ್ಟಿನಡಿ (2016–2030) 2030ರ ವೇಳೆಗೆ ಮಲೇರಿಯಾ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತ ನಿಗದಿಪಡಿಸಿದೆ. 2025ರ ಅಂತ್ಯದ ವೇಳೆಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MOHFW) ಕಣ್ಗಾವಲು ಹಾಗೂ ನಿರಂತರ ಮಧ್ಯಸ್ಥಿಕೆಗಳ ಫಲವಾಗಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 160 ಜಿಲ್ಲೆಗಳಲ್ಲಿ 2022ರಿಂದ 2024ರವರೆಗೆ ಮಲೇರಿಯಾ ಪ್ರಕರಣಗಳೇ ವರದಿಯಾಗಿಲ್ಲ ಎಂದು ತಿಳಿಸಿದೆ. ಇದು ಮಹತ್ವದ ಮೈಲುಗಲ್ಲು ಎಂದೇ ಹೇಳಬೇಕು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, “ಎಲ್ಲಾ ಮಾನವ ಮಲೇರಿಯಾ ಪರಾವಲಂಬಿಗಳ ಸ್ಥಳೀಯ ಪ್ರಸರಣ ಸರಪಳಿಯು ಕನಿಷ್ಠ ಮೂರು ವರ್ಷಗಳ ಕಾಲ ದೇಶಾದ್ಯಂತ ಅಡಚಣೆಗೊಂಡಿದ್ದರೆ ಮತ್ತು ಸ್ಥಳೀಯ ಪ್ರಸರಣದ ಮರುಸ್ಥಾಪನೆಯನ್ನು ತಡೆಯಲು ಸಂಪೂರ್ಣ ಕ್ರಿಯಾತ್ಮಕ ಕಣ್ಗಾವಲು ಹಾಗೂ ಪ್ರತಿಕ್ರಿಯೆ ವ್ಯವಸ್ಥೆ ಜಾರಿಯಲ್ಲಿದ್ದರೆ, ಒಂದು ದೇಶಕ್ಕೆ ಮಲೇರಿಯಾ ನಿರ್ಮೂಲನಾ ಪ್ರಮಾಣೀಕರಣವನ್ನು ನೀಡಲಾಗುತ್ತದೆ.” 2025ರ ಮಧ್ಯಭಾಗದ ವೇಳೆಗೆ 47 ದೇಶಗಳು ಅಥವಾ ಪ್ರಾಂತ್ಯಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಮಲೇರಿಯಾ ಮುಕ್ತ ಪ್ರಮಾಣೀಕರಣವನ್ನು ಪಡೆದಿವೆ. ಭಾರತ ಯಾವ ಸ್ಥಾನದಲ್ಲಿದೆ? ವಿಶ್ವ ಮಲೇರಿಯಾ ವರದಿ–2025 ಪ್ರಕಾರ, ಭಾರತವು ತನ್ನ ಹೆಚ್ಚಿನ ಸ್ಥಳೀಯ ರಾಜ್ಯಗಳಲ್ಲಿ ಮಲೇರಿಯಾ ಪ್ರಮಾಣ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2024ರಲ್ಲಿ ಭಾರತವು ವಿಶ್ವ ಆರೋಗ್ಯ ಸಂಸ್ಥೆಯ “ಹೈ ಬರ್ಡನ್ ಟು ಹೈ ಇಂಪ್ಯಾಕ್ಟ್” ಗುಂಪಿನಿಂದ ಅಧಿಕೃತವಾಗಿ ನಿರ್ಗಮಿಸಿತು. 2015ರಿಂದ 2023ರವರೆಗೆ ದೇಶದಲ್ಲಿ ಮಲೇರಿಯಾ ಪ್ರಕರಣಗಳು ಸುಮಾರು 80%ರಷ್ಟು ಕಡಿಮೆಯಾಗಿವೆ. 2024ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅಂದಾಜು ಮಾಡಲಾದ 2.7 ಮಿಲಿಯನ್ ಮಲೇರಿಯಾ ಪ್ರಕರಣಗಳಲ್ಲಿ ಭಾರತದಲ್ಲಿನ ಪ್ರಕರಣಗಳ ಪ್ರಮಾಣ 73.3%ರಷ್ಟಿತ್ತು. ಜನರು ಪ್ರದೇಶಗಳ ನಡುವೆ ಚಲಿಸುವುದು ಮತ್ತು ಗಡಿಯಾಚೆಯಿಂದ ವಲಸೆ ಬರುವ ಜನರಿಂದ ರೋಗ ಹರಡುವಿಕೆ ಸೇರಿದಂತೆ ಹಲವು ಸವಾಲುಗಳ ಹೊರತಾಗಿಯೂ, ಭಾರತವು 2030ರ ಮಲೇರಿಯಾ ಗುರಿಗಳನ್ನು ತಲುಪುವ ಹಾದಿಯಲ್ಲಿದೆ. 2024ರ ವೇಳೆಗೆ ದೇಶವು 2015ಕ್ಕೆ ಹೋಲಿಸಿದರೆ ಈಗಾಗಲೇ 70%ಕ್ಕಿಂತ ಹೆಚ್ಚು ಮಲೇರಿಯಾ ಪ್ರಕರಣಗಳನ್ನು ಕಡಿಮೆ ಮಾಡಿದೆ. ಇದು 2025ರ ಅಂತ್ಯದ ವೇಳೆಗೆ 75% ಕಡಿತದ ಗುರಿಯನ್ನು ತಲುಪಲು ಸಾಧ್ಯ ಎಂಬುದನ್ನು ಸೂಚಿಸುತ್ತದೆ. ತಮಿಳುನಾಡನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ರಾಜ್ಯದ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಔಷಧ ನಿರ್ದೇಶನಾಲಯದ ದತ್ತಾಂಶವು ಮಲೇರಿಯಾ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ತೋರಿಸುತ್ತದೆ. 2015ರಲ್ಲಿ 5,587 ಪ್ರಕರಣಗಳಿದ್ದರೆ, 2025ರಲ್ಲಿ ಅದು 321ಕ್ಕೆ ಇಳಿದಿದೆ. 2023ರಿಂದ 38 ಜಿಲ್ಲೆಗಳ ಪೈಕಿ 33 ಜಿಲ್ಲೆಗಳು ಸ್ಥಳೀಯ ಪ್ರಕರಣಗಳೇ ಇಲ್ಲ (ಶೂನ್ಯ) ಎಂದು ವರದಿ ಮಾಡಿವೆ. ಅವುಗಳನ್ನು “ವರ್ಗ–0” (ಪುನಃ ಸ್ಥಾಪನೆ ತಡೆಗಟ್ಟುವ ಹಂತ)ಯಲ್ಲಿ ಇರಿಸಲಾಗಿದೆ. ರಾಜಧಾನಿ ಚೆನ್ನೈ ಸೇರಿದಂತೆ ಉಳಿದ ಐದು ಜಿಲ್ಲೆಗಳನ್ನು “ವರ್ಗ–1” (ನಿರ್ಮೂಲನ ಹಂತ) ಎಂದು ವರ್ಗೀಕರಿಸಲಾಗಿದೆ. ಅಲ್ಲಿ Annual Parasite Incidence (API) — ಅಂದರೆ ಒಂದು ನಿರ್ದಿಷ್ಟ ವರ್ಷದೊಳಗೆ ಪ್ರತಿ 1,000 ನಿವಾಸಿಗಳಿಗೆ ದೃಢಪಟ್ಟ ಮಲೇರಿಯಾ ಪ್ರಕರಣಗಳ ಸಂಖ್ಯೆ — ಅಪಾಯದಲ್ಲಿರುವ 1,000 ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಇದೆ. ಮಲೇರಿಯಾ ನಿರ್ಮೂಲನೆಗೆ ಭಾರತ ಹೇಗೆ ಕೆಲಸ ಮಾಡುತ್ತಿದೆ? ಮಲೇರಿಯಾ ನಿರ್ಮೂಲನೆಗೆ ಮಾರ್ಗದರ್ಶನ ನೀಡಲು ಮತ್ತು ಕಾರ್ಯವನ್ನು ವೇಗಗೊಳಿಸಲು ದೇಶವು ಎರಡು ರಾಷ್ಟ್ರೀಯ ಯೋಜನೆಗಳನ್ನು ಜಾರಿಗೆ ತಂದಿದೆ. ರಾಷ್ಟ್ರೀಯ ಚೌಕಟ್ಟು (2016–2030): ಇದು ದೀರ್ಘಾವಧಿಯ ದೃಷ್ಟಿಕೋನ ಹೊಂದಿದ್ದು, 2030ರ ವೇಳೆಗೆ ಮಲೇರಿಯಾ ಮುಕ್ತ ಭಾರತ ಎಂಬ ಅಂತಿಮ ಗುರಿಯನ್ನು ನಿಗದಿಪಡಿಸುತ್ತದೆ. ದೇಶವನ್ನು ಪ್ರಕರಣಗಳ ಪ್ರಮಾಣದ ಆಧಾರದಲ್ಲಿ ವಿವಿಧ ವಲಯಗಳಾಗಿ ವಿಭಜಿಸುತ್ತದೆ. ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ (2023–2027): ಇದು ತಕ್ಷಣದ ಕಾರ್ಯಯೋಜನೆ. 2027ರ ವೇಳೆಗೆ ಎಲ್ಲಾ ಸ್ಥಳೀಯ ಹರಡುವಿಕೆಯನ್ನು ನಿಲ್ಲಿಸುವ ಗುರಿಯೊಂದಿಗೆ “3Ts” ತಂತ್ರ (Testing, Treating and Tracking) ಅನ್ನು ಅನುಸರಿಸುತ್ತದೆ. NSP ಪ್ರಕಾರ, ಮಲೇರಿಯಾ ನಿರ್ಮೂಲನೆಗಾಗಿ ಭಾರತ ಹುಡುಕಾಟ ಮತ್ತು ರಕ್ಷಣಾ ತಂತ್ರವನ್ನು ಅಳವಡಿಸಿಕೊಂಡಿದೆ. ರೋಗಿಗಳು ಚಿಕಿತ್ಸಾಲಯಗಳಿಗೆ ಬರುವವರೆಗೆ ಕಾಯುವ ಬದಲು, ಸಕ್ರಿಯ ಕಣ್ಗಾವಲು ನಡೆಸಲಾಗುತ್ತದೆ. ಪ್ರತಿಯೊಬ್ಬರನ್ನು ತ್ವರಿತವಾಗಿ ಪರೀಕ್ಷಿಸಿ, ಸಂಪೂರ್ಣ ಔಷಧ ಕೋರ್ಸ್ ನೀಡಲಾಗುತ್ತದೆ ಹಾಗೂ ಮುಂದಿನ ಹರಡುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ, ಹೆಚ್ಚಿನ ಅಪಾಯದ ಬುಡಕಟ್ಟು ಮತ್ತು ಅರಣ್ಯ ಪ್ರದೇಶಗಳಲ್ಲಿ ಔಷಧೀಯ ಹಾಸಿಗೆ ಪರದೆಗಳು ಮತ್ತು ಒಳಾಂಗಣ ಸಿಂಪಡಣೆಗೆ ಸಾರ್ವತ್ರಿಕ ಪ್ರವೇಶ ಒದಗಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಪತ್ತೆ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಲಾರ್ವಾ ನಿಯಂತ್ರಣ ಕ್ರಮಗಳನ್ನೂ ಸಮಾನಾಂತರವಾಗಿ ಜಾರಿಗೆ ತರಲಾಗಿದೆ. ವಲಸೆ ಕಾರ್ಮಿಕರ ಮೇಲ್ವಿಚಾರಣೆ ಪ್ರಮುಖ ಗಮನ ಕ್ಷೇತ್ರವಾಗಿದೆ. ಮಲೇರಿಯಾ ಪೀಡಿತ ನೆರೆಯ ರಾಜ್ಯಗಳಿಂದ ಬರುವ ಕಾರ್ಮಿಕರ ಮೇಲೆ ವಿಶೇಷ ಕಣ್ಗಾವಲು ನಡೆಸಲಾಗುತ್ತಿದೆ. ಸವಾಲುಗಳೇನು? ಮಲೇರಿಯಾ ಪೀಡಿತ ನೆರೆಯ ರಾಜ್ಯಗಳಿಂದ ವಲಸೆ ಬರುವುದು ಕಡಿಮೆ ಹರಡುವ ಪ್ರದೇಶಗಳಲ್ಲಿ ಮರುಪರಿಚಯದ ಅಪಾಯವನ್ನುಂಟುಮಾಡುತ್ತದೆ. NSP ಪ್ರಕಾರ, ನಗರ ಪ್ರದೇಶಗಳು ಮಲೇರಿಯಾ ನಿರ್ಮೂಲನೆಗೆ ವಿಭಿನ್ನ ಸವಾಲುಗಳನ್ನು ಒಡ್ಡುತ್ತವೆ. ನಗರ, ಅರಣ್ಯ, ಬುಡಕಟ್ಟು, ಗಡಿ ಪ್ರದೇಶಗಳು, ತಲುಪಲು ಕಷ್ಟಕರವಾದ ಪ್ರದೇಶಗಳು ಮತ್ತು ವಲಸೆ ಜನಸಂಖ್ಯೆಯಂತಹ ಸವಾಲಿನ ಮಲೇರಿಯಾ ಮಾದರಿಗಳಿಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಅದು ತಿಳಿಸಿದೆ. WHO ಆಗ್ನೇಯ ಏಷ್ಯಾ ಪ್ರದೇಶವು ಕಳೆದ ಎರಡು ದಶಕಗಳಲ್ಲಿ ಪ್ರಕರಣಗಳು ಮತ್ತು ಮರಣ ಎರಡರಲ್ಲೂ ಗಮನಾರ್ಹ ಇಳಿಕೆಯನ್ನು ಸಾಧಿಸಿದೆ ಎಂದು ವಿಶ್ವ ಮಲೇರಿಯಾ ವರದಿ ಒಪ್ಪಿಕೊಂಡಿದೆ. ಆದರೆ, ಸವಾಲುಗಳು ಇನ್ನೂ ಉಳಿದಿವೆ. ಪ್ರಾದೇಶಿಕ ಪ್ರಕರಣಗಳ ಸುಮಾರು ಎರಡು ತೃತೀಯಾಂಶಕ್ಕೆ ಕಾರಣವಾಗುವ ನಿರಂತರ ಪ್ಲಾಸ್ಮೋಡಿಯಂ ವೈವಾಕ್ಸ್ ಪ್ರಸರಣವು ನಿರ್ಮೂಲನಾ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತಿದೆ. ಜನಸಂಖ್ಯಾ ಚಲನೆ ಮತ್ತು ಗಡಿಯಾಚೆಗಿನ ಆಮದು ಮೂಲಕ ಭಾರತ ಮತ್ತು ನೇಪಾಳದಲ್ಲಿ ಸ್ಥಳೀಯ ಪ್ರಸರಣ ಮುಂದುವರಿಯುತ್ತಿರುವುದರಿಂದ ಉಪರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮನ್ವಯ ಅಗತ್ಯವೆಂದು ವರದಿ ಹೇಳಿದೆ. ಭಾರತದ ಇತರ ತಂತ್ರಗಳಲ್ಲಿ ಔಷಧ ನಿರೋಧಕತೆ ಮೇಲ್ವಿಚಾರಣೆ, ಕೀಟನಾಶಕ ನಿರೋಧಕತೆ ಮೇಲ್ವಿಚಾರಣೆ ಮತ್ತು ಪ್ಲಾಸ್ಮೋಡಿಯಂ ವೈವಾಕ್ಸ್ ಪ್ರಕರಣಗಳಿಗೆ 14 ದಿನಗಳ ಸಂಪೂರ್ಣ ಚಿಕಿತ್ಸೆಯ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿವೆ. ವಿಶ್ವ ಮಲೇರಿಯಾ ವರದಿ–2025 ಮಲೇರಿಯಾ ವಿರೋಧಿ ಔಷಧ ನಿರೋಧಕತೆಯ ಹೆಚ್ಚುತ್ತಿರುವ ಬೆದರಿಕೆಯನ್ನು ಕೂಡ ಎತ್ತಿ ತೋರಿಸಿದೆ. ಕ್ಲೋರೊಕ್ವಿನ್ನಂತಹ ಔಷಧಗಳು ವಿಫಲವಾದಂತೆಯೇ, ಆರ್ಟೆಮಿಸಿನಿನ್ ಈಗ “ಭಾಗಶಃ ಪ್ರತಿರೋಧ”ವನ್ನು ಎದುರಿಸುತ್ತಿದೆ. ಇದರರ್ಥ ರೋಗಿಯ ರಕ್ತದಿಂದ ರೋಗಾಣುಗಳನ್ನು ತೆರವುಗೊಳಿಸಲು ಔಷಧ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ; ಇದರಿಂದ ಸೂಕ್ಷ್ಮಜೀವಿಗಳು ಹೊಂದಿಕೊಳ್ಳಲು ಮತ್ತು ಇತರರಿಗೆ ಹರಡಲು ಅವಕಾಶ ಸಿಗುತ್ತದೆ. ಈ ಸಮಸ್ಯೆ ಹಿಂದೆ ಆಗ್ನೇಯ ಏಷ್ಯಾಕ್ಕೆ ಸೀಮಿತವಾಗಿದ್ದರೂ, ಈಗ ಅದು ಆಫ್ರಿಕಾದ ಕನಿಷ್ಠ ಎಂಟು ದೇಶಗಳಿಗೆ ಹರಡಿದೆ ಎಂದು ವರದಿ ದೃಢಪಡಿಸುತ್ತದೆ. ಇದು ದೊಡ್ಡ ಬೆದರಿಕೆಯಾಗಿದ್ದು, ಆರ್ಟೆಮಿಸಿನಿನ್ ಜೊತೆಗೆ ಬಳಸಲಾಗುವ ಇತರ ಔಷಧಗಳೂ ವಿಫಲಗೊಳ್ಳಲು ಆರಂಭಿಸಿರುವುದು ಆತಂಕಕಾರಿ. ಮುಂದಿನ ಪೀಳಿಗೆಯ ಔಷಧಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸದಿದ್ದರೆ, ದಶಕಗಳ ಪ್ರಗತಿ ಹಿಮ್ಮೆಟ್ಟುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮುಂದಿನ ಹಾದಿ ಏನು? 2024–25ರ ವಾರ್ಷಿಕ ವರದಿ ಪ್ರಕಾರ, 2023ರಲ್ಲಿ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತ್ರಿಪುರ (5.69) ಮತ್ತು ಮಿಜೋರಾಂ (14.23) ಎಂಬ ಎರಡು ರಾಜ್ಯಗಳನ್ನು ಹೊರತುಪಡಿಸಿ, ವಾರ್ಷಿಕ ಪರಾವಲಂಬಿ ಪ್ರಕರಣ ಸೂಚ್ಯಂಕವನ್ನು ಒಂದಕ್ಕಿಂತ ಕಡಿಮೆ ಮಟ್ಟದಲ್ಲಿ ಸಾಧಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಂತದಲ್ಲಿ ದತ್ತಾಂಶದ ನಿಖರತೆ ಅತ್ಯಂತ ಮುಖ್ಯವಾಗಿದೆ. ಖಾಸಗಿ ವೈದ್ಯರೂ ಪ್ರಕರಣಗಳನ್ನು ವರದಿ ಮಾಡುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಸಾರ್ವಜನಿಕ ಆರೋಗ್ಯ ಕಣ್ಗಾವಲು ಅಗತ್ಯವಿದೆ. ಮಲೇರಿಯಾ ಶಂಕಿತ ಪ್ರಕರಣಗಳನ್ನೂ ಕಡ್ಡಾಯವಾಗಿ ವರದಿ ಮಾಡಬೇಕು ಎಂದು ಹಿರಿಯ ವೈರಾಲಜಿಸ್ಟ್ ಟಿ. ಜಾಕೋಬ್ ಜಾನ್ ಹೇಳಿದ್ದಾರೆ. ನಗರ ಪ್ರದೇಶಗಳಲ್ಲಿ ಮಲೇರಿಯಾ ಇನ್ನೂ ಸವಾಲಾಗಿಯೇ ಉಳಿದಿದೆ. ಚೆನ್ನೈನಂತಹ ಮಹಾನಗರಗಳಲ್ಲಿ ತ್ವರಿತ ನಗರೀಕರಣ, ವಿಸ್ತರಿಸುತ್ತಿರುವ ಮೂಲಸೌಕರ್ಯ ಮತ್ತು ಹೆಚ್ಚುತ್ತಿರುವ ಅಪಾರ್ಟ್ಮೆಂಟ್ ಸಂಕೀರ್ಣಗಳು ನೀರು ಸಂಗ್ರಹಣೆಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆ. ಇಲ್ಲಿ ಸರ್ಕಾರ ಮಾತ್ರವಲ್ಲದೆ, ನೀರಿನ ಮೂಲ ಶುದ್ಧವಾಗಿರುವುದರಿಂದ ವೈಯಕ್ತಿಕ ಮನೆಯ ಮಟ್ಟದಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತಮಿಳುನಾಡು ಸರ್ಕಾರದ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಔಷಧದ ಮಾಜಿ ನಿರ್ದೇಶಕ ಟಿ.ಎಸ್. ಸೆಲ್ವವಿನಾಯಗಂ ತಿಳಿಸಿದ್ದಾರೆ.
CRPF ಅಧಿಕಾರಿಗೆ ಶೌರ್ಯ ಚಕ್ರ: ಕುಕಿ-ರೆ ಸಂಘಟನೆಗಳ ವಿರೋಧ
ಗುವಾಹಟಿ, ಜ.26: ಸಿಆರ್ಪಿಎಫ್ನ 20ನೇ ಬೆಟಾಲಿಯನ್ನ ಸಹಾಯಕ ಕಮಾಂಡಂಟ್ ವಿಪಿನ್ ವಿಲ್ಸನ್ ಅವರಿಗೆ ಶೌರ್ಯ ಚಕ್ರವನ್ನು ಪ್ರದಾನಿಸುವ ನಿರ್ಧಾರಕ್ಕಾಗಿ ಕೇಂದ್ರ ಸರ್ಕಾರವನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ಕುಕಿ-ರೆ ಸಂಘಟನೆಗಳು ಸೋಮವಾರ ಟೀಕಿಸಿವೆ. ಈ ಪ್ರಶಸ್ತಿಯು ಕಾನೂನುಬಾಹಿರ ಹತ್ಯೆಗಳಿಗೆ ಅನುಮೋದನೆಯಾಗಿದೆ ಎಂದು ಹೇಳಿರುವ ಅವು, ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿವೆ. ಅಧಿಕೃತ ಹೇಳಿಕೆಯಂತೆ, 2024ರ ನ.11ರಂದು ಮಣಿಪುರದ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾ ಪ್ರದೇಶದಲ್ಲಿ ಸಿಆರ್ಪಿಎಫ್ ಠಾಣೆಯ ಮೇಲೆ ಸಶಸ್ತ್ರ ಬಂಡುಕೋರರು ನಡೆಸಿದ್ದ ದಾಳಿಯನ್ನು ವಿಫಲಗೊಳಿಸಿದ್ದಕ್ಕಾಗಿ ವಿಲ್ಸನ್ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸಿಆರ್ಪಿಎಫ್ ಅವರ ಅದಮ್ಯ ಚೈತನ್ಯ ಮತ್ತು ಸಾಟಿಯಿಲ್ಲದ ಶೌರ್ಯವನ್ನು ಪ್ರಶಂಸಿಸಿದೆ. ವಿಲ್ಸನ್ ಅವರಿಗೆ ಶೌರ್ಯ ಚಕ್ರ ಪ್ರಕಟಿಸಿರುವುದು ಕುಕಿ ಆರ್ಗನೈಸೇಷನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ (ಕೊಹುರ್) ಮತ್ತು ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್ (ಐಟಿಎಲ್ಎಫ್) ಅನ್ನು ಕೆರಳಿಸಿದೆ. ಈ ಗೌರವವು ರಾಷ್ಟ್ರೀಯ ಹೆಮ್ಮೆಯಲ್ಲ; ಬದಲಿಗೆ ಅದು 10 ಕುಕಿ-ರೆ (ಹಮರ್) ಗ್ರಾಮ ಸ್ವಯಂಸೇವಕರ ಕಾನೂನುಬಾಹಿರ ಹತ್ಯೆಗೆ ಸರ್ಕಾರದ ಅನುಮೋದನೆಯಾಗಿದೆ ಎಂದು ಕೊಹುರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂಘಟನೆಯ ಪ್ರಕಾರ, ವಿಧಿವಿಜ್ಞಾನ ವರದಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸೇರಿದಂತೆ ವಿಶ್ವಾಸಾರ್ಹ ಪುರಾವೆಗಳು, ಮೃತರು ನಿರಾಯುಧರಾಗಿದ್ದರು ಅಥವಾ ಕನಿಷ್ಠ ಪ್ರಮಾಣದಲ್ಲಿ ಶಸ್ತ್ರಗಳನ್ನು ಹೊಂದಿದ್ದ ನಾಗರಿಕರಾಗಿದ್ದರು ಹಾಗೂ ಜನಾಂಗೀಯ ಹಿಂಸಾಚಾರದ ಅವಧಿಯಲ್ಲಿ ಸಮುದಾಯಗಳನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದನ್ನು ದೃಢಪಡಿಸಿವೆ. ಅವರಿಗೆ ಉಗ್ರಗಾಮಿಗಳು ಎಂದು ಹಣೆಪಟ್ಟಿ ಕಟ್ಟುವ ಸರ್ಕಾರದ ನಿರೂಪಣೆಯು ಏಕಪಕ್ಷೀಯವಾಗಿದ್ದು, ಮಾರಕ ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಲು ರಚಿಸಿದ ಕಟ್ಟುಕಥೆಯಾಗಿದೆ. ಅದು ಎನ್ಕೌಂಟರ್ ಆಗಿರಲಿಲ್ಲ; ಅದು ಮರಣದಂಡನೆಯಾಗಿತ್ತು ಎಂದು ಕೊಹುರ್ ಹೇಳಿದೆ.
WPL 2026- ಬ್ರಂಟ್ ರೋಷಾವೇಷದ ಆಟಕ್ಕೆ RCB ಗಡಗಡ! ಮಹಿಳಾ ಪ್ರೀಮಿಯರ್ ಲೀಗ್ ನ ಮೊದಲ ಶತಕಕ್ಕೆ ಸಾಕ್ಷಿಯಾತ್ತು ವಡೋದರಾ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ನ ನ್ಯಾಟ್ ಸಿವಿರ್ ಬ್ರಂಟ್ ಅವರು ಇದೀಗ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್ ಸಿಬಿ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತ ಅವರು ಕೇವಲ 57 ಎಸೆತದಿಂದ ಭರ್ತಿ ನೂರು ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಹಿಂದೆ ನ್ಯೂಜಿಲೆಂಡ್ ನ ಹಿರಿಯ ಆಟಗಾರ್ತಿ ಸೋಫಿ ಡಿವೈನ್ (95) ಮತ್ತು ಭಾರತದ ಸ್ಟಾರ್ ಆಟಗಾರ್ತಿಯಾಗಿರುವ ಆರ್ ಸಿಬಿ ನಾಯಕಿ (96) ಅವರು 90ರ ಗಡಿ ತಲುಪಿದ್ದರೂ ಶತಕ ಗಳಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ ಸ್ಮೃತಿ ಮಂದಾನ ಅವರು ಗಳಿಸಿದ್ದ 96 ರನ್ ಗಳೇ ಈವರೆಗೆ ಡಬ್ಲ್ಯೂಪಿಎಲ್ ನಲ್ಲಿ ಅತಿ ದೊಡ್ಡ ವೈಯಕ್ತಿಕ ಗಳಿಕೆಯಾಗಿತ್ತು. ಈ ದಾಖಲೆಯ್ನು ಬ್ರಂಟ್ ಅವರು ಸ್ಮೃತಿ ಮಂದಾನ ನೇತೃತ್ವದ ತಂಡದ ವಿರುದ್ಧವೇ ಮುರಿದರು. ವಡೋದರಾದಲ್ಲಿ ಸೋಮವಾರ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತು. 16 ರನ್ ಆಗುವಷ್ಟರಲ್ಲೇ ಸಜೀವನ್ ಸಜನಾ ಅವರ ವಿಕೆಟ್ ಪತನಗೊಂಡಾಗ ಕ್ರೀಸಿಗೆ ಆಗಮಿಸಿದ ನಟ್ ಸಿವಿರ್ ಬ್ರಂಟ್ ಕೊನೇವರೆಗೂ ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಅನ್ನು ಆಧರಿಸಿದರು. ಹೇಲಿ ಮ್ಯಾಥ್ಯೂಸ್ ಅವರ ಜೊತೆ ಎರಡನೇ ವಿಕೆಟ್ ಗೆ ಅವರು ಮಹತ್ವದ 131 ರನ್ ಗಳ ಜೊತೆಯಾಟ ಆಡಿದ್ದು ನಿರ್ಣಾಯಕವೆನಿಸಿತು. ಕೇವಲ 32 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬ್ರಂಟ್ ಅವರು ಅಂತಿಮವಾಗಿ 57 ಎಸೆತಗಳಲ್ಲಿ ಭರ್ತಿ 100 ರನ್ ಗಳಸಿದರು. ಅವರ ಇನ್ನಿಂಗ್ಸ್ ನಲ್ಲಿ 16 ಬೌಂಡರಿ ಮತ್ತು 1 ಭರ್ಜರಿ ಸಿಕ್ಸರ್ ಗಳಿದ್ದವು. ಅವರಿಗೆ ಉತ್ತಮ ಸಾಥ್ ನೀಡಿದ ಹೇಲಿ ಮ್ಯಾಥ್ಯೂಸ್ ಅವರು 39 ಎಸೆತಗಳಲ್ಲಿ 9 ಬೌಂಡರಿಗಳಿದ್ದ 56 ರನ್ ಗಳಿಸಿ ಲಾರೆನ್ ಬೆಲ್ ಗೆ ಕ್ಲೀನ್ ಬೌಲ್ಡ್ ಆದರು. ಈ ವಿಕೆಟ್ ಪತನದ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರೊಂದಿಗೆ ಬ್ರಂಟ್ ಅವರು 3ನೇ ವಿಕೆಟ್ ಗೆ 42 ರನ್ ಗಳ ಜೊತೆಯಾಟವಾಡಿದರು. ಕೌರ್ ಅವರು ಕೇಲಲ 12 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 20 ರನ್ ಬಾರಿಸಿ ಔಟಾದರು.ಈ ಸೀಸನ್ ನಲ್ಲಿ ನಿರಂತರ 5 ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿತು. ನವಿ ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ದಲ್ಲಿ ಆರ್ ಸಿಬಿ ಜಯಭೇರಿ ಬಾರಿಸಿತ್ತು.
ರಾಯಚೂರು| ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ
ರಾಯಚೂರು: ರಾಜ್ಯದಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್ ಸೇರಿ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಮಹಿಳೆಯರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು. ಪ್ರತಿಭಟನಾ ನಿರತ ಮಹಿಳೆಯರು ಬೀರು ಬೇಡ ನೀರು ಬೇಕು, ಬೀರ್ ಬೇಡ ಶಿಕ್ಷಣ ಬೇಕು ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕ ಬಾರಿ ಜಿಲ್ಲಾ ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮದ್ಯ ನಿಷೇಧ ಆಂದೋಲನದ ವತಿಯಿಂದ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ಹೋರಾಡುತ್ತಾ ಬಂದರೂ ಸರಕಾರ ಮದ್ಯ ನಿಷೇಧಕ್ಕೆ ಮುಂದಾಗುತ್ತಿಲ್ಲ. ನವೆಂಬರ್ 25ರಂದು ಹೋರಾಟಕ್ಕೆ ಮಣಿದ ಮುಖ್ಯಮಂತ್ರಿಗಳು ಕಾಲಾವಕಾಶ ಕೊಡಿ ಎಂದು ಕೇಳಿದ್ದರೂ, ಆದರೇ ಭರವಸೆ ಈಡೇರಿಸದೆ ಹುಸಿಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮದ್ಯ ಮಾರಾಟಕ್ಕೆ ಪರವಾನಿಗೆ ಹೊಂದಲು ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನದಂತಹ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರಕಾರ ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು ಗ್ರಾಮ ಸಭೆಯಲ್ಲಿ ಕನಿಷ್ಠ ಶೇಕಡಾ 20 ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಗ್ರಾಮಸಭೆಯ ಈ ಠರಾವಿಗೆ ಮಾನ್ಯತೆ ನೀಡಲೇ ಬೇಕು. ಹಾಗೆ ನಮ್ಮಲ್ಲೂ ಈ ಅಂಶವನ್ನು ಪಂಚಾಯತ್ ರಾಜ್ ಕಾನೂನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು. ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ ಅದಕ್ಕಿಂತ ಹೆಚ್ಚು ಮನೆ ಮನೆಗಳಲ್ಲಿ, ಪಾನ್ ಶಾಪ್, ಕಿರಾಣ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ ಕೊಡಬೇಕು. ಕರ್ನಾಟಕ ಪಂಚಾಯತ್ ರಾಜ್ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈಗಾಗಲೆ ಹೆಚ್ಚುವರಿ ಸಮಿತಿಗಳು ಮಾಡುವ ಅವಕಾಶ ಇದೆ. ಕೂಡಲೇ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಧ್ಯಪಾನ ನಿಷೇಧ ಆಂದೋಲನದ ಮುಖಂಡರಾದ ವಿರೂಪಮ್ಮ, ಚಂದ್ರಕಲಾ, ಕವಿತಾ, ಲಕ್ಷ್ಮಿ, ಕಾಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
EDಯಿಂದ ಪಿಎಸಿಎಲ್ನ 1,986 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು
ಹೊಸದಿಲ್ಲಿ, ಜ. 26: 48,000 ಕೋ. ರೂ. ಪೊಂಜಿ ಯೋಜನೆ ನಡೆಸುತ್ತಿದ್ದ ಆರೋಪದಲ್ಲಿ ಚಂಡಿಗಢ ಮೂಲದ ಪಿಎಸಿಎಲ್ (ಪರ್ಲ್ ಸಮೂಹ) ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ 1,986 ಕೋ.ರೂ. ಮೌಲ್ಯದ ಸೊತ್ತುಗಳನ್ನು ಹೊಸತಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಸೋಮವಾರ ತಿಳಿಸಿದೆ. ಇತ್ತೀಚಿನ ಕ್ರಮದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯ ಒಟ್ಟು ಮೊತ್ತ 7,589 ಕೋ. ರೂ.ಗೆ ತಲುಪಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪಂಜಾಬ್ನ ಲುಧಿಯಾನ ಹಾಗೂ ರಾಜಸ್ಥಾನದ ಜೈಪುರದಲ್ಲಿರುವ 1,986.48 ಕೋ.ರೂ. ಮೌಲ್ಯದ 37 ಸ್ಥಿರ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ವಂಚನೆಯಿಂದ ಸಂಗ್ರಹಿಸಲಾದ ಅಕ್ರಮ ನಿಧಿಯ ಭಾಗವನ್ನು ಈ 37 ಸೊತ್ತುಗಳ ಖರೀದಿಗೆ ಬಳಸಲಾಗಿದೆ ಎಂದು ಅದು ತಿಳಿಸಿದೆ. ಈ ಹಿಂದೆ ಸಿಬಿಐ ಪಿಎಸಿಎಲ್ ಲಿಮಿಟೆಡ್, ಅದರ ದಿವಂಗತ ಪ್ರವರ್ತಕ ನಿರ್ಮಲ್ ಸಿಂಗ್ ಭಾಂಗೂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ವಿ.ಎಸ್. ಅಚ್ಯುತಾನಂದ್ ಗೆ ಪದ್ಮವಿಭೂಷಣ ಪ್ರಶಸ್ತಿ: ಸಿಪಿಎಂ ಸ್ವಾಗತ
ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದನ್ನು ಸೋಮವಾರ ಸಿಪಿಎಂ ಸ್ವಾಗತಿಸಿದ್ದು, ವಿ.ಎಸ್. ಅಚ್ಯುತಾನಂದ್ ಅವರ ಕುಟುಂಬದ ಸಂತೋಷವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಎಂದು ಹೇಳಿದೆ. ವಿ.ಎಸ್. ಅಚ್ಯುತಾನಂದ್ ಅವರ ಕುಟುಂಬವು ಈ ಪ್ರಶಸ್ತಿಯನ್ನು ಅಂಗೀಕರಿಸಿರುವುದರಿಂದ, ಈ ಗೌರವವನ್ನು ವಿರೋಧಿಸಲು ಯಾವುದೇ ಕಾರಣವಿಲ್ಲ ಎಂದು ಅದು ತಿಳಿಸಿದೆ. ದೀರ್ಘಕಾಲದಿಂದ ಸರಕಾರಿ ಪ್ರಶಸ್ತಿಗಳನ್ನು ಸ್ವೀಕರಿಸದಿರುವ ನಿರ್ಧಾರವನ್ನು ಸಿಪಿಎಂ ಕೈಗೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಇಂತಹ ಪ್ರಶಸ್ತಿಗಳನ್ನು ನಿರಾಕರಿಸಿದ್ದ ಇ.ಎಂ.ಎಸ್. ನಂಬೂದರಿಪಾದ್, ಜ್ಯೋತಿ ಬಸು ಹಾಗೂ ಬುದ್ಧದೇವ್ ಭಟ್ಟಾಚಾರ್ಯರ ನಿರ್ಧಾರವು ಅವರ ವೈಯಕ್ತಿಕವಾಗಿತ್ತು ಹಾಗೂ ಆ ನಿರ್ಧಾರವನ್ನು ಪಕ್ಷ ಬೆಂಬಲಿಸಿತ್ತು ಎಂದು ಹೇಳಿದ್ದಾರೆ. ತಮ್ಮ ತಂದೆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದಕ್ಕೆ ಅವರ ಪುತ್ರ ಅರುಣ್ ಕುಮಾರ್ ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಹರ್ಷ ವ್ಯಕ್ತಪಡಿಸಿದ್ದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ವಿ. ಗೋವಿಂದನ್, “ಕಲೆ ಸೇರಿದಂತೆ ವಿವಿಧ ಸೇವಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದವರಿಗೆ ಸರಕಾರ ಹಲವು ಪ್ರಶಸ್ತಿಗಳನ್ನು ನೀಡುತ್ತದೆ. ಇ.ಎಂ.ಎಸ್. ನಂಬೂದರಿಪಾದ್ ಅವರನ್ನು ಕೇಳಿದಾಗ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದರು. ಜ್ಯೋತಿ ಬಸು ಹಾಗೂ ಬುದ್ಧದೇವ್ ಭಟ್ಟಾಚಾರ್ಯರೂ ಅದನ್ನೇ ಮಾಡಿದ್ದರು. ವಿ.ಎಸ್. ಅಚ್ಯುತಾನಂದ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಅವರ ಕುಟುಂಬ ಇದನ್ನು ಸಂತೋಷದಿಂದ ಅಂಗೀಕರಿಸಿರುವುದರಿಂದ, ನಾವೂ ಅದನ್ನು ಒಪ್ಪಿಕೊಳ್ಳಬೇಕಿದೆ. ವಿಭಿನ್ನ ನಿಲುವು ತೆಗೆದುಕೊಳ್ಳಬೇಕಾದ ಯಾವುದೇ ಅಗತ್ಯವಿಲ್ಲ. ಕುಟುಂಬದವರ ಸಂತೋಷದಲ್ಲಿ ನಾವೂ ಭಾಗಿಯಾಗುತ್ತೇವೆ” ಎಂದು ಸ್ಪಷ್ಟಪಡಿಸಿದರು. ಆದರೆ, ಇಂತಹುದೇ ಪುರಸ್ಕಾರಗಳನ್ನು ಈ ಹಿಂದೆ ತಿರಸ್ಕರಿಸುವ ನಿಲುವು ತೆಗೆದುಕೊಂಡಿದ್ದ ಸಿಪಿಎಂನ ಹಳೆಯ ನಿಲುವಿಗೆ ಇದು ವ್ಯತಿರಿಕ್ತವಾಗಿದೆ. 1992ರಲ್ಲಿ ಇ.ಎಂ.ಎಸ್. ನಂಬೂದರಿಪಾದ್, 2008ರಲ್ಲಿ ಜ್ಯೋತಿ ಬಸು ಹಾಗೂ 2022ರಲ್ಲಿ ಬುದ್ಧದೇವ್ ಭಟ್ಟಾಚಾರ್ಯ ಸರಕಾರಿ ಪುರಸ್ಕಾರಗಳನ್ನು ನಿರಾಕರಿಸಿದ್ದರು. ಈ ನಿಲುವನ್ನು ಅವರ ಮಾತೃಪಕ್ಷ ಸಿಪಿಎಂ ಕೂಡಾ ಬೆಂಬಲಿಸಿತ್ತು.
ತಿರುಮಪರಂಕುಂದ್ರಂ ದೀಪೋತ್ಸವ: ಪುರಾತತ್ವ ಇಲಾಖೆಯ ಅನುಮತಿ ಕಡ್ಡಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ
ಹೊಸದಿಲ್ಲಿ: ಭಾರತೀಯ ಪುರಾತತ್ವ ಇಲಾಖೆ ಹಾಗೂ ಪೊಲೀಸರೊಂದಿಗೆ ಮುಂಚಿತ ಸಮಾಲೋಚನೆ ಮತ್ತು ಅನುಮತಿ ಪಡೆದ ಬಳಿಕವೇ ತಿರುಮಪರಂಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪೋತ್ಸವ ನಡೆಸಬೇಕು ಎಂದು ಜನವರಿ 6ರಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಮೂಲ ಅರ್ಜಿದಾರ ರಾಮ ರವಿಕುಮಾರ್ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ನೀಡಿರುವ ಈ ತೀರ್ಪು, ಅರುಳ್ ಮಿಗು ಸುಬ್ರಮಣ್ಯ ಸ್ವಾಮಿ ದೇವಾಲಯದ ಮಾಲಕತ್ವ ಹಾಗೂ ನಿಯಂತ್ರಣದ ಕುರಿತು ಸಿವಿಲ್ ನ್ಯಾಯಾಲಯ ನೀಡಿರುವ ಪಾಲಿಸಲೇಬೇಕಾದ ತೀರ್ಪನ್ನು ಕಾನೂನುಬಾಹಿರವಾಗಿ ದುರ್ಬಲಗೊಳಿಸುತ್ತದೆ. ಜೊತೆಗೆ, ಇದು ಅತ್ಯಗತ್ಯ ಧಾರ್ಮಿಕ ಆಚರಣೆಯ ಕುರಿತು ಅನುಮತಿಯಿಲ್ಲದ ನ್ಯಾಯಾಂಗ ಸೂಚನೆಯಾಗಿದೆ ಎಂದು ಅರ್ಜಿದಾರ ರವಿಕುಮಾರ್ ಪರವಾಗಿ ವಕೀಲ ಜಿ. ಬಾಲಾಜಿ ನ್ಯಾಯಾಲಯದ ಮುಂದೆ ವಾದಿಸಿದ್ದಾರೆ. ದೀಪೋತ್ಸವದ ವೇಳೆ ದೇವಾಲಯಕ್ಕೆ ದೀಪ ಹಚ್ಚುವ ಅಧಿಕಾರವಿದೆ ಎಂದು ನ್ಯಾಯಾಲಯ ಸಮ್ಮತಿಸಿದ್ದರೂ, ಅದು ಆಡಳಿತದ ಇಚ್ಛೆಗೆ ಒಳಪಟ್ಟಿರುವ ಷರತ್ತುಬದ್ಧ ಹಕ್ಕಾಗಿದೆ ಎಂದು ಹೇಳಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಇದಕ್ಕೂ ಮುನ್ನ, ಡಿಸೆಂಬರ್ 1, 2025ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ, ದೀಪೋತ್ಸವದಂದು ಕಾರ್ತಿಕ ದೀಪವನ್ನು ದೇವಾಲಯದ ಸ್ಥಳದಲ್ಲಿಯೇ ಹಚ್ಚಬೇಕು ಹಾಗೂ ಸಿಕಂದರ್ ಬಾದುಶಾ ದರ್ಗಾದ ಹೊರಗೆ ಗುರುತಿಸಿರುವ ಗಡಿಯೊಳಗೆ ಮಾತ್ರ ಈ ಕಾರ್ಯಕ್ರಮ ನಡೆಸಬೇಕು ಎಂದು ಆದೇಶಿಸಿತ್ತು. ಜನವರಿ 6, 2026ರಂದು ಸಂಪ್ರದಾಯವನ್ನು ಸೈದ್ಧಾಂತಿಕವಾಗಿ ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದರೂ, ಕೆಲವು ಶಾಸನಾತ್ಮಕ ನಿರ್ಬಂಧಗಳನ್ನು ವಿಧಿಸಿತ್ತು. ಕಾರ್ತಿಕ ದೀಪವನ್ನು ಹಚ್ಚುವ ಮೊದಲು ದೇವಾಲಯವು ಭಾರತೀಯ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಬೇಕು. ಸಂರಕ್ಷಿತ ಸ್ಮಾರಕ ಎಂದು ಪರಿಗಣಿಸಲಾಗಿರುವ ಬೆಟ್ಟವನ್ನು ರಕ್ಷಿಸುವ ಸಲುವಾಗಿ ಭಾರತೀಯ ಪುರಾತತ್ವ ಇಲಾಖೆ ಷರತ್ತುಗಳನ್ನು ವಿಧಿಸಬಹುದು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳ ಸಂಖ್ಯೆಗೆ ನಿರ್ಬಂಧ ಹೇರಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಶಂಕಿತ ರಶ್ಯ ತೈಲ ಟ್ಯಾಂಕರ್ ನ ಭಾರತೀಯ ಕ್ಯಾಪ್ಟನ್ ನನ್ನು ಕಸ್ಟಡಿಗೆ ಪಡೆದ ಫ್ರಾನ್ಸ್
ಪ್ಯಾರಿಸ್, ಜ.26: ಗುರುವಾರ ಮೆಡಿಟರೇನಿಯನ್ ಸಮುದ್ರದಲ್ಲಿ ಫ್ರಾನ್ಸ್ ವಶಕ್ಕೆ ಪಡೆದಿದ್ದ ರಶ್ಯದ ಶಂಕಿತ ಛಾಯಾ ತೈಲ ಟ್ಯಾಂಕರ್ ‘ಗ್ರಿಂಚ್’ನ ಭಾರತೀಯ ಕ್ಯಾಪ್ಟನ್ನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಛಾಯಾ ಟ್ಯಾಂಕರ್ ಪಡೆಯು ನಿರ್ಬಂಧಗಳನ್ನು ತಪ್ಪಿಸಲು ರಶ್ಯಾದಿಂದ ನಿರ್ವಹಿಸಲ್ಪಡುವ ನೂರಾರು ಹಡಗುಗಳ ರಹಸ್ಯ ಜಾಲವಾಗಿದೆ. ದಕ್ಷಿಣ ಫ್ರಾನ್ಸ್ನ ಮಾರ್ಸೆಲ್ಲೆ ಬಂದರು ಬಳಿ ವಶಕ್ಕೆ ಪಡೆದಿದ್ದ ಟ್ಯಾಂಕರ್ ರಾಷ್ಟ್ರಧ್ವಜವನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಕ್ಯಾಪ್ಟನ್ನ್ನು ಕಸ್ಟಡಿಗೆ ಪಡೆಯಲಾಗಿದೆ. ಉಳಿದ ಸಿಬ್ಬಂದಿಗಳು ಟ್ಯಾಂಕರ್ನಲ್ಲಿಯೇ ಇದ್ದಾರೆ. ಹಡಗನ್ನು ಈಗ ಮಾರ್ಸೆಲ್ಲೆ ಬಂದರಿನಲ್ಲಿ ಕಾವಲು ಕಾಯಲಾಗುತ್ತಿದೆ ಎಂದು ವರದಿ ಹೇಳಿದೆ.
2028ಕ್ಕೆ ಮತ್ತೊಮ್ಮೆ HD ಕುಮಾರಸ್ವಾಮಿ ಸಿಎಂ ಚರ್ಚೆ: ಒಳ್ಳೆ ದಿನ ಏಕೆ ಅಶುಭ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು: ಮುಂದಿನ 2028ಕ್ಕೆ ಎಚ್.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರಬೇಕು ಎನ್ನುವುದು ರಾಜ್ಯದ ಜನರ ಬಯಕೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆ ಜೆಡಿಎಸ್ನಲ್ಲಿ ಶುರುವಾಗಿದ್ದು, 2028 ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇಂತಹ ಒಳ್ಳೆ ದಿನ ಏಕೆ ಅಶುಭ ಮಾತನ್ನಾಡುವುದು,
ಕರ್ನಾಟಕದ ‘ಮಿಲೆಟ್ಸ್ ಟು ಮೈಕ್ರೋಚಿಪ್’ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ತಪ್ಪಿಸಿಕೊಂಡಿದ್ದು ಏಕೆ?
ಹೊಸದಿಲ್ಲಿ, ಜ.26: ಗಣರಾಜ್ಯೋತ್ಸವ ಸಂಭ್ರಮವು ಭಾರತದ ಹೆಮ್ಮೆ ಮತ್ತು ಪರಂಪರೆಯ ಅದ್ಭುತ ಪ್ರದರ್ಶನದೊಂದಿಗೆ ಸಂಪನ್ನಗೊಂಡಿದೆ. ಪರೇಡ್ ವೀಕ್ಷಿಸಲು ದಿಲ್ಲಿಯ ಕರ್ತವ್ಯ ಪಥದಲ್ಲಿ ಅಪಾರ ಜನಸಮೂಹ ನೆರೆದಿತ್ತು. ಆದಾಗ್ಯೂ, ಈ ವರ್ಷ ಕರ್ನಾಟಕದ ‘ಮಿಲೆಟ್ಸ್ ಟು ಮೈಕ್ರೋಚಿಪ್ (ಸಿರಿಧಾನ್ಯಗಳಿಂದ ಮೈಕ್ರೋಚಿಪ್ವರೆಗೆ)’ ಸ್ತಬ್ಧಚಿತ್ರವು ಪರೇಡ್ನ ಭಾಗವಾಗಿರಲಿಲ್ಲ. ಬದಲಿಗೆ, ಅದನ್ನು ಕೆಂಪುಕೋಟೆಯಲ್ಲಿ 30 ದಿನಗಳ ಕಾಲ ನಡೆಯಲಿರುವ ಭಾರತ ಪರ್ವ್ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶಿಸಲಾಗಿದ್ದು, ಸಂದರ್ಶಕರಿಗೆ ಸಾಂಪ್ರದಾಯಿಕ ಕೃಷಿಯಿಂದ ಆಧುನಿಕ ತಂತ್ರಜ್ಞಾನ ಆವಿಷ್ಕಾರಗಳವರೆಗಿನ ರಾಜ್ಯದ ಪಯಣವನ್ನು ಹತ್ತಿರದಿಂದ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಅಧಿಕಾರಿಗಳ ಪ್ರಕಾರ, ಈ ವರ್ಷದ ಮುಖ್ಯ ಪರೇಡ್ಗೆ ಕರ್ನಾಟಕ ಸ್ತಬ್ಧಚಿತ್ರದ ವಿಷಯವನ್ನು ಆಯ್ಕೆ ಮಾಡಲಾಗಿಲ್ಲ. ಭಾರತ ಪರ್ವ್ ವೇದಿಕೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರಾದೇಶಿಕ ಪಾಕ ಪದ್ಧತಿಗಳು, ಕರಕುಶಲ ವಸ್ತುಗಳು ಮತ್ತು ನವೀನತೆಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತಿದ್ದು, ಇದು ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸೂಕ್ತ ಪರ್ಯಾಯವಾಗಿದೆ. 2022ರ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಂದು ವರ್ಷ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದರೆ, ಮರು ವರ್ಷ ಭಾರತ ಪರ್ವ್ನಲ್ಲಿ ಪಾಲ್ಗೊಳ್ಳುತ್ತವೆ. 2026ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಅನುಪಸ್ಥಿತಿಗೆ ಇದು ಕಾರಣವಾಗಿರಬಹುದು. ದಿಲ್ಲಿಯಲ್ಲಿ ನಿಯೋಜಿಸಲಾದ 200 ಕುಶಲಕರ್ಮಿಗಳ ತಂಡವು ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ನಿರ್ಮಿಸಿದೆ.
ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ನಾಳೆ(ಜ. 27) ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ
ಹೊಸದಿಲ್ಲಿ: ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಬ್ಯಾಂಕ್ ನೌಕರರು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆ ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ, ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ (ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್–ಯುಎಫ್ಬಿಯು) ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್ಗಳ ಶಾಖೆಗಳಲ್ಲಿ ಠೇವಣಿ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮೊದಲಾದ ಬ್ಯಾಂಕಿಂಗ್ ಸೇವೆಗಳು ಅಡಚಣೆಗೆ ಒಳಗಾಗುವ ಸಾಧ್ಯತೆ ಇದೆ. ಆದರೆ ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಸೇರಿದಂತೆ ಖಾಸಗಿ ವಲಯದ ಬ್ಯಾಂಕ್ಗಳ ನೌಕರರು ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಹೀಗಾಗಿ ಖಾಸಗಿ ಬ್ಯಾಂಕ್ಗಳ ವಹಿವಾಟಿನ ಮೇಲೆ ಮುಷ್ಕರದ ಯಾವುದೇ ಪರಿಣಾಮ ಇರುವುದಿಲ್ಲ ಎಂದು ತಿಳಿಸಲಾಗಿದೆ. ಯುಪಿಐ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳ ಮೂಲಕ ಲಭ್ಯವಿರುವ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ಕೆಲವೆಡೆ ಎಟಿಎಂಗಳಲ್ಲಿ ನಗದು ಲಭ್ಯತೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಎಸ್ಬಿಐ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ಗಳು ಮುಷ್ಕರದ ಕುರಿತು ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡಿವೆ. ಎಲ್ಲ ಶನಿವಾರಗಳನ್ನು ರಜಾದಿನಗಳನ್ನಾಗಿ ಘೋಷಿಸುವ ಕುರಿತು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಮತ್ತು ಯುಎಫ್ಬಿಯು ನಡುವೆ 2024ರ ಮಾರ್ಚ್ನಲ್ಲಿ ನಡೆದ ವೇತನ ಪರಿಷ್ಕರಣೆ ಚರ್ಚೆಗಳ ಸಂದರ್ಭದಲ್ಲಿ ಒಪ್ಪಂದವಾಗಿತ್ತು. ಆದರೆ ಸರ್ಕಾರವು ಈ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (ಎಐಬಿಒಸಿ) ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ಹೇಳಿದ್ದಾರೆ. ‘ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ. ಪ್ರತೀ ಶನಿವಾರ ರಜೆ ನೀಡಿದರೂ ಕೆಲಸದ ದಿನಗಳು ನಷ್ಟವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ನಮ್ಮ ಬೇಡಿಕೆಗಳ ಕುರಿತು ಯಾವುದೇ ಭರವಸೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ ಪ್ರತೀ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಈ ಬ್ಯಾಂಕ್ಗಳಲ್ಲಿ ನಾಳೆ ಅಡಚಣೆ ಸಾಧ್ಯ ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಶಾಖೆಗಳಲ್ಲಿ ಶಾಖೆಗೆ ಭೇಟಿ ನೀಡಿ ಪಡೆಯುವ ಠೇವಣಿ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮೊದಲಾದ ಸೇವೆಗಳು ಅಡಚಣೆಗೆ ಒಳಗಾಗುವ ಸಾಧ್ಯತೆ ಇದೆ. ಕೆಲವೆಡೆ ಎಟಿಎಂಗಳಲ್ಲಿ ನಗದು ಲಭ್ಯತೆಗೆ ಸಮಸ್ಯೆ ಎದುರಾಗಬಹುದು. ಈ ಸೇವೆಗಳು ಎಂದಿನಂತೆ ಇರಲಿದೆ ಯುಪಿಐ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವಿದೇಶಿ ಯುದ್ಧನೌಕೆಗಳ ಉಪಸ್ಥಿತಿಗೆ ಹೆದರುವುದಿಲ್ಲ: Iran
ಭಿತ್ತಿಚಿತ್ರದ ಮೂಲಕ ಅಮೆರಿಕಾಕ್ಕೆ ಎಚ್ಚರಿಕೆ
Philippines: ಹಡಗು ಮುಳುಗಿ 15 ಮೃತ್ಯು; 28 ಮಂದಿ ನಾಪತ್ತೆ
ಮನಿಲಾ, ಜ.26: ದಕ್ಷಿಣ ಫಿಲಿಪ್ಪೀನ್ಸ್ನ ಬಾಲುಕ್ ದ್ವೀಪದ ಬಳಿ ಸೋಮವಾರ ಪ್ರಯಾಣಿಕರ ಹಡಗು ಮುಳುಗಿ, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 28 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಜಂಬೋವಂಗ ನಗರದಿಂದ ಸುಲು ಪ್ರಾಂತದ ಜೊಲೊ ನಗರಕ್ಕೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ 332 ಪ್ರಯಾಣಿಕರು ಮತ್ತು 27 ಸಿಬ್ಬಂದಿ ಇದ್ದರು. ಸ್ಥಳೀಯ ಕಾಲಮಾನ ಸೋಮವಾರ ಮಧ್ಯಾಹ್ನ 1:50ಕ್ಕೆ ಹಡಗಿನೊಳಗೆ ಏಕಾಏಕಿ ನೀರು ಪ್ರವೇಶಿಸಿ ಹಡಗು ಮುಳುಗತೊಡಗಿತು. ಹಡಗಿನ ಕ್ಯಾಪ್ಟನ್ ಅಪಾಯದ ಸಂದೇಶ ರವಾನಿಸಿದ್ದು, ಫಿಲಿಪ್ಪೀನ್ಸ್ನ ಕರಾವಳಿ ಕಾವಲು ಪಡೆ, ನೌಕಾಪಡೆ, ವಾಯುಪಡೆ ಹಾಗೂ ಸ್ಥಳೀಯ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. 316 ಮಂದಿಯನ್ನು ರಕ್ಷಿಸಲಾಗಿದ್ದು, 15 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಇನ್ನೂ 28 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
T20 ಕ್ರಿಕೆಟ್: ಭಾರತದ ಪರ ಎರಡನೇ ವೇಗದ ಅರ್ಧಶತಕ ಗಳಿಸಿದ ಅಭಿಷೇಕ್
ಹೊಸದಿಲ್ಲಿ, ಜ.26: ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ಗುವಾಹಟಿಯಲ್ಲಿ ನಡೆದ ಮೂರನೇ ಟಿ–20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಟಿ–20 ಕ್ರಿಕೆಟ್ನಲ್ಲಿ ಭಾರತದ ಪರ ಎರಡನೇ ವೇಗದ ಅರ್ಧಶತಕ ದಾಖಲಿಸಿದರು. ಕಳೆದ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 16 ಎಸೆತಗಳಲ್ಲಿ 50 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಸಹ ಆಟಗಾರ ಹಾರ್ದಿಕ್ ಪಾಂಡ್ಯ ದಾಖಲೆಯನ್ನು ಮುರಿದಿದ್ದರು. ಭಾರತದ ಪರ ವೇಗದ ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ತಮ್ಮ ಮೆಂಟರ್ ಯುವರಾಜ್ ಸಿಂಗ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಯುವರಾಜ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಆ ವೇಳೆ ಅವರು ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿದ್ದರು. ಒಟ್ಟಾರೆ, ಯುವರಾಜ್ ಅವರ ಪ್ರಯತ್ನವು ಟಿ–20 ಕ್ರಿಕೆಟ್ನ ಎರಡನೇ ವೇಗದ ಅರ್ಧಶತಕವಾಗಿದೆ. 2023ರ ಏಷ್ಯನ್ ಗೇಮ್ಸ್ನಲ್ಲಿ ಮಂಗೋಲಿಯಾ ವಿರುದ್ಧ 9 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ನೇಪಾಳದ ದೀಪೇಂದ್ರ ಸಿಂಗ್ ಅವರು ಯುವರಾಜ್ ದಾಖಲೆಯನ್ನು ಮುರಿದಿದ್ದರು. ಜ.21ರಂದು ನಾಗಪುರದಲ್ಲಿ ನಡೆದ ಮೊದಲ ಪಂದ್ಯದಲ್ಲೂ ಅಬ್ಬರಿಸಿದ್ದ ಅಭಿಷೇಕ್, ರವಿವಾರ ಗುವಾಹಟಿಯಲ್ಲಿ 20 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಐದು ಸಿಕ್ಸರ್ಗಳೊಂದಿಗೆ ಔಟಾಗದೆ 68 ರನ್ ಗಳಿಸಿ ಭಾರತಕ್ಕೆ ಎಂಟು ವಿಕೆಟ್ ಜಯ ತಂದುಕೊಟ್ಟಿದ್ದರು.
BCCI ಮಾಜಿ ಅಧ್ಯಕ್ಷ ಐ.ಎಸ್. ಬಿಂದ್ರಾ ನಿಧನ
ಚೆನ್ನೈ, ಜ.26: ಐ.ಎಸ್. ಬಿಂದ್ರಾ ಎಂದೇ ಜನಪ್ರಿಯರಾಗಿದ್ದ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಇಂದರ್ಜಿತ್ ಸಿಂಗ್ ಬಿಂದ್ರಾ ರವಿವಾರ ಹೊಸದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಜಯ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು. ‘‘ಮಾಜಿ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತೀಯ ಕ್ರಿಕೆಟ್ ಆಡಳಿತದ ದಿಗ್ಗಜ ಐ.ಎಸ್. ಬಿಂದ್ರಾ ನಮ್ಮನ್ನು ಅಗಲಿದ್ದು, ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ಅವರ ಪರಂಪರೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಓಂ ಶಾಂತಿ’’ ಎಂದು ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್ ಅವರು ಬಿಂದ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಬಿಂದ್ರಾ ಅವರು 1993ರಿಂದ 1996ರ ತನಕ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1978ರಿಂದ 2014ರ ತನಕ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ)ಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆಡಳಿತಗಾರನಾಗಿ ಅವರ ಸೇವೆಗಳನ್ನು ಗುರುತಿಸಿ ಮೊಹಾಲಿಯ ಪಿಸಿಎ ಸ್ಟೇಡಿಯಂಗೆ ‘ಐ.ಎಸ್. ಬಿಂದ್ರಾ ಸ್ಟೇಡಿಯಂ’ ಎಂದು ಮರುನಾಮಕರಣಗೊಳಿಸಲಾಗಿದೆ. ಶರದ್ ಪವಾರ್ ಐಸಿಸಿ ಅಧ್ಯಕ್ಷರಾಗಿದ್ದಾಗ ಬಿಂದ್ರಾ ಅವರು ಪ್ರಮುಖ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದರು. 1987ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಶ್ರೇಯಸ್ಸು ಬಿಂದ್ರಾ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷರಾದ ಜಗಮೋಹನ್ ದಾಲ್ಮಿಯಾ ಮತ್ತು ಎನ್.ಕೆ.ಪಿ. ಸಾಳ್ವೆಗೆ ಸಲ್ಲುತ್ತದೆ. ಕ್ರಿಕೆಟ್ ಪಂದ್ಯಗಳ ಪ್ರಸಾರದಲ್ಲಿ ದೂರದರ್ಶನದ ಏಕಸ್ವಾಮ್ಯವನ್ನು ಮುರಿಯಲು ಬಿಂದ್ರಾ ಅವರು 1994ರಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಬಿಂದ್ರಾ ಹಾಗೂ ಅವರ ತಂಡದ ಪರ ತೀರ್ಪು ನೀಡಿತ್ತು. ಹೀಗಾಗಿ ಇಎಸ್ಪಿಎನ್ ಹಾಗೂ ಟಿಟಬ್ಲ್ಯುಐ ನಂತಹ ಜಾಗತಿಕ ಕಂಪೆನಿಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಆ ನಂತರ ಕ್ರಿಕೆಟ್ ವಿಶ್ವದ ಅತಿ ದೊಡ್ಡ ಕ್ರೀಡೆಯಾಗಿ ಬೆಳೆಯಿತು.
Australian Open | ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್, ಇಗಾ ಸ್ವಿಯಾಟೆಕ್ ಕ್ವಾರ್ಟರ್ ಫೈನಲ್ ಗೆ
ಮೆಲ್ಬರ್ನ್, ಜ.26: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹಾಗೂ ಪೋಲ್ಯಾಂಡ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅನುಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ತಮ್ಮದೇ ದೇಶದ ಲುಸಿಯಾನೊ ಡಾರ್ಡೆರಿ ಅವರನ್ನು 6–1, 6–3, 7–6(2) ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಅವರು ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ ಸೋಮವಾರ ಸಂಜೆ ನಡೆದ ಪಂದ್ಯದಲ್ಲಿ ತಾಪಮಾನವು 33 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿತ್ತು. ಮೂರನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಎಲಿಯಟ್ ಸ್ಪಿಝಿರ್ರಿ ವಿರುದ್ಧ ಆಡುತ್ತಿದ್ದ ವೇಳೆ ವಿಪರೀತ ಸೆಖೆಯಿಂದ ಬಳಲಿದ್ದ ಸಿನ್ನರ್ ಮೇಲೆ ಎಲ್ಲರ ಗಮನ ಹರಿದಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ಸಿನ್ನರ್ ಸಂಪೂರ್ಣ ಜೋಶ್ನಲ್ಲಿ ಆಡಿದರು. ಎರಡು ಗಂಟೆ 9 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 22ನೇ ಶ್ರೇಯಾಂಕದ ಡಾರ್ಡೆರಿ ಅವರನ್ನು ಸುಲಭವಾಗಿ ಮಣಿಸಿದರು. ಸಿನ್ನರ್ ಸೆಮಿ ಫೈನಲ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಲು ಬೆನ್ ಶೆಲ್ಟನ್ ಅಥವಾ ಕಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ. ಇಟಲಿಯ ಆರಡಿ ಒಂದು ಇಂಚು ಎತ್ತರದ ಲೊರೆನ್ಜೊ ಮುಸೆಟ್ಟಿ ಮತ್ತೊಂದು ಪುರುಷರ ಸಿಂಗಲ್ಸ್ ಪ್ರಿ–ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಜ್ ಅವರನ್ನು 6–2, 7–5, 6–4 ಸೆಟ್ಗಳ ಅಂತರದಿಂದ ಮಣಿಸಿದರು. 23ರ ಹರೆಯದ ಮುಸೆಟ್ಟಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಬಾರಿ ಹಾಗೂ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮುಸೆಟ್ಟಿ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.4 ಆಟಗಾರ ನೊವಾಕ್ ಜೊಕೊವಿಕ್ ಅವರಿಂದ ಕಠಿಣ ಸವಾಲನ್ನು ಎದುರಿಸಲಿದ್ದಾರೆ. ಸರ್ಬಿಯಾದ ಸ್ಟಾರ್ ಜೊಕೊವಿಕ್ ವಿರುದ್ಧ ಹೆಡ್–ಟು–ಹೆಡ್ ದಾಖಲೆಯಲ್ಲಿ ಮುಸೆಟ್ಟಿ 1–9 ಅಂತರದಿಂದ ಹಿಂದಿದ್ದಾರೆ. ಕೆಲವೇ ದಿನಗಳ ಹಿಂದೆ ಥಾಮಸ್ ಮಚಾಕ್ ವಿರುದ್ಧ ನಾಲ್ಕು ಗಂಟೆ 27 ನಿಮಿಷಗಳ ಕಾಲ ನಡೆದ ಐದು ಸೆಟ್ಗಳ ಪಂದ್ಯದಲ್ಲಿ ಜಯಶಾಲಿಯಾಗಿದ್ದ ಮುಸೆಟ್ಟಿ, ಇಂದಿನ ಪಂದ್ಯದಲ್ಲಿ ಎಲ್ಲಿಯೂ ದಣಿದಂತೆ ಕಂಡುಬರಲಿಲ್ಲ. *ಸ್ವಿಯಾಟೆಕ್ ಮೂರನೇ ಬಾರಿ ಕ್ವಾರ್ಟರ್ ಫೈನಲ್ಗೆ ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಮ್ಯಾಡಿಸನ್ ಇಂಗ್ಲಿಸ್ ಅವರನ್ನು 6–0, 6–3 ನೇರ ಸೆಟ್ಗಳ ಅಂತರದಿಂದ ಮಣಿಸಿರುವ ಆರು ಬಾರಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಮೆಲ್ಬರ್ನ್ ಪಾರ್ಕ್ನಲ್ಲಿ ಟ್ರೋಫಿ ಗೆಲ್ಲುವ ಆಸ್ಟ್ರೇಲಿಯಾದ ವಿಶ್ವಾಸಕ್ಕೆ ಧಕ್ಕೆ ತಂದರು. ಸ್ವಿಯಾಟೆಕ್ ಮೂರನೇ ಬಾರಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದು, ಮುಂದಿನ ಸುತ್ತಿನಲ್ಲಿ ಕಝಕ್ಸ್ತಾನದ ಆಟಗಾರ್ತಿ ಎಲೆನಾ ರೈಬಾಕಿನಾರನ್ನು ಎದುರಿಸಲಿದ್ದಾರೆ. ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿರುವ ಸ್ವಿಯಾಟೆಕ್ ತಮ್ಮ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಪರಿಪೂರ್ಣತೆ ಸಾಧಿಸಲು ಬಯಸಿದ್ದಾರೆ. 28ರ ಹರೆಯದ ಇಂಗ್ಲಿಸ್, ಮೂರನೇ ಸುತ್ತಿನ ಎದುರಾಳಿ ಜಪಾನಿನ ನವೊಮಿ ಒಸಾಕಾ ಅನಾರೋಗ್ಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದ ನಂತರ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದರು. ವಿಶ್ವದ ನಂ.168ನೇ ಆಟಗಾರ್ತಿ ಇಂಗ್ಲಿಸ್ ಮಹಿಳೆಯರ ಸಿಂಗಲ್ಸ್ ಡ್ರಾದಲ್ಲಿ ಆಸ್ಟ್ರೇಲಿಯಾದ ಕೊನೆಯ ಆಟಗಾರ್ತಿಯಾಗಿದ್ದರು. ಹಿಂದಿನ ಸುತ್ತಿನಲ್ಲಿ ರಷ್ಯಾದ ಅನ್ನಾ ಕಾಲಿನ್ಸ್ಕಾಯಾರನ್ನು ಮೂರು ಸೆಟ್ಗಳಿಂದ ಮಣಿಸಿದ್ದ ಸ್ವಿಯಾಟೆಕ್, ಇಂದು ಪ್ರಬಲ ಪ್ರದರ್ಶನ ನೀಡಿ ಇಂಗ್ಲಿಸ್ಗೆ ಸೋಲುಣಿಸಿದರು. *ಹಾಲಿ ಚಾಂಪಿಯನ್ ಮ್ಯಾಡಿಸನ್ಗೆ ಸೋಲು ಹಾಲಿ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರನ್ನು ನೇರ ಸೆಟ್ಗಳ ಅಂತರದಿಂದ ಮಣಿಸಿ ಶಾಕ್ ನೀಡಿದ ಜೆಸ್ಸಿಕಾ ಪೆಗುಲಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ. ಸೋಮವಾರ ನಡೆದ ಅಂತಿಮ–16ರ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಪೆಗುಲಾ ತಮ್ಮದೇ ದೇಶದ ಮ್ಯಾಡಿಸನ್ ಕೀಸ್ ಅವರನ್ನು 6–3, 6–4 ನೇರ ಸೆಟ್ಗಳ ಅಂತರದಿಂದ ಮಣಿಸಿದರು. 2024ರಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ ರನ್ನರ್–ಅಪ್ ಆಗಿದ್ದ ಪೆಗುಲಾ, ಈಗಲೂ ತಮ್ಮ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗಿಟ್ಟಿಸಲು ಹೋರಾಟ ಮುಂದುವರಿಸಿದ್ದಾರೆ. ಪೆಗುಲಾ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2021 ಹಾಗೂ 2023ರ ನಡುವೆ ಮೂರು ಬಾರಿ ಅಂತಿಮ–8ರ ಹಂತವನ್ನು ತಲುಪಿದ್ದರು. 31ರ ಹರೆಯದ ಪೆಗುಲಾ ಮೆಲ್ಬರ್ನ್ ಪಾರ್ಕ್ನಲ್ಲಿ ಇನ್ನಷ್ಟೇ ಸೆಮಿ ಫೈನಲ್ ತಲುಪಬೇಕಾಗಿದೆ. ಮ್ಯಾಡಿಸನ್ ಕೀಸ್ ಕಳೆದ ವರ್ಷದ ಫೈನಲ್ನಲ್ಲಿ ಆರ್ಯನಾ ಸಬಲೆಂಕಾಗೆ ಆಘಾತಕಾರಿ ಸೋಲುಣಿಸಿ ತಮ್ಮ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಸೋಮವಾರದ ಪಂದ್ಯದಲ್ಲಿ 27 ಅನಗತ್ಯ ತಪ್ಪುಗಳನ್ನು ಎಸಗಿದ್ದಲ್ಲದೆ, ಸ್ಥಿರ ಪ್ರದರ್ಶನ ನೀಡುವಲ್ಲಿಯೂ ಪರದಾಟ ನಡೆಸಿದರು. ಪೆಗುಲಾ ಆರಂಭದಲ್ಲೇ ಹಿಡಿತ ಸಾಧಿಸಿದ್ದು, ಮೊದಲ ಸೆಟ್ನಲ್ಲಿ 2–0 ಮುನ್ನಡೆ ಪಡೆದರು.
ಗಣರಾಜ್ಯೋತ್ಸವದಲ್ಲಿ ವಿಪಕ್ಷ ನಾಯಕರಿಗೆ 3ನೇ ಸಾಲಿನ ಆಸನ; 2014ರ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್, ನಿಯಮ ಏನು?
ಭಾರತ ಇಂದು (ಜ.26-ಸೋಮವಾರ) 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್, ಭವ್ಯ ಬಾರತದ ಸ್ವರೂಪವನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಈ ಮಧ್ಯೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕೇಂದ್ರದ ಈ ನಡೆಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಮಂಗಳೂರು | ಬಡವರ ಸೇವೆಗೆ ದೇವರ ಆಶೀರ್ವಾದ ಇದೆ : ಪೀಟರ್ ಪಾವ್ಲ್ ಸಲ್ದಾನ
ಮಂಗಳೂರು, ಜ.26: ಬಡವರಿಗಾಗಿ ಮಾಡುವ ಸಹಾಯಕ್ಕೆ ದೇವರ ಆಶೀರ್ವಾದ ಸದಾ ಇದೆ. ಬಡವರ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನಾ ಹೇಳಿದ್ದಾರೆ ಮಂಗಳೂರು ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್ ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಸಂತ ವಿನ್ಸೆಂಟ್ ದಿ ಪಾವ್ಲ್ ಸೊಸೈಟಿ ಇದರ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ದ.ಕ. ಜಿಲ್ಲೆಯ ಅರ್ಹ ಬಡರೋಗಿಗಳಿಗಾಗಿ ಶೇ.50 ರಿಯಾಯತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಎರಡನೇ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜೋಸೆಫ್ ಮಿನೇಜಸ್ ಸಾಸ್ತಾನ ಇವರ ನೇತೃತ್ವದಲ್ಲಿ ಮತ್ತು ಫ್ರೀಡಾ ರೇಗೊ ಮತ್ತು ಜಾನೆಟ್ ಫೆರ್ನಾಂಡಿಸ್ ಇವರ ಸಹಕಾರದೊಂದಿಗೆ ಟ್ರಿನಿಟಿ ಮೆಡಿಕೇರ್ ಸರ್ವಿಸ್ ಈ ಯೋಜನೆಯನ್ನು ಕೈಗೊಳ್ಳಲಾಗಿದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮಾತನಾಡಿ ಕ್ರೈಸ್ತ ಸಮುದಾಯ ತನ್ನ ಸೇವೆಯ ಮೂಲಕ ಜಗತ್ತಿಗೆ ಮಾದರಿಯಾಗಿದೆ ಎಂದರು. ಟ್ರಿನಿಟಿ ಮೆಡಿಕೇರ್ ಸರ್ವಿಸ್ ಇದರ ರೂವಾರಿ ಜೊಸೇಫ್ ಮಿನೇಜಸ್, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ಅಂತರಾಷ್ಟ್ರೀಯ ಅಧ್ಯಕ್ಷ ಜುವಾನ್ ಮಾನ್ವೆಲ್ ಬ್ಯೂರೆಗೊ ಗೋಮ್ಸ್, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಜೂಡ್ ಮಂಗಳ್ರಾಜ್, ಅಂತರ್ರಾಷ್ಟ್ರೀಯ ಜನರಲ್ ಕೌನ್ಸಿಸ್ ವಿಶೇಷ ಒಂಬುಡ್ಸ್ಮನ್ ಜೋಸೆಫ್ ಪಾಂಡ್ಯನ್, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ.ಫಾವುಸ್ತಿನ್ ಲೂಕಾಸ್ ಲೋಬೊ, ಸೊಸೈಟಿ ಆಫ್ ವಿನ್ಸೆಂಟ್ ದಿ ಪೌಲ್ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಗೂ ಮಾನಿಕ್ಯಮ್, ಸಂಯೋಜಕರಾದ ಆಶಾ ವಾಜ್, ಯುವ ಪ್ರತಿನಿಧಿ ಆಲಿಸ್ಟರ್ ನಜರೆತ್, ಸೈಂಟ್ ವಿನ್ಸೆಂಟ್ ದಿ ಪಾವ್ಲ್ ಕೇಂದ್ರ ಸಮಿತಿಯ ಅಧ್ಯಕ್ಷ ಗ್ಯಾಬ್ರಿಯಲ್ ಜೋ ಕುವೆಲ್ಲೊ, ಆಧ್ಯಾತ್ಮಿಕ ನಿರ್ದೇಶಕ ವಂ. ಫ್ಲೇವಿಯಾನ್ ಲೋಬೊ, ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್, ಕೋಶಾಧಿಕಾರಿ ಕ್ಲಾರೆನ್ಸ್ ಮಚಾದೊ, ಸಂಚಾಲಕರಾದ ಫಿಲೋಮಿನಾ ಮಿನೇಜಸ್ ಉಪಸ್ಥಿತರಿದ್ದರು.
ತಲಪಾಡಿ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ
ಮಂಗಳೂರು : ತಲಪಾಡಿ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್ .ಅರಬಿ ಕುಂಞಿ ಧ್ವಜಾರೋಹಣಗೈದರು. ಫಲಾಹ್ ಮದರಸ ಮುಖ್ಯೋಪಾಧ್ಯಾಯ ಮುಸ್ತಫಾ ಕಮಾಲ್, ಸಂಸ್ಥೆಯ ಜೊತೆ ಕಾರ್ಯದರ್ಶಿ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಇಸ್ಮಾಯಿಲ್ ತಲಪಾಡಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ಅಬ್ಬಾಸ್ ಮಜಲ್, ಕಾಲೇಜು ಪ್ರಾಂಶುಪಾಲ ರೇವತಿ ಎನ್.ರೈ., ಕನ್ನಡ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಮುಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗೀತಾಂಜಲಿ, ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ನಾಸಿರ್, ಶಬೀರ್ ಇಸ್ಮಾಯಿಲ್ ಹಾಗೂ ಇಸ್ಮಾಯಿಲ್ ಇರ್ಫಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಪವನ ಕಾರ್ಯಕ್ರಮ ನಿರೂಪಿಸಿದರು. ಆಶಾ ಸ್ವಾಗತಿಸಿದರು, ಸಂಧ್ಯಾ ವಂದಿಸಿದರು.
ಭಾರತ–ಚೀನಾ ಉತ್ತಮ ನೆರೆಹೊರೆಯವರು, ಸ್ನೇಹಿತರು: ಗಣರಾಜ್ಯೋತ್ಸವ ಶುಭಾಶಯ ಕೋರಿದ ಕ್ಸಿಜಿನ್ಪಿಂಗ್
ಹೊಸದಿಲ್ಲಿ, ಜ.26: ಭಾರತದ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರು, ‘ಉಭಯ ರಾಷ್ಟ್ರಗಳು ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರು’ ಎಂದು ಬಣ್ಣಿಸಿದ್ದಾರೆ ಎಂದು ಅಧಿಕೃತ ಸುದ್ದಿಸಂಸ್ಥೆ ಶಿನುವಾ ವರದಿ ಮಾಡಿದೆ. ಕಳೆದೊಂದು ವರ್ಷದಲ್ಲಿ ಭಾರತ–ಚೀನಾ ಸಂಬಂಧಗಳು ಸುಧಾರಿಸುತ್ತಿವೆ. ಇದು ಜಾಗತಿಕ ಶಾಂತಿ ಮತ್ತು ಸಮೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂದು ಹೇಳಿರುವ ಕ್ಸಿಜಿನ್ಪಿಂಗ್, ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರಾಗಿರುವುದು ಚೀನಾ ಮತ್ತು ಭಾರತಕ್ಕೆ ಸರಿಯಾದ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಚೀನಾ ಮತ್ತು ಭಾರತವನ್ನು ಒಟ್ಟಿಗೆ ನರ್ತಿಸುತ್ತಿರುವ ‘ಡ್ರ್ಯಾಗನ್ ಮತ್ತು ಆನೆ’ ಎಂದು ಬಣ್ಣಿಸಿರುವ ಅವರು, ಆರೋಗ್ಯಕರ ಮತ್ತು ಸ್ಥಿರ ಸಂಬಂಧಗಳನ್ನು ಉತ್ತೇಜಿಸಲು ಉಭಯ ದೇಶಗಳು ಪರಸ್ಪರ ವಿನಿಮಯ ಮತ್ತು ಸಹಕಾರವನ್ನು ಹೆಚ್ಚಿಸಬೇಕು ಹಾಗೂ ಪರಸ್ಪರರ ಕಳವಳಗಳನ್ನು ಪರಿಹರಿಸಬೇಕು ಎಂದು ತಾನು ಆಶಿಸಿರುವುದಾಗಿ ಕ್ಸಿಜಿನ್ಪಿಂಗ್ ಹೇಳಿದ್ದಾರೆ.
ಸರ್ವ ಪುರುಷರ CRPF ತುಕಡಿಯ ನೇತೃತ್ವ ವಹಿಸಿದ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ
ಹೊಸದಿಲ್ಲಿ, ಜ. 26: ಇಲ್ಲಿನ ಕರ್ತವ್ಯ ಪಥದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಿಆರ್ಪಿಎಫ್ನ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಸರ್ವ ಪುರುಷರ ಸಿಆರ್ಪಿಎಫ್ ತುಕಡಿಯ ನೇತೃತ್ವ ವಹಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಹಳ್ಳಿಯವರಾದ 26 ವರ್ಷದ ಅಧಿಕಾರಿ ಸಿಮ್ರಾನ್ ಬಾಲಾ ಅವರು, ದೇಶದ ಅತಿ ದೊಡ್ಡ ಅರೆಸೇನಾ ಪಡೆಯಾಗಿರುವ ಸಿಆರ್ಪಿಎಫ್ನ 147 ಸಿಬ್ಬಂದಿಯ ತುಕಡಿಯ ನೇತೃತ್ವ ವಹಿಸಿದ್ದಾರೆ. ಕರ್ತವ್ಯ ಪಥದಲ್ಲಿ ಸಿಆರ್ಪಿಎಫ್ನ ಬ್ಯಾಂಡ್ ತಂಡ ಬಾರಿಸಿದ ಹಾಡು ‘ದೇಶ್ ಕೆ ಹಮ್ ಹೆ ರಕ್ಷಕ್’ ಗೆ ಅನುಗುಣವಾಗಿ ತುಕಡಿ ಸಾಗಿತು. ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ವಿವಿಧ ತುಕಡಿಗಳಿಗೆ ಮಹಿಳಾ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳು ನೇತೃತ್ವ ವಹಿಸಿರುವ ಹಲವು ನಿದರ್ಶನಗಳಿವೆ. ಆದರೆ, ವಾರ್ಷಿಕ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸರ್ವ ಪುರುಷರನ್ನು ಒಳಗೊಂಡ ತುಕಡಿಯನ್ನು ಮಹಿಳಾ ಅಧಿಕಾರಿಯೇ ಮುನ್ನಡೆಸಿರುವುದು ಇದೇ ಮೊದಲು. ಜಮ್ಮು ಹಾಗೂ ಕಾಶ್ಮೀರದ ರಾಜೌರಿಯವರಾದ ಬಾಲಾ ಅವರು ಒಂದು ವರ್ಷದ ಹಿಂದೆ ಸಿಆರ್ಪಿಎಫ್ಗೆ ಸೇರಿದ್ದರು. ದೇಶದ ಅತಿ ದೊಡ್ಡ ಅರೆಸೇನಾ ಪಡೆಯ ಅಧಿಕಾರಿ ಶ್ರೇಣಿಯ ಹುದ್ದೆಗೆ ಸೇರಿದ ಜಿಲ್ಲೆಯ ಮೊದಲ ಮಹಿಳೆ ಬಾಲಾ. ಅವರ ಗ್ರಾಮ ನೌಶೇರಾ ಭಾರತ–ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಿಂದ ಕೇವಲ 11 ಕಿ.ಮೀ. ದೂರದಲ್ಲಿದೆ. ಈ ಪ್ರದೇಶ ಗಡಿಯಾಚೆಗಿನ ಶೆಲ್ ದಾಳಿಗಳ ಹಲವು ನಿದರ್ಶನಗಳಿಗೆ ಸಾಕ್ಷಿಯಾಗಿದೆ. “ಗಣರಾಜ್ಯೋತ್ಸವ ಪಥಸಂಚಲನದಲ್ಲಿ ತುಕಡಿಯ ನೇತೃತ್ವ ವಹಿಸುವ ಅವಕಾಶ ದೊರಕಿರುವುದು ನನಗೆ ನಿಜವಾಗಿಯೂ ಹೆಮ್ಮೆಯ ವಿಚಾರ. ನನಗೆ ಈ ಅವಕಾಶ ನೀಡಿದ ಸಿಆರ್ಪಿಎಫ್ಗೆ ಗೌರವ ಸಲ್ಲಿಸುತ್ತೇನೆ” ಎಂದು ಅಭ್ಯಾಸದ ವೇಳೆ ಸಿಮ್ರಾನ್ ಬಾಲಾ ಹೇಳಿದ್ದಾರೆ.
ಜಾಗತಿಕ ಸಂಸ್ಥೆಗಳು, ಒಪ್ಪಂದಗಳಿಂದ ಹೊರನಡೆದ ಅಮೆರಿಕ ಕೆಲವೊಂದರಲ್ಲಿ ಇನ್ನೂ ಸದಸ್ಯರಾಗಿ ಉಳಿದಿರುವುದೇಕೆ?
ಈ ತಿಂಗಳ ಆರಂಭದಲ್ಲಿ, ಅಮೆರಿಕವು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದು ಹೇಳುತ್ತಾ 60ಕ್ಕೂ ಹೆಚ್ಚು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಒಪ್ಪಂದಗಳಿಂದ ಹಿಂದೆ ಸರಿದಿದೆ. ಈ ರೀತಿ ಅಮೆರಿಕ ಹೊರನಡೆದ ಸಂಸ್ಥೆಗಳಲ್ಲಿ ಅತ್ಯಂತ ಪ್ರಮುಖವಾದವು ಪರಿಸರ ಮತ್ತು ಹವಾಮಾನ ಸಂಬಂಧಿತ ಒಪ್ಪಂದಗಳಾಗಿವೆ. ಹವಾಮಾನ ಬದಲಾವಣೆಯ ಕುರಿತ ಯುಎನ್ ಫ್ರೇಮ್ವರ್ಕ್ ಕನ್ವೆನ್ಷನ್ (UNFCCC), ಹವಾಮಾನ ಬದಲಾವಣೆಯ ಕುರಿತ ಅಂತರಸರ್ಕಾರಿ ಸಮಿತಿ (IPCC), ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA), ಅಂತರರಾಷ್ಟ್ರೀಯ ಸೌರ ಒಕ್ಕೂಟ (ISA), ಪ್ರಕೃತಿ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಕ್ಕೂಟ (IUCN) ಇವುಗಳಲ್ಲಿ ಪ್ರಮುಖವಾಗಿವೆ. ಹವಾಮಾನ ಕ್ರಿಯೆಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಿರಸ್ಕಾರ ಎಲ್ಲರಿಗೂ ತಿಳಿದಿದೆ. ಅವರು ಹವಾಮಾನ ಬದಲಾವಣೆಯನ್ನು ‘ವಂಚನೆ’ ಎಂದು ಬಣ್ಣಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ತಕ್ಷಣವೇ ಅಮೆರಿಕ 2015ರ ಪ್ಯಾರಿಸ್ ಒಪ್ಪಂದದಿಂದ ಹೊರಬಂದಿತು. ಈ ಸಂಸ್ಥೆಗಳಿಂದ ಹಿಂದೆ ಸರಿದಿರುವುದು, ಹವಾಮಾನ ಕ್ರಿಯೆ ಮತ್ತು ಇಂಧನ ಪರಿವರ್ತನೆಯನ್ನು ಉತ್ತೇಜಿಸುವ ಸಂಸ್ಥೆಗಳು ಅಥವಾ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಇರುವ ನಿರಾಸಕ್ತಿಯನ್ನು ಸ್ಪಷ್ಟಪಡಿಸುತ್ತದೆ. ಆದಾಗ್ಯೂ, ಅಮೆರಿಕ ಅಂತಹ ಎಲ್ಲಾ ಸಂಸ್ಥೆಗಳು ಅಥವಾ ಒಪ್ಪಂದಗಳಿಂದ ಹೊರಬಂದಿಲ್ಲ. ಜಾಗತಿಕ ಹವಾಮಾನ ನೀತಿ ಮತ್ತು ಚರ್ಚೆಗಳಲ್ಲಿ ಗಮನಾರ್ಹ ಹೆಜ್ಜೆಗುರುತನ್ನು ಹೊಂದಿರುವ ವಿಶ್ವಸಂಸ್ಥೆಯ 31 ಸಂಸ್ಥೆಗಳಿಂದ ಅದು ಹೊರಬಂದಿದೆ. ಆದರೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ದಿಂದ ಹೊರಬಂದಿಲ್ಲ. ಅದು IRENAಯಿಂದ ಹೊರಬಂದಿದ್ದರೂ, ಜಾಗತಿಕ ಇಂಧನ ಪರಿವರ್ತನೆಗಳ ಮೇಲೆ ಪ್ರಭಾವ ಬೀರುವ ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA)ಯಿಂದ ಹೊರಬಂದಿಲ್ಲ. ಅದೇ ರೀತಿ, ಹವಾಮಾನ ವಿಜ್ಞಾನದ ಆವರ್ತಕ ಮೌಲ್ಯಮಾಪನಗಳನ್ನು ಮಾಡುವ ವೈಜ್ಞಾನಿಕ ಸಂಸ್ಥೆಯಾದ IPCCಯಿಂದ ಅಮೆರಿಕ ಹಿಂದೆ ಸರಿದಿದ್ದರೂ, ಹವಾಮಾನ ವಿಜ್ಞಾನ ಮತ್ತು IPCCಯ ಆತಿಥೇಯ ಸಂಸ್ಥೆಯಾಗಿರುವ ವಿಶ್ವ ಹವಾಮಾನ ಸಂಸ್ಥೆ (WMO)ಯಿಂದ ಹೊರಬಂದಿಲ್ಲ. ಅಮೆರಿಕ ಇನ್ನೂ ಸದಸ್ಯರಾಗಿ ಉಳಿದಿರುವ ಪರಿಸರ, ಇಂಧನ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಕೆಲವು ಇತರ ಸಂಸ್ಥೆಗಳು ಮತ್ತು ಒಪ್ಪಂದಗಳೂ ಇವೆ. ಆದಾಗ್ಯೂ, ಅಮೆರಿಕ ಇನ್ನೂ ಕೆಲವು ಹವಾಮಾನ ಮತ್ತು ವಿಜ್ಞಾನ ಗುಂಪುಗಳ ಸದಸ್ಯನಾಗಿರುವುದರಿಂದ ಅದು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಥವಾ ಆ ವಿಜ್ಞಾನವನ್ನು ಬೆಂಬಲಿಸಲು ಬದ್ಧವಾಗಿದೆ ಎಂದು ಅರ್ಥವಲ್ಲ. ಈ ಸಂಸ್ಥೆಗಳಲ್ಲಿ ಮುಂದುವರಿಯಲು ಪ್ರೇರಣೆಗಳು ತುಂಬಾ ವಿಭಿನ್ನವಾಗಿರಬಹುದು. ಇತರ ಸಂಸ್ಥೆಗಳನ್ನು ತೊರೆಯಲು ನೀಡಿರುವ ಕಾರಣಗಳನ್ನು ಗಮನಿಸಿದರೆ, ಅಮೆರಿಕ ಈಗಲೂ ಭಾಗವಾಗಿರುವ ಪರಿಸರ ಮತ್ತು ಹವಾಮಾನ ಸಂಬಂಧಿತ ಸಂಸ್ಥೆಗಳು ಹಾಗೂ ಒಪ್ಪಂದಗಳು ಅಮೆರಿಕನ್ ಹಿತಾಸಕ್ತಿಗಳನ್ನು ಪೂರೈಸುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಹವಾಮಾನ ಸಂಸ್ಥೆಗಳನ್ನು ತೊರೆಯುವುದರಿಂದ ಉಂಟಾಗುವ ಪರಿಣಾಮಗಳು ನವೀಕರಿಸಬಹುದಾದ ಇಂಧನ ಅಥವಾ ‘ಹಸಿರು ಆರ್ಥಿಕತೆ’ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಹವಾಮಾನ ವೇದಿಕೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಪ್ರಪಂಚದಾದ್ಯಂತದ ವ್ಯಾಪಾರ ನಿಯಮಗಳು, ನಿಯಂತ್ರಣ ಮಾನದಂಡಗಳು ಮತ್ತು ಪೂರೈಕೆ ಸರಪಳಿಗಳ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ, ಯುರೋಪಿಯನ್ ಒಕ್ಕೂಟ ಮತ್ತು ಚೀನಾದಂತಹ ದೇಶಗಳು ಸಾಮಾನ್ಯವಾಗಿ ಹೊರಸೂಸುವಿಕೆ ಮಾನದಂಡಗಳು ಅಥವಾ ಇಂಗಾಲದ ಗಡಿ ಹೊಂದಾಣಿಕೆ ಕ್ರಮಗಳನ್ನು ಜಾರಿಗೆ ತರುತ್ತವೆ. ಇದು ಅಮೆರಿಕದ ರಫ್ತುದಾರರ ಮೇಲೆ ಪರಿಣಾಮ ಬೀರುತ್ತದೆ. ನೇರ ಹವಾಮಾನ ಮಾನ್ಯತೆ ಇಲ್ಲದ ಕಂಪನಿಗಳೂ ಸಹ ಹೆಚ್ಚಿದ ವೆಚ್ಚಗಳು ಅಥವಾ ಕಡಿಮೆ ಮಾರುಕಟ್ಟೆ ಪ್ರವೇಶವನ್ನು ಎದುರಿಸಬೇಕಾಗುತ್ತದೆ. ಚರ್ಚೆಯಲ್ಲಿರುವ ಒಪ್ಪಂದಗಳು ಪ್ರಸ್ತುತ ಚರ್ಚೆಯಲ್ಲಿರುವ ಕೆಲವು ಪ್ರಮುಖ ಅಂತರರಾಷ್ಟ್ರೀಯ ಒಪ್ಪಂದಗಳು ಅಮೆರಿಕದ ಆದ್ಯತೆಗಳಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುವುದೂ ಆ ಹಿತಾಸಕ್ತಿಗಳಲ್ಲೊಂದು ಆಗಿರಬಹುದು. ಉದಾಹರಣೆಗೆ, 2022ರಿಂದ UNEP ಜಾಗತಿಕ ಪ್ಲಾಸ್ಟಿಕ್ ಒಪ್ಪಂದದ ಕುರಿತು ಮಾತುಕತೆಗಳನ್ನು ಸುಗಮಗೊಳಿಸುತ್ತಿದೆ. ಇದು ಸಾಗರಗಳನ್ನೂ ಒಳಗೊಂಡಂತೆ ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸಲು ಕಾನೂನುಬದ್ಧವಾಗಿ ಬಾಧ್ಯತೆ ವಿಧಿಸುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಈ ಒಪ್ಪಂದವನ್ನು ಕಳೆದ ವರ್ಷ ಅಂತಿಮಗೊಳಿಸಬೇಕಾಗಿತ್ತು. ಆದರೆ ಪ್ಲಾಸ್ಟಿಕ್ ಉತ್ಪಾದನೆಗೆ ಮಿತಿ ವಿಧಿಸುವ ನಿಬಂಧನೆಗಳ ಕುರಿತು ಅಮೆರಿಕ ಸೇರಿದಂತೆ ಕೆಲವು ದೇಶಗಳ ಆಕ್ಷೇಪಣೆಗಳು ಮಾತುಕತೆಗಳನ್ನು ತಡೆಹಿಡಿದಿವೆ. ಅಮೆರಿಕ ಈ ಮಾತುಕತೆಗಳಿಂದ ಹಿಂದೆ ಸರಿಯಲು ಮತ್ತು ಪ್ಲಾಸ್ಟಿಕ್ ಒಪ್ಪಂದದ ಭಾಗವಾಗದಿರಲು ನಿರ್ಧರಿಸಬಹುದು. ಆದರೆ ಪ್ರತಿಕೂಲವಾದ ಒಪ್ಪಂದ ಇನ್ನೂ ಅದರ ಉದ್ಯಮಕ್ಕೆ ಹಾನಿ ಮಾಡಬಹುದು. ಉದಾಹರಣೆಗೆ, ಪಳೆಯುಳಿಕೆ ಇಂಧನಗಳಿಂದ ತಯಾರಿಸಲ್ಪಟ್ಟ ಪ್ಲಾಸ್ಟಿಕ್ಗಳ ಅತಿದೊಡ್ಡ ಉತ್ಪಾದಕರಲ್ಲಿ ಅಮೆರಿಕವೂ ಒಂದು. ಅಂತಿಮ ಒಪ್ಪಂದವು ತನ್ನ ಉದ್ಯಮಕ್ಕೆ ಅಪಾಯ ಉಂಟುಮಾಡದಂತೆ ನೋಡಿಕೊಳ್ಳುವುದು ಅಮೆರಿಕಕ್ಕೆ ಮುಖ್ಯವಾಗಿದೆ. ಖಚಿತವಾಗಿ ಹೇಳಬೇಕಾದರೆ, ಪ್ಲಾಸ್ಟಿಕ್ಗಳ ಮೇಲಿನ ಪ್ರಸ್ತಾವಿತ ಉತ್ಪಾದನಾ ಮಿತಿಗಳನ್ನು ವಿರೋಧಿಸುವಲ್ಲಿ ಅಮೆರಿಕ ಒಬ್ಬಂಟಿಯಲ್ಲ. ಚೀನಾ, ಸೌದಿ ಅರೇಬಿಯಾ ಮತ್ತು ಭಾರತ ಸೇರಿದಂತೆ ಹಲವಾರು ಪ್ರಭಾವಿ ರಾಷ್ಟ್ರಗಳೂ ಇದೇ ರೀತಿಯ ನಿಲುವುಗಳನ್ನು ಹೊಂದಿವೆ. ಆದರೆ ಪ್ರಸ್ತುತ ಹಂತದಲ್ಲಿ ಈ ಮಾತುಕತೆಯಿಂದ ಹೊರಗುಳಿಯುವುದು ಲಾಭದಾಯಕವೆಂದು ಟ್ರಂಪ್ ಆಡಳಿತ ಸ್ಪಷ್ಟವಾಗಿ ಕಾಣುತ್ತಿಲ್ಲ. ಅಂತರರಾಷ್ಟ್ರೀಯ ಸಾಗರ ಸಂಸ್ಥೆ (IMO) ಅಡಿಯಲ್ಲಿ ನಡೆಯುತ್ತಿರುವ ಹಡಗುಗಳಿಂದ ಇಂಗಾಲ ಹೊರಸೂಸುವಿಕೆಯ ಕುರಿತ ಚರ್ಚೆಗಳೂ ಸ್ವಲ್ಪ ಮಟ್ಟಿಗೆ ಹೋಲುತ್ತವೆ. ಈ ಚರ್ಚೆಯ ಗುರಿಗಳಲ್ಲಿ ಒಂದು 2050ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಚೌಕಟ್ಟನ್ನು ಅಂತಿಮಗೊಳಿಸುವುದಾಗಿದೆ. ಇದರಲ್ಲಿ ಇತರ ವಿಷಯಗಳ ಜೊತೆಗೆ, ಹಡಗುಗಳಿಂದ ಹೊರಸೂಸುವ ಇಂಗಾಲದ ಮೇಲೆ ತೆರಿಗೆ ವಿಧಿಸುವ ಪ್ರಸ್ತಾವವೂ ಸೇರಿದೆ. ಇದನ್ನೂ ಕಳೆದ ವರ್ಷ ಅಂತಿಮಗೊಳಿಸಬೇಕಾಗಿತ್ತು. ಆದರೆ ಅಮೆರಿಕ ಮತ್ತು ಅದೇ ರೀತಿಯ ನಿಲುವು ಹೊಂದಿರುವ ಇತರ ದೇಶಗಳ ವಿರೋಧದಿಂದಾಗಿ ಅದು ಸಾಧ್ಯವಾಗಿಲ್ಲ. ಈ ಎರಡೂ ವಿಷಯಗಳಲ್ಲೂ ಟ್ರಂಪ್ ಆಡಳಿತ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದ ನಿಲುವು ಬದಲಾಗಿದೆ. ನಿರಂತರ ಪ್ರಭಾವ ಅಮೆರಿಕ ಕೆಲವು ಬಹುಪಕ್ಷೀಯ ಹವಾಮಾನ ಮತ್ತು ವಿಜ್ಞಾನ ಸಂಬಂಧಿತ ಸಂಸ್ಥೆಗಳಿಂದ ಹಿಂದೆ ಸರಿಯದಿರಲು ಮತ್ತೊಂದು ಸಾಧ್ಯ ಕಾರಣವೆಂದರೆ, ಈ ಸಂಸ್ಥೆಗಳ ನೀತಿ ಮತ್ತು ನಿರ್ಧಾರ ಪ್ರಕ್ರಿಯೆಗಳ ಮೇಲೆ ಅದರ ಪ್ರಭಾವ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅಮೆರಿಕ IRENAಯಿಂದ ಹಿಂದೆ ಸರಿದಿದ್ದು, IEAಯಲ್ಲೇ ಉಳಿದಿರುವುದು. ಇವೆರಡೂ ಇಂಧನ ಸಂಬಂಧಿತ ಸಂಸ್ಥೆಗಳಾಗಿದ್ದು, ಇಂಧನ ಪ್ರವೇಶ, ಲಭ್ಯತೆ ಮತ್ತು ನ್ಯಾಯಯುತ ಹಾಗೂ ಸಮಾನ ಇಂಧನ ನೀತಿಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತವೆ. ಆದರೆ ನವೀಕರಿಸಬಹುದಾದ ಶಕ್ತಿಯ ನಿಯೋಜನೆಯನ್ನು ಉತ್ತೇಜಿಸುವುದು IRENAಯ ಪ್ರಮುಖ ಉದ್ದೇಶವಾಗಿದೆ. ಇದು ಹೆಚ್ಚು ತೈಲ ಮತ್ತು ಅನಿಲ ಬಳಕೆಯನ್ನು ಬಯಸುವ ಟ್ರಂಪ್ ಆಡಳಿತದ ಆದ್ಯತೆಗಳಿಗೆ ಹೊಂದಿಕೆಯಾಗುವುದಿಲ್ಲ. ತೈಲ ಪೂರೈಕೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು 1974ರಲ್ಲಿ ಸ್ಥಾಪನೆಯಾದ ಸಂಸ್ಥೆಯೇ IEA. ಇತ್ತೀಚಿನ ವರ್ಷಗಳಲ್ಲಿ ಇದು ಸುಸ್ಥಿರ ಶಕ್ತಿಯನ್ನು ಉತ್ತೇಜಿಸುತ್ತಿದ್ದರೂ, ಸೈದ್ಧಾಂತಿಕವಾಗಿ ಇದು ನವೀಕರಿಸಬಹುದಾದ ಶಕ್ತಿಯತ್ತ ಒಲವು ತೋರುವ ಸಂಸ್ಥೆಯಲ್ಲ. ಅಲ್ಲದೆ, ಇದರ ನಿರ್ಧಾರ ಪ್ರಕ್ರಿಯೆಯನ್ನು 31 ದೇಶಗಳ ಗುಂಪು ನಿಯಂತ್ರಿಸುತ್ತದೆ, ಇದರಲ್ಲಿ ಅಮೆರಿಕವೂ ಸೇರಿದೆ. 2009ರಲ್ಲಿ ಅಸ್ತಿತ್ವಕ್ಕೆ ಬಂದ IRENAಗೆ 170ಕ್ಕೂ ಹೆಚ್ಚು ದೇಶಗಳು ಸದಸ್ಯರಾಗಿದ್ದು, ಅಲ್ಲಿ ಅಮೆರಿಕ ಯಾವುದೇ ರಚನಾತ್ಮಕ ಪ್ರಾಬಲ್ಯ ಹೊಂದಿಲ್ಲ. 21ನೇ ಶತಮಾನದ ನವೀಕರಿಸಬಹುದಾದ ಇಂಧನ ನೀತಿ ಜಾಲ, 24/7 ಕಾರ್ಬನ್-ಮುಕ್ತ ಇಂಧನ ಕಾಂಪ್ಯಾಕ್ಟ್ ಮತ್ತು ಅಂತರರಾಷ್ಟ್ರೀಯ ಇಂಧನ ವೇದಿಕೆಯಂತಹ ಕೆಲವು ಕಡಿಮೆ ಪರಿಚಿತ ನವೀಕರಿಸಬಹುದಾದ ಇಂಧನ ಕೇಂದ್ರೀಕೃತ ಸಂಸ್ಥೆಗಳಿಂದಲೂ ಅಮೆರಿಕ ಹಿಂದೆ ಸರಿದಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಹವಾಮಾನ ಸಂಸ್ಥೆಯಲ್ಲಿ ಅಮೆರಿಕ ಉಳಿದಿರುವುದಕ್ಕೆ ಕಾರಣ ಅಲ್ಲಿ ಅದರ ಪ್ರಭಾವ ಹೆಚ್ಚು ಇರುವುದೇ ಆಗಿದೆ. ವಿಶ್ವ ಹವಾಮಾನ ಸಂಸ್ಥೆಯ ಪ್ರಮುಖ ಕೆಲಸಗಳು ಜಾಗತಿಕ ಹವಾಮಾನ ಮುನ್ಸೂಚನೆ, ಸಾಗರ ಮತ್ತು ವಾತಾವರಣದ ಮೇಲ್ವಿಚಾರಣೆ, ವಿಪತ್ತುಗಳ ಮುಂಚಿತ ಎಚ್ಚರಿಕೆ ಮತ್ತು ಹವಾಮಾನ ದತ್ತಾಂಶ ಹಾಗೂ ವಿಶ್ಲೇಷಣೆಗಳಾಗಿವೆ. ಈ ಕಾರ್ಯಗಳಿಗಾಗಿ ವಿಶ್ವ ಹವಾಮಾನ ಸಂಸ್ಥೆ NOAA (National Oceanic and Atmospheric Administration), ನಾಸಾ ಮತ್ತು ಅವುಗಳ ವೀಕ್ಷಣಾ ಉಪಗ್ರಹ ವ್ಯವಸ್ಥೆಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. WMOಗೆ ಅಮೆರಿಕ ಆದ್ಯತೆ ನೀಡುವುದಕ್ಕೆ ಕಾರಣ, ಅಮೆರಿಕದ ದತ್ತಾಂಶ ಅವಶ್ಯಕವಾಗಿರುವುದು. ಇದರಿಂದ ಅಮೆರಿಕಕ್ಕೆ ಹೆಚ್ಚಿನ ನಿಯಂತ್ರಣ ಮತ್ತು ತಕ್ಷಣದ ಪ್ರಯೋಜನಗಳು ದೊರಕುತ್ತವೆ. ವ್ಯವಹಾರಗಳ ಮೇಲೆ ಪ್ರಭಾವ ಅಮೆರಿಕ ಕೆಲವು ಹವಾಮಾನ ವೇದಿಕೆಗಳಿಂದ ಹಿಂದೆ ಸರಿದಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಮೆರಿಕದ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು, ವ್ಯವಹಾರಗಳು ವಿದೇಶಿ ಸರ್ಕಾರಗಳು ಮತ್ತು ಕೈಗಾರಿಕಾ ಒಕ್ಕೂಟಗಳೊಂದಿಗೆ ನೇರ ಸಂಪರ್ಕವನ್ನು ಹೆಚ್ಚಿಸಬೇಕಾಗಬಹುದು. ಅಮೆರಿಕದ ಆದ್ಯತೆಗಳು ಪ್ರತಿನಿಧಿಸಲ್ಪಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ದೇಶ ಇನ್ನೂ ಸಕ್ರಿಯವಾಗಿರುವ ವೇದಿಕೆಗಳಲ್ಲಿ, ಅಮೆರಿಕ ಸರ್ಕಾರದೊಂದಿಗೆ ಆರಂಭಿಕ ಹಂತದಲ್ಲೇ ಸಮನ್ವಯ ಸಾಧಿಸುವುದೂ ಮುಖ್ಯವಾಗಿದೆ. ಒಟ್ಟಿನಲ್ಲಿ, ಅಮೆರಿಕ ಬಹುಪಕ್ಷೀಯತೆಯಿಂದ ಸಂಪೂರ್ಣವಾಗಿ ದೂರ ಸರಿಯುತ್ತಿರುವಂತೆ ಕಾಣುತ್ತಿಲ್ಲ. ಆದರೆ ನಿರ್ಧಾರ ತೆಗೆದುಕೊಳ್ಳುವ ಸ್ಥಾನಮಾನ ಇಲ್ಲದ ಬಹುಪಕ್ಷೀಯ ಸಂಸ್ಥೆಗಳ ಬಗ್ಗೆ ಅದು ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸ್ಪಷ್ಟ.
77ನೇ ಗಣರಾಜ್ಯೋತ್ಸವ | ಸಂವಿಧಾನವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಕರೆ
ಹೊಸದಿಲ್ಲಿ, ಜ.26: ಭಾರತದ 77ನೇ ಗಣರಾಜ್ಯೋತ್ಸವ ದಿನವಾದ ಸೋಮವಾರ ಕಾಂಗ್ರೆಸ್, ದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಶಿಲ್ಪಿಗಳಿಗೆ ಗೌರವ ಸಲ್ಲಿಸಿದೆ. ಅವರ ತ್ಯಾಗ ಮತ್ತು ದೂರದೃಷ್ಟಿಯು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ಬೇರೂರಿರುವ ಗಣರಾಜ್ಯದ ಅಡಿಪಾಯವನ್ನು ಹಾಕಿತು ಎಂದು ಪಕ್ಷವು ಸ್ಮರಿಸಿದೆ. ‘ನಮ್ಮ ಸ್ವಾತಂತ್ರ್ಯವೀರರ ಕೆಚ್ಚೆದೆಯ ಹೋರಾಟ ಮತ್ತು ಅಮರ ಪರಂಪರೆಯು ನಮ್ಮ ಗಣರಾಜ್ಯದ ಹಾದಿಯನ್ನು ಸದಾಕಾಲ ಬೆಳಗಿಸುತ್ತಿರಲಿ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಕಾಂಗ್ರೆಸ್, ಎಲ್ಲ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದೆ. ಎಕ್ಸ್ ಪೋಸ್ಟ್ನಲ್ಲಿ ಭಾರತೀಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಈ ವರ್ಷದ ಮಹತ್ವವನ್ನು ಪ್ರತಿಬಿಂಬಿಸುತ್ತ, ‘ಭಾರತೀಯ ಸಂವಿಧಾನವು ಅಂಗೀಕಾರಗೊಂಡು ಇಂದಿಗೆ 76 ವರ್ಷಗಳು ಪೂರೈಸಿವೆ. ಸಂವಿಧಾನವು ನಮ್ಮ ಆತ್ಮಸಾಕ್ಷಿಯ ಶಾಶ್ವತ ರಕ್ಷಕ ಮತ್ತು ಭಾರತೀಯ ಗಣರಾಜ್ಯದ ಆತ್ಮವಾಗಿದೆ’ ಎಂದು ಹೇಳಿದ್ದಾರೆ. ಸಂವಿಧಾನದ ರಕ್ಷಣೆಗಾಗಿ ಸದಾ ದೃಢವಾಗಿ ನಿಲ್ಲುವಂತೆ ನಾಗರಿಕರನ್ನು ಆಗ್ರಹಿಸಿರುವ ಅವರು, ‘ನಮ್ಮ ಸಂವಿಧಾನವನ್ನು ರಕ್ಷಿಸಲು ಪ್ರತಿಯೊಂದು ತ್ಯಾಗಕ್ಕೂ ನಾವು ಸಿದ್ಧರಾಗಿರೋಣ. ಇದು ನಮ್ಮ ಪೂರ್ವಜರ ಧೀರೋದಾತ್ತ ತ್ಯಾಗಗಳಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ದೇಶದ ಜನರಿಗೆ ತನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದು, ಸಂವಿಧಾನವು ಭಾರತೀಯ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ ಎಂದು ಒತ್ತಿ ಹೇಳಿದ್ದಾರೆ. ‘ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಶ್ರೇಷ್ಠವಾದ ಆಯುಧವಾಗಿದೆ. ಅದು ನಮ್ಮ ಧ್ವನಿ, ನಮ್ಮ ರಕ್ಷಣಾ ಕವಚ ಮತ್ತು ನಮ್ಮ ಹಕ್ಕುಗಳ ರಕ್ಷಕನಾಗಿದೆ’ ಎಂದು ಎಕ್ಸ್ನಲ್ಲಿ ಅವರು ಬರೆದಿದ್ದಾರೆ. ಭಾರತೀಯ ಗಣರಾಜ್ಯದ ಶಕ್ತಿಯು ಸಮಾನತೆ, ಸಾಮರಸ್ಯ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ತತ್ವಗಳಲ್ಲಿದೆ ಎಂದು ಒತ್ತಿ ಹೇಳಿರುವ ರಾಹುಲ್, ‘ಸಂವಿಧಾನದ ರಕ್ಷಣೆ ಎಂದರೆ ಭಾರತೀಯ ಗಣರಾಜ್ಯದ ರಕ್ಷಣೆ. ಅದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ನಾವು ಸಲ್ಲಿಸಬಹುದಾದ ಅತ್ಯುನ್ನತ ಗೌರವವಾಗಿದೆ’ ಎಂದು ಹೇಳಿದ್ದಾರೆ. ಎಲ್ಲ ಭಾರತೀಯರಿಗೆ ತನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ‘ಈ ದಿನ ನಮ್ಮ ಸಂವಿಧಾನವು ಜಾರಿಗೆ ಬಂದಿತ್ತು ಮತ್ತು ಪ್ರತಿ ಭಾರತೀಯನಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವವನ್ನು ಖಚಿತಪಡಿಸಿತ್ತು’ ಎಂದಿದ್ದಾರೆ. ಸಂವಿಧಾನವನ್ನು ಭಾರತದ 140 ಕೋಟಿ ಪ್ರಜೆಗಳನ್ನು ರಕ್ಷಿಸುವ ದೃಢವಾದ ಗುರಾಣಿ ಎಂದು ಬಣ್ಣಿಸಿರುವ ಅವರು, ‘ಅದನ್ನು ರಕ್ಷಿಸುವ ನಮ್ಮ ಸಂಕಲ್ಪವು ಬಂಡೆಯಂತೆ ಬಲವಾಗಿದೆ’ ಎಂದಿದ್ದಾರೆ. ಈ ಪರಂಪರೆಯನ್ನು ರಕ್ಷಿಸುವುದು ದೇಶದ ಪವಿತ್ರ ಕರ್ತವ್ಯವಾಗಿದೆ ಎಂದು ಅವರು ನೆನಪಿಸಿದ್ದಾರೆ. ಈ ಭಾವನೆಗಳನ್ನು ಪ್ರತಿಧ್ವನಿಸಿರುವ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ ಅವರು, ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತ, ಅಚಲ ಸಂಕಲ್ಪದೊಂದಿಗೆ ಸಂವಿಧಾನವನ್ನು ರಕ್ಷಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ, ಸಮಾನತೆ, ಸೋದರತ್ವ, ಜಾಸತ್ತಾತ್ಮಕ ಗಣರಾಜ್ಯ ನೀಡಿರುವುದು ಕಾಂಗ್ರೆಸ್: ಡಿ.ಕೆ. ಶಿವಕುಮಾರ್
ಬೆಂಗಳೂರು: ದೇಶಕ್ಕೆ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯನ್ನು ನೀಡಿರುವುದು ಕಾಂಗ್ರೆಸ್ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸೋಮವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾನೊಬ್ಬ ಕಾಂಗ್ರೆಸಿಗ, ಭಾರತೀಯ, ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಭವ್ಯ ಮತ್ತು ಸಾಮರಸ್ಯದ ಭಾರತವನ್ನು ಕಟ್ಟೋಣ. ಸಂವಿಧಾನದ ತತ್ವಗಳನ್ನು ಜಾರಿಗೆ ತರುವುದೇ ನಮ್ಮೆಲ್ಲರ ಧರ್ಮ. ಇದನ್ನು ಕಾಂಗ್ರೆಸ್ಸಿಗರು ಎಂದಿಗೂ ಮರೆಯಬಾರದು ಎಂದು ಕರೆ ನೀಡಿದರು. ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನ ಹಾಗೂ ಸರಕಾರದ ಆಶಯವಾಗಿದೆ. ಸಂವಿಧಾನವೇ ನಮ್ಮ ಧರ್ಮ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ. ಎಲ್ಲಾ ಗಣಗಳಿಗೆ ಆ ಕೈಲಾಸದ ಶಿವ ಅಧಿಪತಿಯಾದರೆ, ನಮ್ಮ ದೇಶದ ಗಣತಂತ್ರ ವ್ಯವಸ್ಥೆಗೆ ಪವಿತ್ರ ಸಂವಿಧಾನವೇ ಅಧಿಪತಿ. ಉಸಿರಾಡಲು ಗಾಳಿ ಬೇಕು, ನಮ್ಮ ದೇಶ ನಡೆಸಲು ಸಂವಿಧಾನ ಬೇಕು. ನಾವು ಸಂವಿಧಾನವನ್ನು ಉಳಿಸಿದರೆ ಭಾರತವನ್ನು ಉಳಿಸಿದಂತಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇವನಾರವ, ಇವನಾರವ ಎನ್ನುವ ಭೇದ-ಭಾವ ಅಳಿಸಿ, ಇವ ನಮ್ಮವ, ಇವ ನಮ್ಮವ ಎನ್ನುವ ಭಾವನೆ ಮೂಡಿಸಿದ್ದೇ ಸಂವಿಧಾನ. ಗಣರಾಜ್ಯೋತ್ಸವ ಎಂದರೆ ಭಾರತದ ಸ್ವಾಭಿಮಾನದ ದಿನ. ಜನವರಿ 26ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನ. ಭಾರತದ ಒಕ್ಕೂಟ ವ್ಯವಸ್ಥೆಯು ಜಾರಿಯಾದ ದಿನವಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಸ್ವಾತಂತ್ರ್ಯ ನಂತರ ಈ ದೇಶದ 570ಕ್ಕೂ ಹೆಚ್ಚು ಪ್ರದೇಶಗಳು ರಾಜರ ಆಡಳಿತಕ್ಕೆ ಒಳಪಟ್ಟಿದ್ದವು. ಇದೆಲ್ಲವನ್ನು ಒಗ್ಗೂಡಿಸಿ ಈ ದೇಶವನ್ನು ಒಂದು ಮಾಡಲಾಯಿತು. ಭಾರತವು ರಾಜ್ಯಗಳ ಒಕ್ಕೂಟ ಎಂಬುದನ್ನು ಸಂವಿಧಾನದ 1ನೇ ವಿಧಿಯು ಹೇಳುತ್ತದೆ. ಸಂವಿಧಾನದ ಪ್ರತಿ ಪುಟದಲ್ಲೂ ಜನಪರ ವಿಚಾರಗಳು ಇವೆ. ಜಾತಿ, ಧರ್ಮ, ಸಂಪತ್ತು, ಅಧಿಕಾರ ಯಾವುದೂ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಸಂವಿಧಾನ ಹೇಳುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. 75 ವರ್ಷಗಳ ಹಿಂದೆ ಬಡತನ, ಅನಕ್ಷರತೆ, ಹಸಿವು, ಅಪೌಷ್ಟಿಕತೆ ಸಮಸ್ಯೆಗಳು ದೇಶವನ್ನು ಬಹಳವಾಗಿ ಕಾಡಿತ್ತು. ಆದರೆ, ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ನಮ್ಮ ಪಕ್ಷ ಹಾಗೂ ಸರಕಾರ ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಕಲ್ಪಿಸಿದೆ. ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಸಂವಿಧಾನದ ಅಂಶಗಳ ಸಮರ್ಪಕ ಜಾರಿಯಿಂದ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು. ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಸಲು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಚಯಿಸುವ ಗುರಿ ನಮ್ಮದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನಮ್ಮ ಆಡಳಿತದ ‘ಕರ್ನಾಟಕ ಮಾದರಿ’ ಬಗ್ಗೆ ಇಡೀ ದೇಶ ಮಾತ್ರವಲ್ಲ ಜಗತ್ತಿನ ಅನೇಕ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳು ಬದುಕಿನ ಗ್ಯಾರಂಟಿ ಹೆಚ್ಚಿಸಿವೆ. ಗ್ಯಾರಂಟಿ ಯೋಜನೆಗಳ ಮೂಲಕ ಪಡೆಯುವ ಹಣವನ್ನು ಪೌಷ್ಠಿಕ ಆಹಾರ, ಔಷಧಗಳು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಶೇ.89ರಷ್ಟು ಫಲಾನುಭವಿಗಳ ಕುಟುಂಬ ಸುಧಾರಣೆಯಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು. ಇದೇ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು. ‘ಇತ್ತೀಚೆಗೆ ಕೆಲವು ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತಿದ್ದಾರೆ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಇದಕ್ಕೆ ನಾನೂ ದನಿಗೂಡಿಸುತ್ತೇನೆ. ಸಂವಿಧಾನಕ್ಕೆ ಗೌರವ ಕೊಟ್ಟವನು ನಿಜವಾದ ದೇಶಭಕ್ತ. ಸಂವಿಧಾನಕ್ಕೆ ಅಗೌರವ ತೋರಿಸುವವರು ದೇಶದ್ರೋಹಿಗಳು’ -ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಏಷ್ಯಾದ ಮೊದಲ ‘ಎದೆ ಹಾಲಿನ ಬ್ಯಾಂಕ್’ ಸ್ಥಾಪಿಸಿದ ಡಾ. ಅರ್ಮಿಡಾ ಫೆರ್ನಾಂಡಿಸ್ಗೆ ಪದ್ಮಶ್ರೀ
ನವಜಾತ ಶಿಶು ತಜ್ಞೆಯ ಸಾಧನೆಯ ಹಾದಿ
ಬಿಜೆಪಿ ಸರಕಾರ ದೇಶದ ಅಭಿವೃದ್ದಿಗೆ ರಿವರ್ಸ್ ಗೇರ್ ಹಾಕಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ
ಉಡುಪಿ : ಬಿಜೆಪಿಯವರಿಗೆ ಈ ದೇಶವನ್ನು ಮುನ್ನಡೆಸುವ ಶಕ್ತಿಯೂ ಇಲ್ಲ, ಆಸಕ್ತಿಯೂ ಇಲ್ಲ. ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್ ಮಾಡಿರುವ ಅಭಿವೃದ್ಧಿಗಳನ್ನೆಲ್ಲ ಸಾಯಿಸುವ ಮೂಲಕ ಮತ್ತೆ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಈ ಆರೋಪ ಮಾಡಿರುವ ಸಚಿವರು, ಗ್ರಾಮಪಂಚಾಯತ್ ವ್ಯವಸ್ಥೆ ಬಲ ಪಡಿಸುವ ಉದ್ದೇಶದಿಂದ ನಾವು ಮಾಡಿದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಅವರು ಕೇಂದ್ರೀಕರಣದತ್ತ ತಿರುಗಿಸುತ್ತಿದ್ದಾರೆ. ನರೇಗಾ ಯೋಜನೆಯನ್ನು ಕುಲಗೆಡಿಸಿ, ಕೇವಲ ಯೋಜನೆಯ ಹೆಸರಿನಲ್ಲಿ ರಾಮನ ಹೆಸರು ಸೇರಿಸಿ ಜನರನ್ನು ಭಾವನಾತ್ಮಕವಾಗಿ ಆಟವಾಡಿಸಬಹುದು ಎಂದುಕೊಂಡಿದ್ದಾರೆ. ತನ್ಮೂಲಕ ಮೌಢ್ಯವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ನಾವು ಜನರನ್ನು ಮೌಢ್ಯದಿಂದ ಹೊರತಂದು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದರೆ, ಅವರು ಕೇವಲ ಓಟಿಗೋಸ್ಕರ ರಾಷ್ಟ್ರವನ್ನು ಹಿಂದಕ್ಕೆ ಒಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ. ನರೇಗಾ ಯೋಜನೆಯಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಿ, ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಬಹುದಿತ್ತು. ಅದರ ಬದಲು ಇಂತಹ ಜನಪರ, ಜನಪ್ರಿಯ ಯೋಜನೆಯನ್ನೆ ಮುಗಿಸಲು ಹೊರಟಿದ್ದಾರೆ. ಅಂದರೆ, ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಬದಲು ರೋಗಿಯನ್ನೇ ಸಾಯಿಸಲು ಹೊರಟಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಯೋಜನೆಯಲ್ಲಿ ಭ್ರಷ್ಟಾಚಾರ ಇದ್ದಿದ್ದರೆ ಸರಿಪಡಿಸಲು ಕೇಂದ್ರ ಸರಕಾರಕ್ಕೆ 12 ವರ್ಷ ಅವಕಾಶವಿತ್ತಲ್ಲವೇ? ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದರೂ ಯೋಜನೆಯಲ್ಲಿ ಯಾವೊಂದು ಬದಲಾವಣೆ, ಸುಧಾರಣೆ ಮಾಡದೆ, ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಒಂದು ವ್ಯವಸ್ಥೆಯನ್ನೇ ನೇಣಿಗೆ ಹಾಕಲು ಹೊರಟಿದ್ದಾರೆ. ಅಂದರೆ ಇಷ್ಟು ವರ್ಷ ಅವರು ಭ್ರಷ್ಟಾಚಾರದ ಭಾಗವಾಗಿದ್ದರೆ? ಎಂದು ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ. ದೇಶದ ಸುಮಾರು 12 ಕೋಟಿಗೂ ಅಧಿಕ ಬಡಜನರು, ಕಾರ್ಮಿಕರು, 6 ಕೋಟಿಗೂ ಅಧಿಕ ಮಹಿಳಾ ಕಾರ್ಮಿಕರು, 3 ಕೋಟಿಗೂ ಅಧಿಕ ಪರಿಶಿಷ್ಟ ಜಾತಿ, ವರ್ಗದ ಜನರು ತಮ್ಮ ಜೀವನೋಪಾಯಕ್ಕಾಗಿ ಕಳೆದ 20 ವರ್ಷಗಳಿಂದ ಯಾವ ಯೋಜನೆಯ ಮೇಲೆ ಅವಲಂಬಿತರಾಗಿದ್ದಾರೋ ಆ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಬಡವರು ಬಡವರಾಗಿಯೇ ಇರಬೇಕು, ಅವರು ಜೀತದ ಆಳಾಗಿಯೇ ಇರಬೇಕು, ಮಹಿಳೆಯರು ಸಬಲೀಕರಣಗೊಳ್ಳಬಾರದು, ಅವರು ಸಮಾಜದ ಮುಖ್ಯ ವಾಹಿನಿಗೆ ಬರಬಾರದು ಎನ್ನುವ ಮನೋಸ್ಥಿತಿ ಬಿಜೆಪಿಯವರದ್ದು ಎಂದು ಅವರು ತಿಳಿಸಿದ್ದಾರೆ. ಸೋನಿಯಾಗಾಂಧಿ ಅವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಸರಕಾರ 20 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಸಾಂವಿಧಾನಿಕ ಹಕ್ಕಾಗಿ ಬಂದಿರುವ ಮನರೇಗಾವನ್ನು ನಾಶ ಮಾಡಲು ಹೊರಟಿರುವುದು ದೊಡ್ಡ ಆಘಾತವಾಗಿದೆ. ಮನರೇಗಾ ಉಳಿಸಬೇಕೆಂದು ಮಂಗಳವಾರ ಕಾಂಗ್ರೆಸ್ ಪಕ್ಷ ರಾಜಭವನ ಚಲೋ ನಡೆಸಲಿದೆ. ಪ್ರತಿ ತಾಲೂಕಿನಲ್ಲೂ ಪಾದಯಾತ್ರೆ ನಡೆಸಲಾಗುವುದು. ಪ್ರತಿ ಪಂಚಾಯತ್ ಮಟ್ಟದಲ್ಲೂ ಹೋರಾಟ ಹಮ್ಮಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಮನರೇಗಾ ಮರು ಸ್ಥಾಪಿಸುವವರೆಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೆಬ್ಬಾಳ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಅನುಮತಿ ಇಲ್ಲದೆ ಪೊಲೀಸರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ: Delhi ಹೈಕೋರ್ಟ್
ಮಲಬಾರ್ ಬ್ಯಾಂಕ್ ಖಾತೆಗಳ ಮುಟ್ಟುಗೋಲು ಕ್ರಮವನ್ನು ರದ್ದುಗೊಳಿಸಿದ ನ್ಯಾಯಾಲಯ
ಬೇಡ್ತಿ-ವರದಾ ನದಿ ಜೋಡಣೆ: ಸಮಾವೇಶ, ಹೋರಾಟ ಬಗ್ಗೆ ವಿವರಿಸಿದ ಬಸವರಾಜ ಬೊಮ್ಮಾಯಿ
ಹಾವೇರಿ: ಬೇಡ್ತಿ ವರದಾ ನದಿ ಜೋಡಣೆ ಯೋಜನೆ ನಮ್ಮ ಬದುಕಿನ ಪ್ರಶ್ನೆ, ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ ನಮ್ಮ ಬದುಕಿಗಾಗಿ ಹೊರತು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದ ನಿಯೋಗವನ್ನು ಸಿಎಂ,

20 C