SENSEX
NIFTY
GOLD
USD/INR

Weather

19    C

ಡಿಜಿಟಲ್ ಸುದ್ದಿ ಮೂಲಗಳು

... ...View News by News Source

ಮಧ್ಯ ಬೆರಳು ತೋರಿಸಿದ ಆರ್ಯನ್ ಖಾನ್ ಮೇಲೆ ದೂರು; ಅಲ್ಲೇನಾಯಿತು ವಿವರಿಸಿದ ಝೈದ್ ಖಾನ್

ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿವಾದಗಳ ಮೂಲಕವೇ ಹೆಚ್ಚು ಚರ್ಚೆ ಆಗಿದ್ದಾರೆ. ಬೆಂಗಳೂರಿಗೆ ಬಂದಾಗ ಅವರು ಎಡವಟ್ಟು ಮಾಡಿಕೊಂಡರು. ಜನರಿಗೆ ಮಧ್ಯ ಬೆರಳು ತೋರಿಸಿದ್ದರ ವಿಡಿಯೋ ವೈರಲ್ ಆಗಿತ್ತು. ಆರ್ಯನ್ ಖಾನ್ ವಿರುದ್ಧ ಎಲ್ಲರೂ ಕೋಪ ಹೊರಹಾಕಿದ್ದರು. ಈಗ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಟಿವಿ 9 ಕನ್ನಡ 6 Dec 2025 9:56 am

Daily Devotional: ಜನ್ಮ ದಿನಾಂಕ ಗೊತ್ತಿಲ್ಲ ಅಥವಾ ಜಾತಕ ಇಲ್ಲದಿದ್ದರೆ ಚಿಂತಿಸಬೇಡಿ; ನಿಮಗಾಗಿ ಜ್ಯೋತಿಷ್ಯ ಸಲಹೆ ಇಲ್ಲಿದೆ

ಜನ್ಮ ದಿನಾಂಕ ಅಥವಾ ಜಾತಕ ಇಲ್ಲದವರು ತಮ್ಮ ಭವಿಷ್ಯದ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಂತಹವರಿಗೆ ಧರ್ಮಶಾಸ್ತ್ರಗಳಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಸೂರ್ಯ ನಮಸ್ಕಾರ, ಆದಿತ್ಯ ಹೃದಯಂ, ಋಣ ವಿಮೋಚಕ ಅಂಗಾರಕ ಸ್ತೋತ್ರ, ವಿಷ್ಣು ಸಹಸ್ರನಾಮ ಮತ್ತು ಹನುಮಾನ್ ಚಾಲೀಸಾದಂತಹ ಆಚರಣೆಗಳು ಶುಭ ಫಲಗಳನ್ನು ತರಬಲ್ಲವು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಟಿವಿ 9 ಕನ್ನಡ 6 Dec 2025 9:54 am

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಸೇವಿಸಿ ಈ ಪಾನೀಯ

ಚಳಿಗಾಲದಲ್ಲಿ ವಾತಾವರಣವು ತುಂಬಾನೇ ತಂಪಾಗಿರುತ್ತದೆ. ಇಂತಹ ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಶೀತ, ನೆಗಡಿ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಈ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವ ಮೂಲಕ ದೇಹವನ್ನು ಬೆಚ್ಚಗಿರಿಸುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಟಿವಿ 9 ಕನ್ನಡ 6 Dec 2025 9:54 am

ಯಶವಂತಪುರ – ಕಾರವಾರ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ವಿವರ

Yeshwantpur Karwar Special Express train: ನೈಋತ್ಯ ರೈಲ್ವೇಯು ಕ್ರಿಸ್ಮಸ್ ಮತ್ತು ಹೊಸ ವರ್ಷ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಮತ್ತು ಕಾರವಾರ ಮಧ್ಯೆ ವಿಶೇಷ ಎಕ್ಸ್​ಪ್ರೆಸ್ ರೈಲು ಘೋಷಣೆ ಮಾಡಿದೆ. ಇದರಿಂದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ನಡುವಣ ಸಂಚಾರ ಸುಗಮವಾಗಲಿದೆ. ರೈಲು ವೇಳಾಪಟ್ಟಿ, ನಿಲುಗಡೆ ವಿವರ ಇಲ್ಲಿದೆ.

ಟಿವಿ 9 ಕನ್ನಡ 6 Dec 2025 9:48 am

ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್​ಗೆ ಹೈಕೋರ್ಟ್ ರಿಲೀಫ್​

ನಟ ಯಶ್‌ಗೆ ಐಟಿ ಇಲಾಖೆ 2013-19ರ ಅವಧಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ನೀಡಿದ್ದ ನೋಟಿಸ್‌ನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೊಂಬಾಳೆ ಕನ್ಸ್​​​ಟ್ರಕ್ಷನ್ಸ್ ಸಂಬಂಧಿಸಿದ ಪ್ರಕರಣದಲ್ಲಿ ಯಶ್ ನಿವಾಸ ಶೋಧಿಸಲಾಗಿತ್ತು. ಶೋಧನೆಗೊಳಗಾಗದ ವ್ಯಕ್ತಿಗಳಿಗೆ ನೀಡುವ ನೋಟಿಸ್ ನೀಡಿದ್ದನ್ನು ಯಶ್ ಪ್ರಶ್ನಿಸಿದ್ದರು. ಹೈಕೋರ್ಟ್ ಅವರ ವಾದ ಪುರಸ್ಕರಿಸಿ ನೋಟಿಸ್ ರದ್ದು ಮಾಡಿರುವುದು ಯಶ್‌ಗೆ ದೊಡ್ಡ ರಿಲೀಫ್ ನೀಡಿದೆ.

ಟಿವಿ 9 ಕನ್ನಡ 6 Dec 2025 9:05 am

Fifa World Cup 2026: ಫಿಫಾ ವಿಶ್ವಕಪ್ ಗ್ರೂಪ್ ಪ್ರಕಟ

fifa world cup 2026 groups: ಬಹುನಿರೀಕ್ಷಿತ ಫಿಫಾ ಫುಟ್​ಬಾಲ್ ವಿಶ್ವಕಪ್ ಟೂರ್ನಿಯ ಗ್ರೂಪ್​ಗಳನ್ನು ಪ್ರಕಟಿಸಲಾಗಿದೆ. 48 ತಂಡಗಳನ್ನು ಈ ಬಾರಿ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಒಂದು ಗ್ರೂಪ್​ನಲ್ಲಿ 4 ತಂಡಗಳು ಕಾಣಿಸಿಕೊಳ್ಳಲಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​​ನ ಗ್ರೂಪ್​ ಪಟ್ಟಿಗಳನ್ನು ಡ್ರಾ ಮಾಡಿದ್ದು ಯುಎಸ್​ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬುದು ವಿಶೇಷ.

ಟಿವಿ 9 ಕನ್ನಡ 6 Dec 2025 8:59 am

ಬೆಂಗಳೂರು ವಿಮಾನ ನಿಲ್ದಾಣದಿಂದ ಇಂದೂ ಇಲ್ಲ ಇಂಡಿಗೋ ಫ್ಲೈಟ್: 5ನೇ ದಿನವೂ ಮುಂದುವರಿದ ಪ್ರಯಾಣಿಕರ ಪರದಾಟ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟ ಸತತ ಐದನೇ ದಿನವೂ ರದ್ದಾಗಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರೀಫಂಡ್ ಮತ್ತು ಮರು ವೇಳಾಪಟ್ಟಿಗಾಗಿ ಇಂಡಿಗೋ ಕೌಂಟರ್‌ಗಳ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಪರದಾಟ ಮುಂದುವರಿಸಿದ್ದಾರೆ. ಡಿಜಿಸಿಎ ಸಭೆಯ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ.

ಟಿವಿ 9 ಕನ್ನಡ 6 Dec 2025 8:44 am

ಟೀಮ್ ಇಂಡಿಯಾದ ಹೀನಾಯ ದಾಖಲೆ…ಒಂದೇ ದಿನ 5 ಕ್ಯಾಚ್ ಕೈಚೆಲ್ಲಿದ ಇಂಗ್ಲೆಂಡ್

Australia vs England, 2nd Test: ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 334 ರನ್ ಪೇರಿಸಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 378 ರನ್​ ಕಲೆಹಾಕಿದೆ.

ಟಿವಿ 9 ಕನ್ನಡ 6 Dec 2025 8:30 am

ಗಿಲ್ಲಿ ಮೇಲಿನ ಅಭಿಪ್ರಾಯ ಕಾವ್ಯಾಗೆ ಸಂಪೂರ್ಣವಾಗಿ ಬದಲಾಯ್ತು

ಗಿಲ್ಲಿ ಹಾಗೂ ಕಾವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಗೆಳೆತನ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಏನೇ ಆದರೂ ಇವರ ಬಾಂಡಿಂಗ್ ಹಾಳಾಗಿಲ್ಲ ಎನ್ನಬಹುದು. ಈಗ ಅವರು ಆಡಿದ ಒಂದು ಮಾತು ಸಾಕಷ್ಟು ಗಮನ ಸೆಳೆದಿದೆ. ಅಷ್ಟಕ್ಕೂ ಏನು ಅದು ಎಂಬುದನ್ನು ಇಲ್ಲಿ ನೋಡೋನ.

ಟಿವಿ 9 ಕನ್ನಡ 6 Dec 2025 8:14 am

IND vs SA 3rd ODI: ಇಂದು ಭಾರತ-ಆಫ್ರಿಕಾ ನಿರ್ಣಾಯಕ ಏಕದಿನ: ಕೊಹ್ಲಿ ಮೇಲೆ ಎಲ್ಲರ ಕಣ್ಣು

India vs South Africa 3rd ODI Preview: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ 1-1 ರಲ್ಲಿ ಸಮಬಲ ಸಾಧಿಸಿದೆ. ಸರಣಿಯ ನಿರ್ಣಾಯಕ ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್ ಮತ್ತು ಕೆಎಲ್ ರಾಹುಲ್ ನಾಯಕತ್ವದ ಹೊರತಾಗಿಯೂ, ಟೀಮ್ ಇಂಡಿಯಾಕ್ಕೆ ಇದು ಮಾಡು-ಇಲ್ಲ-ಮಡಿ ಪಂದ್ಯವಾಗಿದೆ.

ಟಿವಿ 9 ಕನ್ನಡ 6 Dec 2025 8:02 am

ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರ ಕಾಂಗ್ರೆಸ್ ಕಾರ್ಯಕರ್ತನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಬ್ಯಾನರ್ ತೆರವು ವಿಚಾರದಲ್ಲಿ ಗಲಾಟೆಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಗಣೇಶ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಗಳು ಬಜರಂಗದಳ ಕಾರ್ಯಕರ್ತರು ಎನ್ನಲಾಗಿದ್ದು, ಇಬ್ಬರ ಬಂಧನವಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಟಿವಿ 9 ಕನ್ನಡ 6 Dec 2025 7:57 am

ಒಂದೇ ಒಂದು ಅರ್ಧಶತಕ ಬಾರಿಸದೇ ನೈಟ್ ರೈಡರ್ಸ್​ಗೆ ಸೋಲುಣಿಸಿದ ವೈಪರ್ಸ್

Desert Vipers vs Abu Dhabi Knight Riders: 172 ರನ್​ಗಳನ್ನು ಚೇಸ್ ಮಾಡಿದ ಡೆಸರ್ಟ್ ವೈಪರ್ಸ್ ಪರ ಶಿಮ್ರಾನ್ ಹೆಟ್ಮೆಯರ್ 25 ಎಸೆತಗಳಲ್ಲಿ 48 ರನ್ ಬಾರಿಸಿದ್ದೇ ಗರಿಷ್ಠ ಸ್ಕೋರ್. ಮತ್ತೊಂದೆಡೆ ಡಾನ್ ಲಾರೆನ್ಸ್ 35 ರನ್​ಗಳ ಕೊಡುಗೆ ನೀಡಿದರೆ, ಖುಝೈಮ ತನ್ವೀರ್ ಅಜೇಯ 31 ರನ್ ಬಾರಿಸಿದರು. ಈ ಮೂಲಕ ಡೆಸರ್ಟ್ ವೈಪರ್ಸ್ ತಂಡವು 19.3 ಓವರ್​ಗಳಲ್ಲಿ 175 ರನ್​ ಬಾರಿಸಿ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ.

ಟಿವಿ 9 ಕನ್ನಡ 6 Dec 2025 7:55 am

ಅಂಬರೀಷ್ ಕಾರಣದಿಂದ ಕಾರು ಖರೀದಿಸಿದ ಚರಣ್ ರಾಜ್; 40 ವರ್ಷವಾದರೂ ಇನ್ನೂ ಇದೆ

ಚರಣ್ ರಾಜ್ ಅವರು ಅಂಬರೀಷ್ ಅವರೊಂದಿಗಿನ 1985ರ ಘಟನೆಯನ್ನು ಹಂಚಿಕೊಂಡಿದ್ದಾರೆ. ಹಳೆಯ ಕಾರು ಕೆಟ್ಟು ನಿಂತಾಗ, ಅಂಬರೀಷ್ ಅವರು ಚರಣ್ ರಾಜ್‌ಗೆ ಹೊಸ ಕಾರು ಖರೀದಿಸಲು ಸಹಾಯ ಮಾಡಿದರು. ಕಲಾವಿದನ ಘನತೆಯ ಬಗ್ಗೆ ಕಾಳಜಿ ವಹಿಸಿದ್ದ ಅಂಬರೀಷ್, ಹಣಕಾಸು ವ್ಯವಸ್ಥೆಗೊಳಿಸಿ ಹೊಸ ಕಾರು ಕೊಡಿಸಿದರು. ಈ ಘಟನೆಯ ನಂತರ ಚರಣ್ ರಾಜ್ ಅವರ ಅದೃಷ್ಟ ಬದಲಾಗಿದೆ.

ಟಿವಿ 9 ಕನ್ನಡ 6 Dec 2025 7:52 am

ಆಂಗ್ಲರ ಮುಂದೆ ಸೆಟೆದು ನಿಂತ ಆಸ್ಟ್ರೇಲಿಯನ್ನರು

ಮೊದಲ ಇನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ಪರ ಜಾಕ್ ವೆದರಾಲ್ಡ್ 72 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ 65 ರನ್ ಬಾರಿಸಿದರೆ, ಆ ಬಳಿಕ ಬಂದ ಸ್ಟೀವ್ ಸ್ಮಿತ್ 61 ರನ್ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 378 ರನ್ ಕಲೆಹಾಕಿ ಮೊದಲ ಇನಿಂಗ್ಸ್ ನಲ್ಲಿ 44 ರನ್ ಗಳ ಮುನ್ನಡೆಯೊಂದಿಗೆ ಮೂರನೇ ದಿನದಾಟಕ್ಕೆ ಕಾಲಿಟ್ಟಿದೆ.

ಟಿವಿ 9 ಕನ್ನಡ 6 Dec 2025 7:32 am

ಗಿಲ್ಲಿ ಕಂಡರೆ ರಘುಗೆ ಏಕೆ ಅಷ್ಟು ದ್ವೇಷ? ಅವರಿಂದಲೇ ಸಿಕ್ಕಿತು ವಿವರಣೆ

ಬಿಗ್ ಬಾಸ್ ಮನೆಯಲ್ಲಿ ರಘು ಹಾಗೂ ಗಿಲ್ಲಿ ನಡುವಿನ ಗೆಳೆತನ ದ್ವೇಷವಾಗಿ ಮಾರ್ಪಟ್ಟಿದೆ. ಗಿಲ್ಲಿಯ ವೈಯಕ್ತಿಕ ಟೀಕೆಗಳು, ಮಾಡಿದ ಹಾಸ್ಯ ರಘುವಿಗೆ ಕೋಟಿ ಜನರ ಮುಂದೆ ತಮ್ಮ ವರ್ಚಸ್ಸು ಹಾಳು ಮಾಡುತ್ತಿದೆ ಎಂದನಿಸಿದೆ. ಈ ಭಿನ್ನಾಭಿಪ್ರಾಯ ಈಗ ಇವರ ಬಾಂಧವ್ಯವನ್ನು ಹಾಳು ಮಾಡಿದೆ. ವಾರಾಂತ್ಯದ ಎಪಿಸೋಡ್‌ನಲ್ಲಿ ಇವರ ಸಮಸ್ಯೆ ಬಗೆಹರಿಯುವುದೇ ಕಾದುನೋಡಬೇಕು.

ಟಿವಿ 9 ಕನ್ನಡ 6 Dec 2025 7:27 am

ಕ್ಷಣಕ್ಷಣಕ್ಕೂ ಬದಲಾಗ್ತಿದೆ ಬೆಂಗಳೂರು ವಾತಾವರಣ: ಇನ್ನೆರಡು ದಿನ ಇರಲಿದೆ ಭಾರಿ ಚಳಿ!

Bengaluru Weather: ಬೆಂಗಳೂರು ಕಳೆದ ಎರಡು ವಾರದಿಂದ ಕೂಲ್ ಸಿಟಿಯಾಗಿ ಮಾರ್ಪಟ್ಟಿದೆ. ನಗರದಲ್ಲಿ ಸತತ ಹಲವು ದಿನಗಳಿಂದ ಜಿಟಿ ಮಳೆ ಚಳಿ, ಸದಾ ಮೋಡಕವಿದ ವಾತವರಣದಿಂದ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ರಾಜಧಾನಿಯ ವಾತಾವರಣ ಮಕ್ಕಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಆತಂಕ ಸೃಷ್ಟಿಸಿದೆ.

ಟಿವಿ 9 ಕನ್ನಡ 6 Dec 2025 7:19 am

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

Karnataka Weather: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಮಳೆ ನಿಂತಿದ್ದು, ಒಣ ಹವೆಯ ವಾತಾವರಣ ಇರಲಿದೆ. ಕರಾವಳಿ ಜೊತೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಒಣ ಹವೆ ವಾತಾವರಣವಿರಲಿದ್ದು, ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣದ ಜೊತೆಗೆ ವಿಪರೀತ ಚಳಿಯ ಮುನ್ಸೂಚನೆ ಇದೆ.

ಟಿವಿ 9 ಕನ್ನಡ 6 Dec 2025 7:15 am

Daily Devotional: ವಿದೇಶದಲ್ಲಿರುವ ಬಂಧುಗಳಿಗೆ ತೊಂದರೆ ಆದ್ರೆ ಏನು ಮಾಡಬೇಕು?

ವಿದೇಶದಲ್ಲಿ ಉದ್ಯೋಗ, ಆರೋಗ್ಯ ಅಥವಾ ಸ್ಥಿರತೆ ಸಮಸ್ಯೆಗಳನ್ನು ಎದುರಿಸುತ್ತಿರುವ ನಿಮ್ಮ ಬಂಧುಗಳಿಗಾಗಿ ಚಿಂತಿಸುತ್ತಿದ್ದೀರಾ? ಈ ಸಮಸ್ಯೆಗಳಿಗೆ ಪರಿಹಾರವಾಗಿ ಧರ್ಮಶಾಸ್ತ್ರಗಳಲ್ಲಿ ತಿಳಿಸಿರುವ ದಕ್ಷಿಣಾಮೂರ್ತಿ ಪೂಜೆಯನ್ನು ಆಚರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಶನಿ, ರಾಹು, ಬುಧ ಗ್ರಹಗಳ ದೋಷ ನಿವಾರಣೆಗೂ ಈ ಪೂಜೆ ಸಹಕಾರಿ.

ಟಿವಿ 9 ಕನ್ನಡ 6 Dec 2025 6:55 am

ಪೊಲೀಸರೇ ಅಪರಾಧಗಳಲ್ಲಿ ಶಾಮೀಲು: ಡಿಜಿ, ಐಜಿಪಿ ಸಲೀಂರಿಂದ ಖಾಕಿ, ಹಿರಿಯ ಅಧಿಕಾರಿಗಳಿಗೆ ಬಂತು ಖಡಕ್ ಎಚ್ಚರಿಕೆ

ಬೆಂಗಳೂರಿನಲ್ಲಿ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗುವ ಪ್ರಕರಣಗಳು ಹೆಚ್ಚುತ್ತಿದ್ದು, ಡಿಜಿಪಿ ಸಲೀಂ ಇಲಾಖೆ ಘನತೆ ಕಾಪಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು ಸಿಬ್ಬಂದಿ ಮೇಲೆ ನಿಗಾ ವಹಿಸಿ, ಅಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ದುರ್ನಡತೆ ತೋರಿದರೆ ಕಠಿಣ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಟಿವಿ 9 ಕನ್ನಡ 6 Dec 2025 6:38 am

Horoscope Today 06 December: ಇಂದು ಈ ರಾಶಿಯವರು ಆರ್ಥಿಕ ವ್ಯವಹಾರಗಳಲ್ಲಿ ಅತ್ಯಂತ ಜಾಗ್ರತೆ ವಹಿಸಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಶನಿವಾರ ಹುಡುಕಾಟ, ನಿರಂತರತೆ, ಅರೋಗ್ಯ ಸ್ಥಿರ, ಪ್ರಯಾಣ, ನಿರ್ಮಾಣ, ಇಚ್ಛೆ ಪೂರ್ಣ, ಆದಾಯದಲ್ಲಿ ಗೊಂದಲ ಇವೆಲ್ಲ ಇಂದಿನ ವಿಶೇಷ. ಇಂದು ನೀವು ಎದುರಿಸಬಹುದಾದ ಸವಾಲುಗಳು ಮತ್ತು ಅದಕ್ಕೆ ಪರಿಹಾರಗಳ ಬಗ್ಗೆ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ.

ಟಿವಿ 9 ಕನ್ನಡ 6 Dec 2025 12:46 am